‘ದೇವಬಂದ’ನಿಂದ ಅವರ ಜಾಲತಾಣದ ಮೂಲಕ ನೀಡಲಾಗುವ ಅನಧಿಕೃತ ಫತ್ವಾಗಳ ಪ್ರಕರಣ
| ಇಂತಹ ಫತ್ವಾ ಬಗ್ಗೆ ಪ್ರಗತಿ(ಅಧೋ)ಪರರು ಚಕಾರವನ್ನೂ ಎತ್ತುವುದಿಲ್ಲ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !
ಈ ರೀತಿ ಆದೇಶವನ್ನು ಏಕೆ ನೀಡಬೇಕಾಗುತ್ತದೆ ? ಸರಕಾರ ತಾವಾಗಿಯೇ ಇದರ ವಿರುದ್ಧ ಏಕೆ ಕ್ರಮವನ್ನು ಜರುಗಿಸುವುದಿಲ್ಲ ? |

ಲಕ್ಷ್ಮಣಪುರಿ(ಉತ್ತರಪ್ರದೇಶ) – ‘ದಾರುಲ ಉಲೂಮ ದೇವಬಂದ’ ಸಂಘಟನೆಯಿಂದ ನೀಡಲಾಗುವ ಅನಧಿಕೃತ ಮತ್ತು ದಾರಿ ತಪ್ಪಿಸುವ ಫತ್ವಾದ ಪ್ರಕರಣದಲ್ಲಿ ಅವರ ಜಾಲತಾಣವನ್ನು ಆಳವಾಗಿ ವಿಚಾರಣೆ ನಡೆಸಬೇಕು, ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗವು ಉತ್ತರಪ್ರದೇಶ ಸರಕಾರಕ್ಕೆ ಆದೇಶ ನೀಡಿದೆ. ದಾರುಲ ಉಲೂಮ ದೇವಬಂದ ಜಾಲತಾಣಗಳ ಮೇಲಿರುವ ಫತ್ವಾಗಳು ನೇರವಾಗಿ ದೇಶದ ಕಾನೂನಿನ ವಿರುದ್ಧವಿರುತ್ತದೆ, ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಅದಕ್ಕನುಗುಣವಾಗಿ ಆಯೋಗವು ಮೇಲಿನಂತೆ ಆದೇಶ ನೀಡಿದೆ.
NCPCR asks UP government to probe Darul Uloom Deoband portal for ‘unlawful’ fatwas.
Activist Zeenat Shaukat Ali reacts. #NCPCR #DarulUloomDeoband pic.twitter.com/5aajJz5PRc
— TIMES NOW (@TimesNow) January 17, 2022
ಜಾಲತಾಣದ ಪರಿಶೀಲನೆಯನ್ನು ನಡೆಸಿದಾಗ ಆಯೋಗಕ್ಕೆ, ಜನರು ನೀಡಿರುವ ದೂರಿನನ್ವಯ ದೇವಬಂದನಿಂದ ನೀಡಲಾಗಿರುವ ಉತ್ತರಗಳು ದೇಶದ ಕಾನೂನು ಮತ್ತು ನಿಯಮಗಳ ಅನುಸಾರ ಇಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಕಾನೂನುವಿರೋಧಿ ಹೇಳಿಕೆಗಳು, ಹಿಂಸಾಚಾರ, ಅವ್ಯವಹಾರ, ಹಿಂಸೆ ಮತ್ತು ಮಕ್ಕಳಲ್ಲಿ ಬೇಧಭಾವ ಮಾಡುವ ಪ್ರಕರಣಗಳ ಪ್ರಸಾರವನ್ನು ತಡೆಯುವುದು ಇದಕ್ಕಾಗಿ ಜಾಲತಾಣಗಳ ಮೇಲಿರುವ ವಿಷಯಗಳನ್ನು ತೆಗೆದುಹಾಕಬೇಕು. ಅಲ್ಲಿಯವರೆಗೆ ಈ ಜಾಲತಾಣವನ್ನು ಸ್ಥಗಿತಗೊಳಿಸಬೇಕು. ಎಂದು ಹೇಳಿದೆ. ಆಯೋಗವು ರಾಜ್ಯ ಸರಕಾರಕ್ಕೆ ದಾರುಲ ಉಲೂಮ ದೇವಬಂದ ವಿರುದ್ಧ ಅಗತ್ಯವಿರುವ ಕ್ರಮವನ್ನು ಜರುಗಿಸಲು ಮತ್ತು ಮುಂದಿನ ೧೦ ದಿನಗಳಲ್ಲಿ ಕ್ರಮ ಜರುಗಿಸಿ ವರದಿಯನ್ನು ಒಪ್ಪಿಸುವಂತೆ ಆದೇಶಿಸಿದೆ.
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews