ಮುಲತಃ ಮ್ಯಾನ್ಮಾರ್ನ ಮತಾಂಧನಿಗೆ ಭಾರತೀಯ ಪೌರತ್ವ ಸಿಕ್ಕಿತು !
ನಕಲಿ ದಾಖಲೆಗಳ ಆಧಾರದ ಮೇಲೆ ಒಳನುಸುಳುವವರಿಗೆ ಭಾರತೀಯ ಪೌರತ್ವ ಸಿಗುವುದರ ಹಿಂದೆ ಭ್ರಷ್ಟ ಆಡಳಿತಾತ್ಮಕ ಅಧಿಕಾರಿಗಳು ಸಹ ಹೊಣೆಗಾರರಾಗಿದ್ದಾರೆ. ಅಂತಹವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನಕಲಿ ದಾಖಲೆಗಳ ಆಧಾರದ ಮೇಲೆ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಮುಸ್ಲಿಮರಿಗೆ ನುಸುಳಲು ಭಾರತೀಯ ಪೌರತ್ವ ನೀಡಲು ಯತ್ನಿಸಿದ ಮೊಹಮ್ಮದ್ ರಫಿಕ್ ಅಲಿಯಾಸ್ ರಫಿಕ್ ಉಲ್ ಇಸ್ಲಾಂನನ್ನು ಉಗ್ರ ನಿಗ್ರಹ ದಳ ಇಲ್ಲಿನ ರೈಲ್ವೆ ನಿಲ್ದಾಣದಿಂದ ಬಂಧಿಸಿದೆ.
यूपी ATS ने बांग्लादेशी नागरिकों और रोहिंग्या को जाली दस्तावेजों से भारतीय नागरिकता दिलाने और मानव तस्करी रैकेट से जुड़े सक्रिय सदस्य को गिरफ्तार किया.#UttarPradesh (@aap_ka_santosh)https://t.co/SPBiKwxlep
— AajTak (@aajtak) February 27, 2022
ಜೈಲಿನಲ್ಲಿ ಬಂಧಿತರಾಗಿರುವ ರೊಹಿಂಗ್ಯಾ ಮುಸ್ಲಿಮರಿಗೂ ರಫಿಕ್ ಜಾಮೀನು ಸಿಗುವಂತೆ ಮಾಡುತ್ತಿದ್ದನು. ಅವನು ಮ್ಯಾನ್ಮಾರ್ ಮೂಲದವನಾಗಿದ್ದಾನೆ. ಆತ ಅಕ್ರಮವಾಗಿ ಭಾರತದ ಗಡಿಯಾಚೆಗಿನ ಬಂಗಾಲದ ನದಿಯಾ ಜಿಲ್ಲೆಯಲ್ಲಿ ಇರುತ್ತಿದ್ದ. ಆತ ನಕಲಿ ದಾಖಲೆಗಳ ಮೂಲಕ ಭಾರತೀಯ ಪೌರತ್ವ ಪಡೆದಿದ್ದನು. ಹಾಗೂ ಭಾಗ್ಯನಗರದಲ್ಲಿಯ ಮಾಂಸ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿ ಅವನು ನೂರ್ನ ಸಂಪರ್ಕಕ್ಕೆ ಬಂದನು. ನಂತರ ನಕಲಿ ದಾಖಲೆಗಳ ಆಧಾರದಿಂದ ಪೌರತ್ವ ಮತ್ತು ಜಾಮೀನು ಕೊಡಿಸುವ ಕೆಲಸ ಮಾಡಲು ಪ್ರಾರಂಭಿಸಿದನು. ಅವನು ಪ್ರತಿಯೊಬ್ಬರ ಜಾಮೀನಿಗಾಗಿ ೧೫ ರಿಂದ ೨೦ ಸಾವಿರ ರೂಪಾಯಿ ಪಡೆಯುತ್ತಿದ್ದನು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!