ಲೋಣಿ(ಉತ್ತರಪ್ರದೇಶ)ಯಲ್ಲಿನ ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರವರು ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು

ಗಾಝಿಯಾಬಾದ (ಉತ್ತರಪ್ರದೇಶ) – ಅನುಮತಿಯ ಹೊರತು ಲೋಣಿಯಲ್ಲಿ ಒಂದೇ ಒಂದು ಮಾಂಸ ಮಾರಾಟದ ಅಂಗಡಿಗಳು ಹಾಗೂ ಉಪಹಾರಗೃಹಗಳು ಕಾಣಿಸಬಾರದು; ಏಕೆಂದರೆ ಇಲ್ಲಿ ರಾಮರಾಜ್ಯವಿದೆ, ಎಂದು ಲೋಣಿಯಲ್ಲಿನ ಭಾಜಪದ ಹೊಸದಾಗಿ ಆಯ್ಕೆಯಾದ ಶಾಸಕರಾದ ನಂದಕಿಶೋರ ಗರ್ಜರರು ಸರಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
#BJP‘s #Loni MLA triggers row, calls for blanket ban on meat shopshttps://t.co/fLAC7jkPom
— India TV (@indiatvnews) March 12, 2022
೧. ಶಾಸಕರಾದ ಗುರ್ಜರರವರು ಮಾತನ್ನು ಮುಂದುವರಿಸುತ್ತ, ಅಮಲು ಪದಾರ್ಥಗಳ ಧಂದೆ ಮತ್ತು ತಪ್ಪುಆಚರಣೆಗಳು ಆಗಬಾರದು, ಹಾಗೆಯೇ ಜನರಿಗೆ ಅಭಿಮಾನವೆನಿಸುವ ಕಾನೂನು ಮತ್ತು ಸುವ್ಯವಸ್ಥೆಯಿರಬೇಕು. ಕಳೆದ ೫ ವರ್ಷಗಳಲ್ಲಿ ಕಾನೂನು ಸುವ್ಯವಸ್ಥೆಯು ಇದ್ದ ಹಾಗೆಯೇ ಇರಬೇಕು. ಕೆಲವು ಅಧಿಕಾರಿಗಳು ಹೆಸರು ಕೆಡಿಸುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ, ಅವರು ಜಾಗರೂಕತೆಯಿಂದ ಇರಬೇಕು, ಎಂದು ಎಚ್ಚರಿಕೆ ನೀಡಿದರು.
೨. ಲೋಣಿಯಲ್ಲಿನ ಭೂ-ಕಬಳಿಕೆಗಳ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡುವುದಾಗಿ ಅವರು ಹೇಳಿದರು. ಅದರೊಂದಿಗೆ ‘ಲೋಣಿಯಲ್ಲಿ ರಾಮರಾಜ್ಯ ಬೇಕಿದೆ. ಆದುದರಿಂದ ಹಾಲು ತುಪ್ಪ ತಿನ್ನಿ ಮತ್ತು ಎಚ್ಚರಿಕೆಯಿಂದಿರಿ’ ಎಂದು ಅವರು ಹೇಳಿದರು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!