ಮಹಾವಿದ್ಯಾಲಯದ ಪ್ರಾಧ್ಯಾಪಕರನ್ನು ಕೊಲ್ಲುವ ಬೆದರಿಕೆ
|
* ಹಿಜಾಬಿನ ವಾದವು ಈಗ ಹತ್ಯೆಯ ಹಂತದ ವರೆಗೆ ತಲುಪಿದೆ, ಇದರಿಂದ ಇದರ ಹಿಂದೆ ಜಿಹಾದಿ ಷಡ್ಯಂತ್ರವಿದೆ, ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿನ ಭಾಜಪ ಸರಕಾರವು ಈ ಷಡ್ಯಂತ್ರವನ್ನು ಧ್ವಂಸಗೊಳಿಸಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು * ಸರಕಾರವು ನ್ಯಾಯಾಲಯದ ಆದೇಶದ ವಿರುದ್ಧ ಮಹಾವಿದ್ಯಾಲಯಗಳಲ್ಲಿ ಹಿಜಾಬ ಧರಿಸಿ ಬರುವವರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರನ್ನು ಏಕೆ ಬಂಧಿಸುತ್ತಿಲ್ಲ ? – ಸಂಪಾದಕರು |

ಮಡಿಕೇರಿ (ಕರ್ನಾಟಕ) – ಹಿಜಾಬ ಧರಿಸಿ ಬಂದಂತಹ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸಿದ್ದರಿಂದ ಅಲ್ಲಿನ ಒಂದು ಮಹಾವಿದ್ಯಾಲಯದ ವಿಜಯ ಎಂಬ ಹೆಸರಿನ ಪ್ರಾಧ್ಯಾಪಕರನ್ನು ಕೊಲ್ಲುವುದಾಗಿ ಬೆದರಿಕೆ ನೀಡಲಾಗಿದೆ. ಈ ವಿಷಯದಲ್ಲಿ ಪ್ರಾಧ್ಯಾಪಕರು ಪೊಲೀಸರ ಬಳಿ ದೂರನ್ನು ನೋಂದಾಯಿಸಿದ್ದಾರೆ. ಈ ಬೆದರಿಕೆಯನ್ನು ಸಾಮಾಜಿಕ ಮಾಧ್ಯಮಗಳಿಂದ ನೀಡಲಾಗಿರುವುದರಿಂದ ಸಾಯಬರ ಶಾಖೆಯ ಪೊಲೀಸರಿಂದ ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ.
https://t.co/e6K69ADpUX
ಹಿಜಾಬ್ (Hijab) ಧರಿಸಿಯೇ ತರಗತಿಗೆ ಪ್ರವೇಶಿಸಲು ಪ್ರಯತ್ನಿಸಿದ್ದ ವಿದ್ಯಾರ್ಥಿನಿಯರ (Students) ವಿರುದ್ಧ ಶುಕ್ರವಾರ ಗರಂ ಆಗಿದ್ದ ಪ್ರಾಂಶುಪಾಲರಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಕೊಲೆ ಬೆದರಿಕೆ ಹಾಕಲಾಗಿದೆ.#HijabRow #Madikeri #KannadaNews— News18 Kannada (@News18Kannada) February 20, 2022
ಹಿಜಾಬಿನ ಹಿಂದೆ ಅಂತರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯ ಕೈವಾಡ ! – ಕಂದಾಯ ಮಂತ್ರಿಗಳಾದ ಆರ್. ಅಶೋಕರವರ ಹೇಳಿಕೆ

ಹಿಜಾಬಿನ ಪ್ರಕರಣದ ವಿಷಯದಲ್ಲಿ ರಾಜ್ಯ ಕಂದಾಯ ಮಂತ್ರಿಗಳಾದ ಆರ್. ಅಶೋಕರವರು ‘ಒಂದು ಚಿಕ್ಕ ನಗರವಾದ ಉಡುಪಿಯಲ್ಲಿ ನಡೆದ ಹಿಜಾಬಿನ ವಾದ ಒಂದೇ ವಾರದಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪಿರುವುದು ಹೇಗೆ ? ವಿದ್ಯಾರ್ಥಿಗಳು ಹೀಗೆ ಮಾಡಲಾರರು. ಇದರ ಹಿಂದೆ ಅಂತರಾಷ್ಟ್ಟೀಯ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಪ್ರಮುಖ ಪಾತ್ರವಿದೆ. ಇದು ಒಂದು ಭಯೋತ್ಪಾದಕ ಸಂಘಟನೆಯ ಕೆಲಸವೇ ಆಗಿದೆ. ಈ ಸಂಘಟನೆಯು ಇರಾಕ, ಇರಾನ ಮತ್ತು ಪಾಕಿಸ್ತಾನಗಳಲ್ಲಿ ಸಕ್ರೀಯವಾಗಿದೆ. ಈ ಪ್ರಕರಣಕ್ಕೆ ಭಯೋತ್ಪಾದನೆಯೊಂದಿಗೆ ಇರುವ ಸಂಬಂಧವನ್ನು ಬಹಿರಂಗಗೊಳಿಸುವ ಆವಶ್ಯಕತೆಯಿದ್ದು ಅದನ್ನು ಬಹಿರಂಗಗೊಳಿಸಲಾಗುವುದು’ ಎಂದು ಹೇಳಿದರು.
Foreign interference escalated hijab row, says Karnataka minister R Ashok https://t.co/kgP4s7AR0M
— TOI Cities (@TOICitiesNews) February 19, 2022
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!