‘ಶಿಕ್ಷಣಕ್ಕಿಂತಲೂ ಹಿಜಾಬ್ ದೊಡ್ಡದೆಂದು ತಿಳಿಯುವವವರು ಇಸ್ಲಾಮಿ ದೇಶಗಳಲ್ಲಿ ವಾಸಿಸಲು ಏಕೆ ಹೋಗುತ್ತಿಲ್ಲ ?’, ಎಂಬ ಪ್ರಶ್ನೆ ಯಾರಾದರೂ ಕೇಳಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ ? – ಸಂಪಾದಕರು

ಬೆಂಗಳೂರು – ಕರ್ನಾಟಕ ರಾಜ್ಯದ ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಈ ವಿಷಯವಾಗಿ ಮನವಿಗೆ ಎಲ್ಲಿಯವರೆಗೆ ಮಧ್ಯಂತರ ತೀರ್ಪು ಬರುವುದಿಲ್ಲ, ಅಲ್ಲಿಯವರೆಗೆ ಯಾವುದೇ ಧಾರ್ಮಿಕ ಉಡುಪು ಧರಿಸಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ, ಎಂಬ ಆದೇಶ ನೀಡಿದೆ. ಈ ಆದೇಶದ ಮಾತ್ರ ಉಲ್ಲಂಘನೆ ನಡೆಸುವ ಪ್ರಯತ್ನ ಮಾಡುತ್ತಿರುವುದು ಕಂಡುಬರುತ್ತಿದೆ. ಕೆಲವು ಶಾಲೆಗಳಲ್ಲಿ ಪರೀಕ್ಷೆಯ ಸಮಯದಲ್ಲಿ ಮುಸಲ್ಮಾನ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಬಂದಿದ್ದರಿಂದ ಅವರಿಗೆ ಹಿಜಾಬ್ ತೆಗೆಯಲು ಹೇಳಿಯೂ ಅವರು ನಿರಾಕರಿಸಿದರು ಮತ್ತು ಪರೀಕ್ಷೆಯನ್ನು ಬರೆಯದೆ ಹೊರಟು ಹೋಗಿರುವ ಘಟನೆ ನಡೆದಿವೆ.
ಹಿಜಾಬ್ ತೆಗೆಯಲು ನಿರಾಕರಣೆ: ಪರೀಕ್ಷೆ ಬರೆಯದೇ ತೆರಳಿದ ವಿದ್ಯಾರ್ಥಿನಿಯರು | Prajavani#HijabControversy #BHRoadGovtSchool #Shikaripurahttps://t.co/T045zqcnKD
— Prajavani (@prajavani) February 15, 2022
೧. ಶಿವಮೊಗ್ಗ ನಗರದಲ್ಲಿ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ನಲ್ಲಿ ಅನೇಕ ಮುಸಲ್ಮಾನ್ ವಿದ್ಯಾರ್ಥಿನಿಯರು ೧೦ ನೇ ತರಗತಿಯ ಪ್ರಾಥಮಿಕ ಪರೀಕ್ಷೆಗಳನ್ನು ಬಹಿಷ್ಕರಿಸಿದ್ದಾರೆ. ವಿದ್ಯಾರ್ಥಿನಿ ಹೀನಾ ಕೌಸರ ಈಕೆಯು, ನನಗೆ ಶಾಲೆಯಲ್ಲಿ ಪ್ರವೇಶ ಮಾಡುವ ಮೊದಲು ಹಿಜಾಬ್ ತೆಗೆಯಲು ಹೇಳಿದರು. ಅದನ್ನು ನಾನು ಮಾಡಲು ಸಾಧ್ಯವಿರಲಿಲ್ಲ; ಆದ್ದರಿಂದ ನಾನು ಪರೀಕ್ಷೆ ಬರೆಯದಿರುವುದು ನಿರ್ಣಯ ತೆಗೆದುಕೊಂಡೆ. ಇತರ ಅನೇಕ ವಿದ್ಯಾರ್ಥಿನಿಗಳು ಹೀಗೆ ಮಾಡಿದ್ದಾರೆ ಎಂದು ಹೇಳಿದಳು.
೨. ಉಡುಪಿಯ ಪಾಕಿರನಗರದ ಸರಕಾರಿ ಉರ್ದೂ ಶಾಲೆಯ ವಿದ್ಯಾರ್ಥಿನಿಯ ತಾಯಿ, ಶಾಲೆಯಲ್ಲಿ ಹಿಜಾಬ್ ಧರಿಸಲು ನಿಷೇಧಿಸಿದ್ದರಿಂದ ನಾನು ಆಕೆಯನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇಲ್ಲಿಯವರೆಗೆ ನಮ್ಮ ಕುಟುಂಬದ ಅನೇಕ ಸದಸ್ಯರು ಹಿಜಾಬ್ ಧರಿಸಿಯೇ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ; ಹೀಗೆ ಅನಿರೀಕ್ಷಿತವಾಗಿ ನಿಯಮಗಳನ್ನು ಏಕೆ ಬದಲಿಸಿದ್ದಾರೆ ? ಎಂದು ಪ್ರಶ್ನೆ ಕೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