ತಮಿಳುನಾಡಿನ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಮೃತದೇಹವನ್ನು ಮಣ್ಣುಮಾಡುವ ಮತಾಂಧ ಕ್ರೈಸ್ತರ ಪ್ರಯತ್ನವನ್ನು ತಡೆದ ಹಿಂದುತ್ವನಿಷ್ಠರು !

ತಮಿಳುನಾಡಿನಲ್ಲಿ ಹಿಂದುದ್ವೇಶೀ ದ್ರಮುಕದ ಸರಕಾರವು ಅಧಿಕಾರದಲ್ಲಿರುವುದರಿಂದ ಅಲ್ಲಿ ಮತಾಂಧ ಕ್ರೈಸ್ತರ ಕಾರುಬಾರು ಬಲವಾಗಿದೆ. ಅಲ್ಲಿ ಹಿಂದು ಧರ್ಮದ ಮೇಲಾಗುತ್ತಿರುವ ಆಘಾತವನ್ನು ತಡೆಯಲು ಪರಿಣಾಮಕಾರಕ ಹಿಂದು ಸಂಘಟನೆಯ ಅಗತ್ಯವಿದೆ !

ಚೆನ್ನೈ – ತಮಿಳುನಾಡಿನಲ್ಲಿನ ತಿರನೆಲವೇಲೀ ಜಲ್ಲೆಯಲ್ಲಿರುವ ಶಂರಾನಕೊವಿಲನಲ್ಲಿ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಓರ್ವ ಕ್ರೈಸ್ತನ ಮೃತದೇಹವನ್ನು ಮಣ್ಣು ಮಾಡುವ ಮತಾಂಧ ಕ್ರೈಸ್ತರ ಪ್ರಯತ್ನವನ್ನು ಹಿಂದುತ್ವನಿಷ್ಠರು ತಡೆದರು. ಹಿಂದು ಸಂಘಟನೆಗಳು ಅದನ್ನು ವಿರೋಧಿಸಿದ ಬಳಿಕ ಪಾದ್ರಿ ಹಾಗೂ ಇತರ ಕ್ರೈಸ್ತರು ಆ ಘಟನೆಯನ್ನು ನಿಶೇಧಿಸಲು ಶಂಕರನಕೊವಿಲ-ತಿರುನಲವೇಲೀ ಮಹಾಮಾರ್ಗದ ಮೇಲೆ ಮೃತದೇಹವನ್ನಿಟ್ಟರು. ಆಗ ಮತಾಂಧ ಕ್ರೈಸ್ತರು ಜಲವಾಹಿನಿಯನ್ನು ಧ್ವಂಸಗೊಳಿಸಿದರು. ಆ ಘಟನೆಯ ವ್ಹಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಯಿತು.

೧. ಮತಾಂಧ ಕ್ರೈಸ್ತರ ಈ ಕೃತಿಯಿಂದ ಘಟನಾಸ್ಥಳದಲ್ಲಿ ಒತ್ತಡ ನಿರ್ಮಾಣವಾದಾಗ ಪೊಲೀಸರು ಘಟನಾಸ್ಥಳಕ್ಕೆ ತಲುಪಿದರು. ಆ ಸಮಯದಲ್ಲಿ ಪಾದ್ರಿ ಹಾಗೂ ಇತರ ಕ್ರೈಸ್ತರು, ‘ಸ್ಮಶಾನಭೂಮಿಗಾಗಿ ಜಾಗ ನೀಡದೆ ಇರುವುದರಿಂದ ಮೃತದೇಹವನ್ನು ಎಲ್ಲಿ ಮಣ್ಣು ಮಾಡಬೇಕು?’, ಎಂದು ಪೊಲೀಸರನ್ನು ಪ್ರಶ್ನಿಸಿದರು. (ಕ್ರೈಸ್ತರ ಮೃತದೇಹವನ್ನು ಮಣ್ಣು ಮಾಡಲು ಸ್ಥಳ ಸಿಗಲಿಲ್ಲ’ ಎಂಬುದಕ್ಕಾಗಿ ದೇವಾಲಯದ ಒಡೆತನವಿರುವ ಭೂಮಿಯಲ್ಲಿ ಮಣ್ಣು ಮಾಡುವ ಅಧಿಕಾರವನ್ನು ಅವರಿಗೆ ಯಾರು ನೀಡಿದರು? ಇದೇ ಕೃತಿ ಒಂದು ವೇಳೆ ಚರ್ಚಗೆ ಸೇರಿರುವ ಭೂಮಿಯ ಏಕೆ ಮಾಡಲಿಲ್ಲ? – ಸಂಪಾದಕರು)

