ಡುಮರಿಯಾಗಂಜ (ಉತ್ತರಪ್ರದೇಶ )ಇಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಸೈಯದ್ ಖಾತುನ ಇವರ ವಿಜಯದ ಸಮಯದಲ್ಲಿ `ಪಾಕಿಸ್ತಾನ ಜಿಂದಾಬಾದ’ನ ಘೋಷಣೆ !

ಭಾಜಪದ ಅಭ್ಯರ್ಥಿಯ ವಿರುದ್ಧ ಬೈಗುಳ !

ಪೋಲಿಸರಿಂದ ದೂರು ದಾಖಲು

ಇಂತಹ ದೇಶದ್ರೋಹಿಗಳಿಗೆ ಮತ್ತು ಅವರ ಬೆಂಬಲಿಗರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯಾಗಲು ರಾಜ್ಯ ಸರಕಾರ ಪ್ರಯತ್ನಿಸಬೇಕು !- ಸಂಪಾದಕರು 

ಸಮಾಜವಾದಿ ಪಕ್ಷದ ಅಭ್ಯರ್ಥಿ ಸೈಯದ್ ಖಾತುನ (ಬಲ)

ಸಿದ್ದಾರ್ಥನಗರ (ಉತ್ತರಪ್ರದೇಶ) – ಇಲ್ಲಿಯ ಡುಮರಿಯಾಗಂಜ ಚುನಾವಣಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸೈಯದ್ ಖಾತುನ ಇವರ ವಿಜಯದ ನಂತರ ಸಮೂಹದಿಂದ `ಪಾಕಿಸ್ತಾನ ಜಿಂದಾಬಾದ್’ ಮತ್ತು `ಇಸ್ಲಾಂ ಜಿಂದಾಬಾದ’ ಎಂಬ ಘೋಷಣೆ ನೀಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಇದೇ ಚುನಾವಣಾ ಕ್ಷೇತ್ರದ ಇನ್ನೊಂದು ವಿಡಿಯೋ ಬೆಳಕಿಗೆ ಬಂದಿದೆ. ಇದರಲ್ಲಿ ಸಮಾಜವಾದಿ ಪಕ್ಷದ ಟೋಪಿ ಹಾಕಿಕೊಂಡಿರುವ ಕೆಲವು ಜನರು ಕಾಣಿಸುತ್ತಿದ್ದು ಅವರು ಅಲ್ಲಿಯ ಭಾಜಪದ ಅಭ್ಯರ್ಥಿ ರಾಘವೇಂದ್ರ ಸಿಂಹ ಇವರಿಗೆ ತಾಯಿಗೆ ಸಂಬಂಧಿಸಿದ ಬೈಗುಳಗಳನ್ನು ಬೈಯುತ್ತಿರುವುದು ಕೇಳಿಸುತ್ತಿದೆ. ಈ ಪ್ರಕರಣದ ವಿರುದ್ಧ ದೂರು ದಾಖಲಿಸಲಾಗಿದೆ.