ಮಹಾವಿದ್ಯಾಲಯದ ಪ್ರಾಧ್ಯಾಪಕರನ್ನು ಕೊಲ್ಲುವ ಬೆದರಿಕೆ
|
* ಹಿಜಾಬಿನ ವಾದವು ಈಗ ಹತ್ಯೆಯ ಹಂತದ ವರೆಗೆ ತಲುಪಿದೆ, ಇದರಿಂದ ಇದರ ಹಿಂದೆ ಜಿಹಾದಿ ಷಡ್ಯಂತ್ರವಿದೆ, ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿನ ಭಾಜಪ ಸರಕಾರವು ಈ ಷಡ್ಯಂತ್ರವನ್ನು ಧ್ವಂಸಗೊಳಿಸಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು * ಸರಕಾರವು ನ್ಯಾಯಾಲಯದ ಆದೇಶದ ವಿರುದ್ಧ ಮಹಾವಿದ್ಯಾಲಯಗಳಲ್ಲಿ ಹಿಜಾಬ ಧರಿಸಿ ಬರುವವರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರನ್ನು ಏಕೆ ಬಂಧಿಸುತ್ತಿಲ್ಲ ? – ಸಂಪಾದಕರು |

ಮಡಿಕೇರಿ (ಕರ್ನಾಟಕ) – ಹಿಜಾಬ ಧರಿಸಿ ಬಂದಂತಹ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸಿದ್ದರಿಂದ ಅಲ್ಲಿನ ಒಂದು ಮಹಾವಿದ್ಯಾಲಯದ ವಿಜಯ ಎಂಬ ಹೆಸರಿನ ಪ್ರಾಧ್ಯಾಪಕರನ್ನು ಕೊಲ್ಲುವುದಾಗಿ ಬೆದರಿಕೆ ನೀಡಲಾಗಿದೆ. ಈ ವಿಷಯದಲ್ಲಿ ಪ್ರಾಧ್ಯಾಪಕರು ಪೊಲೀಸರ ಬಳಿ ದೂರನ್ನು ನೋಂದಾಯಿಸಿದ್ದಾರೆ. ಈ ಬೆದರಿಕೆಯನ್ನು ಸಾಮಾಜಿಕ ಮಾಧ್ಯಮಗಳಿಂದ ನೀಡಲಾಗಿರುವುದರಿಂದ ಸಾಯಬರ ಶಾಖೆಯ ಪೊಲೀಸರಿಂದ ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ.
https://t.co/e6K69ADpUX
ಹಿಜಾಬ್ (Hijab) ಧರಿಸಿಯೇ ತರಗತಿಗೆ ಪ್ರವೇಶಿಸಲು ಪ್ರಯತ್ನಿಸಿದ್ದ ವಿದ್ಯಾರ್ಥಿನಿಯರ (Students) ವಿರುದ್ಧ ಶುಕ್ರವಾರ ಗರಂ ಆಗಿದ್ದ ಪ್ರಾಂಶುಪಾಲರಿಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಕೊಲೆ ಬೆದರಿಕೆ ಹಾಕಲಾಗಿದೆ.#HijabRow #Madikeri #KannadaNews— News18 Kannada (@News18Kannada) February 20, 2022
ಹಿಜಾಬಿನ ಹಿಂದೆ ಅಂತರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಯ ಕೈವಾಡ ! – ಕಂದಾಯ ಮಂತ್ರಿಗಳಾದ ಆರ್. ಅಶೋಕರವರ ಹೇಳಿಕೆ

ಹಿಜಾಬಿನ ಪ್ರಕರಣದ ವಿಷಯದಲ್ಲಿ ರಾಜ್ಯ ಕಂದಾಯ ಮಂತ್ರಿಗಳಾದ ಆರ್. ಅಶೋಕರವರು ‘ಒಂದು ಚಿಕ್ಕ ನಗರವಾದ ಉಡುಪಿಯಲ್ಲಿ ನಡೆದ ಹಿಜಾಬಿನ ವಾದ ಒಂದೇ ವಾರದಲ್ಲಿ ಅಂತರಾಷ್ಟ್ರೀಯ ಮಟ್ಟವನ್ನು ತಲುಪಿರುವುದು ಹೇಗೆ ? ವಿದ್ಯಾರ್ಥಿಗಳು ಹೀಗೆ ಮಾಡಲಾರರು. ಇದರ ಹಿಂದೆ ಅಂತರಾಷ್ಟ್ಟೀಯ ಜಿಹಾದಿ ಭಯೋತ್ಪಾದಕ ಸಂಘಟನೆಗಳ ಪ್ರಮುಖ ಪಾತ್ರವಿದೆ. ಇದು ಒಂದು ಭಯೋತ್ಪಾದಕ ಸಂಘಟನೆಯ ಕೆಲಸವೇ ಆಗಿದೆ. ಈ ಸಂಘಟನೆಯು ಇರಾಕ, ಇರಾನ ಮತ್ತು ಪಾಕಿಸ್ತಾನಗಳಲ್ಲಿ ಸಕ್ರೀಯವಾಗಿದೆ. ಈ ಪ್ರಕರಣಕ್ಕೆ ಭಯೋತ್ಪಾದನೆಯೊಂದಿಗೆ ಇರುವ ಸಂಬಂಧವನ್ನು ಬಹಿರಂಗಗೊಳಿಸುವ ಆವಶ್ಯಕತೆಯಿದ್ದು ಅದನ್ನು ಬಹಿರಂಗಗೊಳಿಸಲಾಗುವುದು’ ಎಂದು ಹೇಳಿದರು.
Foreign interference escalated hijab row, says Karnataka minister R Ashok https://t.co/kgP4s7AR0M
— TOI Cities (@TOICitiesNews) February 19, 2022
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್