ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇವರಿಂದ ಮಾಹಿತಿ
ಕಾಶ್ಮೀರಿ ಹಿಂದುಗಳ ಆಘಾತಕಾರಿ ಸತ್ಯ ಬೆಳಕಿಗೆ ತರುವ ಚಲನಚಿತ್ರದ ಪ್ರಸಿದ್ಧ ಯಾರೂ ಮಾಡುವುದಿಲ್ಲ, ಎಂಬುದನ್ನು ಅರಿತು ರಾಷ್ಟ್ರಪ್ರೇಮಿ ಭಾರತೀಯರೇ ಇದಕ್ಕಾಗಿ ಮುಂದಾಳತ್ವ ವಹಿಸಬೇಕು !

ಮುಂಬಯಿ – ವಿವೇಕ್ ಅಗ್ನಿಹೋತ್ರಿ ಇವರು ನಿರ್ದೇಶಿಸಿರುವ ‘ದ ಕಾಶ್ಮೀರ ಫೈಲ್’ ಚಲನಚಿತ್ರದ ಪ್ರಸಿದ್ಧಿಗಾಗಿ ‘ದ ಕಪಿಲ್ ಶರ್ಮಾ ಶೋ’ ಈ ‘ರಿಯಾಲಿಟಿ ಶೋ’ನಲ್ಲಿ (ಪ್ರತ್ಯಕ್ಷ ಭೇಟಿ ಮಾಡುವ ಕಾರ್ಯಕ್ರಮ) ಕಪಿಲ್ ಶರ್ಮ ಇವರು ನಿರಾಕರಿಸಿದ್ದಾರೆ, ಎಂದು ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಇವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಚಲನಚಿತ್ರದಲ್ಲಿ ದೊಡ್ಡ ವೃತ್ತಿಪರ ಕಲಾವಿಧರು ಇರದಿರುವುದರಿಂದ ಶರ್ಮಾ ಇವರು ಪ್ರಸಿದ್ಧಿ ನೀಡಲು ನಿರಾಕರಿಸಿದ್ದಾರೆಂದು ಅಗ್ನಿಹೋತ್ರಿಯವರ ಹೇಳಿಕೆಯಾಗಿದೆ. ಒಬ್ಬ ವ್ಯಕ್ತಿ ಅಗ್ನಿಹೋತ್ರಿ ಇವರಿಗೆ ‘ದ ಕಪಿಲ್ ಶರ್ಮಾ ಶೋ’ನಲ್ಲಿ ಚಲನಚಿತ್ರದ ಜಾಹಿರಾತು ಮಾಡಿ ಪ್ರಸಿದ್ಧಿ ಪಡಿಸುವ ಬಗ್ಗೆ ಸಲಹೆ ನೀಡಿದ್ದರು. ಈ ಬಗ್ಗೆ ಉತ್ತರ ನೀಡುವಾಗ ಅವರು ಈ ಮೇಲಿನಂತೆ ಹೇಳಿದರು.
ಅಗ್ನಿಹೋತ್ರಿ ತಮ್ಮ ಮಾತು ಮುಂದುವರೆಸುತ್ತಾ, “ಹಿಂದಿ ಚಿತ್ರರಂಗದ ಅಷ್ಟಾಗಿ ಗುರುತಿಸಿಕೊಳ್ಳದಿರುವ ನಿರ್ದೇಶಕರು, ಲೇಖಕರು ಮತ್ತು ಒಳ್ಳೆಯ ಕಲಾವಿದರು ಇವರಿಗೆ ಪ್ರಸ್ತುತ ಯಾರು ಬೆಲೆ ಕೊಡುವುದಿಲ್ಲ. ಶರ್ಮಾ ಅವರು ತಮ್ಮ ಕಾರ್ಯಕ್ರಮದಲ್ಲಿ ಯಾರಿಗೆ ಕರೆಯಬೇಕು ? ಈ ನಿರ್ಣಯ ಸಂಪೂರ್ಣವಾಗಿ ಅವರೇ ಮತ್ತು ನಿರ್ಮಾಪಕರದಾಗಿರುತ್ತದೆ. ಒಂದು ಸಾರಿ ಹಿರಿಯ ನಟ ಅಮಿತಾಬ್ ಬಚ್ಚನ್ ಮ. ಗಾಂಧಿ ಇವರ ಬಗ್ಗೆ, ಅವರು ರಾಜ ನಾವು ರಂಕ.” ಎಂದು ಹೇಳಿದ್ದರು.
I don’t get to decide who should be invited on @KapilSharmaK9 show. It’s his and his producers choice whom he wants to invite. As far as Bollywood is concerned, I’d say what once Mr. Bachchan was quoted saying about Gandhis: वो राजा हैं हम रंक… https://t.co/la8y9FhB6l
— Vivek Ranjan Agnihotri (@vivekagnihotri) March 7, 2022
ಅಗ್ನಿಹೋತ್ರಿ ಅವರ ಟ್ವೀಟ್ನಂತರ ಅನೇಕರು ಕಪಿಲ್ ಶರ್ಮಾ ಇವರನ್ನು ವಿರೋಧಿಸಿ ಅವರ ಮೇಲೆ ಟೀಕೆ ಮಾಡುತ್ತಿದ್ದಾರೆ. ‘ದ ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರ ಕಾಶ್ಮೀರಿ ಹಿಂದುಗಳಿಗೆ ಸಂಬಂಧಿಸಿದೆ. ೧೯೯೦ ರ ದಶಕದಲ್ಲಿ ಕಾಶ್ಮೀರಿ ಹಿಂದುಗಳ ಮೇಲೆ ನಡೆದಿದ್ದ ದೌರ್ಜನ್ಯ ಮತ್ತು ಅವರ ಹತ್ಯೆಗಳು, ಈ ಬಗ್ಗೆ ಚಲನಚಿತ್ರ ಆಗಿದೆ. ಮಾರ್ಚ್ ೧೧ ರಂದು ಈ ಚಲನಚಿತ್ರ ಬಿಡುಗಡೆ ಮಾಡಲಾಗುವುದು.
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!