೨. ಆ ಸಮಯದಲ್ಲಿ ಪೊಲೀಸರು ಸಮಾಧಾನದಿಂದ ‘ನಾವು ಸಂಬಂಧಪಟ್ಟ ಭೂಮಿಯಲ್ಲಿ ಮೃತದೇಹವನ್ನು ಮಣ್ಣು ಮಾಡಲು ಅನುಮತಿ ನೀಡಲು ಸಾಧ್ಯವಿಲ್ಲ; ಏಕೆಂದರೆ ಆ ಭೂಮಿಯನ್ನು ಸ್ಮಶಾನಭೂಮಿಯೆಂದು ಬಳಸುವ ಅನುಮತಿ ಇದೆ ಎಂದು ತೋರಿಸುವಂತಹ ಯಾವುದೇ ಕಾಗದಪತ್ರವಿಲ್ಲ’, ಎಂದು ಹೇಳಿದರು.

೩. ಆದರೂ ಕೂಡ ಮತಾಂಧ ಕ್ರೈಸ್ತರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅನಂತರ ಪೊಲೀಸು ನಿರೀಕ್ಷಕರು ಆ ಪಾದ್ರಿಯನ್ನು ಅಲ್ಲಿಂದ ಹೊರಟು ಹೋಗಲು ಹೇಳಿದರು ಹಾಗೂ ಮೃತರ ಕುಟುಂಬದವರನ್ನು ಕರೆಯಲು ಸಂದೇಶ ನೀಡಿದರು.

೪. ಇದರಿಂದ ಸಿಟ್ಟಾದ ಮತಾಂಧ ಕ್ರೈಸ್ತರು, ‘ನೀವು ನಿಮ್ಮ ಅಧಿಕಾರವನ್ನು ತಪ್ಪಾಗಿ ಬಳಸುತ್ತಿದ್ದೀರಿ’. ಎಂದು ಹೇಳಿದರು. ಆಗ ಪೊಲೀಸು ನಿರೀಕ್ಷಕರು ‘ಕಾಯಿದೆಯಂತೆ ಕಾರ್ಯಾಚರಣೆ ಮಾಡಲು ನಿಮನ್ನು ತಡೆಯುವ ಅಧಿಕಾರ ನನಗಿದೆ’. ಎಂದು ಗೆದರಿದರು. ‘ಈ ಹಿಂದೆ ಕ್ರೈಸ್ತರು ಮೃತರನ್ನು ಎಲ್ಲಿ ಮಣ್ಣುಮಾಡುತ್ತಿದ್ದರು?’, ಎಂದು ಪ್ರಶ್ನಿಸಿದರು. ಅನಂತರ ಮತಾಂಧ ಕ್ರೈಸ್ತರು ಸುಮ್ಮನಾದರು.

೫. ‘ಹಿಂದು ಮುನ್ನಾನೀ’ (‘ಹಿಂದು ಮನ್ನಡೆ) ಎಂಬ ಸಂಘಟನೆಯ ಅಧಿಕಾರಿಗಳು “ಅಲ್ಲಿನ ಚರ್ಚ ಅನಧಿಕೃತವಾಗಿದೆ. ಪಾದ್ರಿ ಥಾಂಗಾ ಪಾಂಡೀ ಅಲ್ಲಿರುವ ಹಿಂದೂಗಳನ್ನು ಮತಾಂತರಗೊಳಿಸುತ್ತಿರುವುದಾಗಿ ಮಾಹಿತಿ ಸಿಕ್ಕಿದೆ. ಅವರು ಸರಕಾರೀ ಭೂಮಿಯ ಮೇಲೆ ಅತಿಕ್ರಮಿಸಿ ಅದು ಪೆನ್ಟೆಕೊಸ್ಟಲ ಚರ್ಚನದ್ದಾಗಿರುವುದರ ಫಲಕ ಹಾಕಿದ್ದಾರೆ.”