ಪಾಕಿಸ್ತಾನದ ವಿದೇಶಾಂಗಸಚಿವ ಶಾಹ ಮಹಮೂದ ಕುರೇಶಿಯವರ ವಿಷಕಾರಿ ಹೇಳಿಕೆ !
|
ಭಾರತದಲ್ಲಿ ಕೇವಲ ಮಹಾವಿದ್ಯಾಲಯಗಳಲ್ಲಿ ನಿಯಮಕ್ಕಸಾರ ಹಿಜಾಬ್ ನಿರ್ಬಂಧಿಸಿದ್ದರಿಂದ ಕೋಲಾಹಲವೆಬ್ಬಿಸುವ ಪಾಕಿಸ್ತಾನದ ವಿದೇಶಾಂಗ ಸಚಿವರು ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಧಾರ್ಮಿಕ ಅಧಿಕಾರವನ್ನು ಎಷ್ಟು ನೀಡಲಾಗಿದೆ, ಎಂಬುದನ್ನೂ ಹೇಳಬೇಕು ! ಒಂದೆಡೆ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಮಾಡುವುದು, ಅವರ ನರಮೇಧ ನಡೆಸುವುದು ಮತ್ತು ಇನ್ನೊಂದೆಡೆ ಜಾತ್ಯತೀತ ಭಾರತದ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು, ಇದು ಪಾಕಿಸ್ತಾನದ ದ್ವಿಮುಖ ನೀತಿಯಾಗಿದೆ ! |

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತದಲ್ಲಿ ಮುಸಲ್ಮಾನ ಹುಡುಗಿಯರನ್ನು ಶಿಕ್ಷಣದಿಂದ ವಂಚಿಸುವುದು ಮಾನವಾಧಿಕಾರದ ಉಲ್ಲಂಘನೆಯಾಗಿದೆ. ಯಾರನ್ನೂ ಈ ರೀತಿಯಲ್ಲಿ ಮೂಲಭೂತ ಅಧಿಕಾರಗಳಿಂದ ವಿಮುಖಗೊಳಿಸುವುದು ಮತ್ತು ಅವರಿಗೆ ಹಿಜಾಬಿನ ಹೆಸರಿನಲ್ಲಿ ತೊಂದರೆ ಕೊಡುವುದು ಅವರ ದಮನವೇ ಆಗಿದೆ. ಇದು ಮುಸಲ್ಮಾನರನ್ನು ದಮನಿಸುವ ಭಾರತ ಸರಕಾರದ ಸಂಚಿನ ಒಂದು ಭಾಗವಾಗಿದೆ ಎಂಬುದನ್ನು ಜಗತ್ತು ಗಮನಿಸಬೇಕಿದೆ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ ಮಹಮೂದ ಕುರೇಶಿಯವರು ಕರ್ನಾಟಕದಲ್ಲಿನ ಹಿಜಾಬ್ ಪ್ರಕರಣದಲ್ಲಿ ಟ್ವೀಟ್ ಮಾಡಿ ವಿಷಕಾರಿದ್ದಾರೆ.
#Karnataka | #HijabRow: #Pakistan Foreign minister at it again, Shah Mahmood Qureshi says India terrorising #Muslim girls | Catch the day’s latest news and updates: https://t.co/N9MYIfiO2V pic.twitter.com/ZrPBIXaZYS
— Economic Times (@EconomicTimes) February 9, 2022
`ನಾಗರಿಕರಿಗೆ ಸ್ವತಂತ್ರವಾಗಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡಬೇಕು !’ (ಅಂತೆ) – ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರಣ ಮಂತ್ರಿ ಫವಾದ ಚೌಧರಿ

ಪಾಕಿಸ್ತಾನದಲ್ಲಿ ಇಂತಹ ಸ್ವಾತಂತ್ರ್ಯವಿದೆಯೇ ? ಅನೇಕ ಮುಸಲ್ಮಾನ ಹುಡುಗಿಯರು ಮತ್ತು ಯುವತಿಯರಿಗೆ ಹಿಜಾಬ್ ಹಾಗೂ ಬುರ್ಖಾ ಬೇಡ, ಆದರೂ ಅವರ ಮೇಲೆ ಬಲವಂತ ಮಾಡಲಾಗುತ್ತದೆ. ಈ ಬಗ್ಗೆ ಫವಾದ ಚೌಧರಿಯವರು ಏಕೆ ಬಾಯಿ ಬಿಡುವುದಿಲ್ಲ ?
ಈ ವಿಷಯದಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರಣ ಮಂತ್ರಿಗಳೂ ಟ್ವೀಟ್ ಮಾಡುತ್ತಾ ‘ಮೋದಿಯವರ ಭಾರತದಲ್ಲಿ ನಡೆಯುತ್ತಿರುವುದು ಭಯಾನಕವಾಗಿದೆ. ಭಾರತೀಯ ಸಮಾಜವು ಅಸ್ಥಿರ ನೇತೃತ್ವದಲ್ಲಿ ಅಪಾರ ವೇಗದಿಂದ ಪತನದೆಡೆಗೆ ಹೋಗುತ್ತಿದೆ. ಹಿಜಾಬ್ ಧರಿಸುವುದು ಅಥವಾ ಇತರ ಉಡುಪುಗಳನ್ನು ಧರಿಸುವುದು ವೈಯಕ್ತಿಕ ಅಸಕ್ತಿಯಾಗಿದೆ. ನಾಗರಿಕರಿಗೆ ಸ್ವತಂತ್ರವಾಗಿ ಇದರ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ನೀಡಬೇಕು’ ಎಂದು ಹೇಳಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !