ಮಧ್ಯಪ್ರದೇಶದ ಭಿಂಡನಲ್ಲಿನ ಘಟನೆ !
ಮಧ್ಯಪ್ರದೇಶದಲ್ಲಿ ಲವ್ ಜಿಹಾದನ ಕಾಯಿದೆ ಇದ್ದೂ ಕೂಡ ಮತಾಂಧರು ಹಿಂದು ಹೆಣ್ಣುಮಕ್ಕಳಿಗೆ ಮೋಸ ಮಾಡಿ ಅವರ ಜೀವನವನ್ನೇ ಧ್ವಂಸ ಮಾಡುತ್ತಾರೆ, ಇದು ಖೇಧಕರವಾಗಿದೆ ! ಇಂತಹ ಉದ್ಧಟತನ ಮತಾಂಧರಿಗೆ ಕಠಿಣ ಶಿಕ್ಷೆಯಾಗುವುದು ಅಗತ್ಯ !

ಭಿಂಡ (ಮಧ್ಯಪ್ರದೇಶ) – ಇಲ್ಲಿನ ಮಹಂಮದ ಖಾನ ಎಂಬ ಮತಾಂಧನು ಅವನ ಪರಿಚಯವನ್ನು ಮುಚ್ಚಿಟ್ಟು ಅಪ್ರಾಪ್ತ ಹಿಂದು ಹುಡುಗಿಯೊಂದಿಗೆ ಪರಿಚಯ ಮಾಡಿಕೊಂಡನು. ನಂತರ ವಿವಾಹದ ಆಸೆ ಒಡ್ಡಿ ಅಕೆಗೆ ಲೈಂಗಿಕ ಕಿರುಕುಳ ನೀಡಿದನು. ಮಹಂಮದ ಖಾನ್ನಿಗೆ ಮದುವೆಯಾಗಿದ್ದು ಆತ ೪ ಹೆಣ್ಣುಮಕ್ಕಳ ತಂದೆಯಾಗಿದ್ದಾನೆ.
ಪೊಲೀಸರು ನೀಡಿರುವ ಮಾಹಿತಿಗೆ ಪ್ರಕಾರ ೧೦ ತಿಂಗಳ ಹಿಂದೆ ಸಂಚಾರವಾಣಿಯ ಮೂಲಕ ಓರ್ವ ಹಿಂದು ಹುಡುಗಿಯು ಮಹಂಮದ ಖಾನ್ನ ಸಂಪರ್ಕಕ್ಕೆ ಬಂದಳು. ಅನಂತರ ಇಬ್ಬರ ಪರಿಚಯವಾಯಿತು. ಆ ಸಮಯದಲ್ಲಿ ಮಹಂಮದ ಖಾನ್ನು ತನ್ನ ಹೆಸರು ‘ನಿಶಾಂತ ಕುಮಾರ’ ಎಂದು ಹೇಳಿದನು. ಕೆಲವು ದಿನಗಳ ನಂತರ ಮಹಂದ ಖಾನ್ನು ಆ ಹುಡುಗಿಯನ್ನು ವಿವಾಹವಾಗುವ ವಚನ ನೀಡಿ ಅವಳಿಗೆ ಲೈಂಗಿಕ ಕಿರುಕುಳ ನೀಡಿದನು. ಅನಂತರ ಕೆಲವು ತಿಂಗಳ ಬಳಿಕ ಆ ಹುಡುಗಿಯು ಮಹಂಮದ ಖಾನ್ನ ಮತದಾನ ಗುರುತಿನ ಚೀಟಿಯನ್ನು ನೋಡಿದ ಬಳಿಕ ಅವಳಿಗೆ ಅವನ ನಿಜವಾದ ಹೆಸರು ತಿಳಿಯಿತು. ಸತ್ಯ ತಿಳಿದ ತಕ್ಷಣ ಆ ಹುಡುಗಿಯು ಮಹಂಮದ ಖಾನ್ನೊಂದಿಗೆ ಸಂಪರ್ಕವನ್ನು ಮುರಿದಳು. ಆ ಸಮಯದಲ್ಲಿ ಆತ ಹುಡುಗಿಯ ಮನೆಯಲ್ಲಿ ಗಲಾಟೆ ಮಾಡಿದನು. ಗಲಾಟೆಯ ಶಬ್ಧ ಕೇಳಿ ಅಕ್ಕಪಕ್ಕದ ಜನರು ಬಂದು ಮಹಂಮದ ಖಾನ್ನನ್ನು ಥಳಿಸಿದರು ಹಾಗೂ ಆತನನ್ನು ಪೊಲೀಸರಿಗೆ ಒಪ್ಪಿಸಿದರು.
भिंड में मोहम्मद वलि खान ने ‘निशांत’ बन कर पिछले 10 महीनों में शादी का वादा कर के किशोरी के साथ कई बार बलात्कार किया। वोटर आईडी से खुला राज।https://t.co/AGbdf0zaUV
— ऑपइंडिया (@OpIndia_in) March 8, 2022
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !