ಉಜ್ಜೈನಿಯಲ್ಲಿ ಹಿಂದು ಮಹಿಳೆಯು ಬುರ್ಖಾ ಧರಿಸಿ ಮಹಾಕಾಲ ದೇವಾಲಯದಲ್ಲಿ ದರ್ಶನ ಪಡೆದಳು !

‘ಜಿನ್ನ’ನ ಹೇಳಿಕೆಯ ಮೇರಿಗೆ ಬುರ್ಖಾ ಧರಿಸಿದೆ ಎಂದು ದಾವೆ !

ದೇವಾಲಯದಲ್ಲಿ ಹೇಗೆ ದರ್ಶನ ಪಡೆದುಕೊಳ್ಳಬೇಕೆಂದು ಕೂಡ ಹಿಂದೂಗಳಿಗೆ ತಿಳಿದಿಲ್ಲ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದಲೇ ಈ ರೀತಿಯಲ್ಲಿ ಕೃತಿ ಮಾಡುತ್ತಾರೆ. ಹಿಂದು ರಾಷ್ಟ್ರದಲ್ಲಿ ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣ ನೀಡಲಾಗುವುದು ! – ಸಂಪಾದಕರು

ಉಜ್ಜೈನಿ (ಮಧ್ಯಪ್ರದೇಶ) – ರಾಜಸ್ಥಾನದ ಭಿಲವಾಡಾದಲ್ಲಿ ವಾಸಿಸುತ್ತಿರುವ ಲಕ್ಷ್ಮೀ ಎಂಬ ಮಹಿಳೆಯು ತನ್ನ ಸಂಬಂಧಿಕರಾದ ಕಿಶನ, ತಂದೆ ದಾಲಚಂದ ಹಾಗೂ ತಾಯಿಯೊಂದಿಗೆ ಇಲ್ಲಿಯ ಮಹಾಕಾಲ ದೇವಾಲಯದಲ್ಲಿ ದರ್ಶನಕ್ಕಾಗಿ ಬಂದಿದ್ದರು. ಆಗ ಲಕ್ಷ್ಮೀಯು ಬುರ್ಖಾ ಧರಿಸಿದ್ದರು. `ಜಿನ್ನ್’ನ (ಒಂದು ರೀತಿಯ ಭೂತ) ಹೇಳಿಕೆಯ ಮೇರಿಗೆ ಬುರ್ಖಾ ಧರಿಸಿ ದೇವಾಲಯಕ್ಕೆ ಬಂದಿರುವುದಾಗಿ ಹೇಳಿದ ಬಳಿಕ ಭದ್ರತಾ ಪಡೆಯವರು ಅವಳ ವಿಚಾರಣೆ ನಡೆಸಿದರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಳಿಗೆ ದೇವಾಲಯದೊಳಗೆ ಹೋಗಿ ದರ್ಶನ ಪಡೆಯಲು ಬಿಡಲಾಯಿತು.