ಸಿಂಧೂರ, ತಿಲಕ, ಟಿಕಲಿ ಮತ್ತು ಬಳೆ ಧರಿಸಿದವರಿಗೆ ತರಗತಿಗೆ ಪ್ರವೇಶ ನಿರಾಕರಿಸಿದರೆ ಕ್ರಮ ಕೈಗೊಳ್ಳಲಾಗುವುದು ! – ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇವರಿಂದ ಎಚ್ಚರಿಕೆ

ಇಂತಹ ದೃಢವಾದ ನಿಲುವನ್ನು ತೆಗೆದುಕೊಳ್ಳುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರಿಗೆ ಅಭಿನಂದನೆಗಳು !

ಸಚಿವ ಬಿ.ಸಿ. ನಾಗೇಶ್

ಬೆಂಗಳೂರು : ಸಿಂಧೂರ, ತಿಲಕ, ಟಿಕಲಿ, ಬಳೆ ಇತ್ಯಾದಿ ಶೃಂಗಾರದ ವಸ್ತುಗಳಾಗಿವೆ. ಇವುಗಳನ್ನು ಧರಿಸಿದ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗದಂತೆ ತಡೆದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲೆಯ ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ದೇಶದ ಸಂಸ್ಕೃತಿ, ಅಲಂಕಾರಿಕ ವಸ್ತುಗಳಿಗೆ ಕೈಹಾಕುವಂತಿಲ್ಲ. ಇದುವರೆಗೂ ಚರ್ಚೆ ನಡೆಯುತ್ತಿರುವುದು ಸಮವಸ್ತ್ರದ ಬಗ್ಗೆ ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದರೆ ಕ್ರಮ ವಹಿಸುತ್ತೇವೆ ಎಂದು ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿ ಬಿ.ಸಿ. ನಾಗೇಶ ಇವರು ಎಚ್ಚರಿಕೆಯನ್ನು ನೀಡಿದ್ದಾರೆ.