ಸ್ವತಂತ್ರ ಪತ್ರಕರ್ತ ರಾಜೀವ ಶರ್ಮಾನು ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮಾಹಿತಿಯನ್ನು ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವುದು ಬಯಲು !

ಜಾರಿ ನಿರ್ದೇಶನಾಲಯದಿಂದ ೪೮ ಲಕ್ಷ ರೂಪಾಯಿಗಳ ಸಂಪತ್ತು ವಶಕ್ಕೆ !

  • ಚೀನಾದ ಕಮ್ಯುನಿಸ್ಟ ಪಕ್ಷದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಗೆ ಅಂಕಣಗಳನ್ನು ಬರೆಯುತ್ತಿದ್ದ
  • ಪೊಲೀಸರಿಂದ ದೂರು ದಾಖಲು
  • ದೇಶದ ಭದ್ರತೆಯೊಂದಿಗೆ ಚೆಲ್ಲಾಟವಾಡುವ ಇಂತಹ ಪತ್ರಕರ್ತರನ್ನು ಸರಕಾರವು ‘ದೇಶದ್ರೋಹಿ’ ಘೋಷಿಸಿ ಅವರ ಮೇಲೆ ಕಠಿಣ ಕ್ರಮವನ್ನು ಜರುಗಿಸಬೇಕು !

ನವದೆಹಲಿ – ಹಣಕ್ಕಾಗಿ ಚೀನಾ ಗೂಢಚಾರರಿಗೆ ಭಾರತದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ಪೂರೈಸಿರುವ ಸ್ವತಂತ್ರ್ಯ ಪತ್ರಕರ್ತ ರಾಜೀವ ಶರ್ಮಾ ಇವನ ೪೮ ಲಕ್ಷ ರೂಪಾಯಿಗಳ ಸಂಪತ್ತು ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ಪಡೆಯಿತು. ಈ ಪ್ರಕರಣವನ್ನು ಅವನ ವಿರುದ್ಧ ಪೊಲಿಸರು ದೂರು ದಾಖಲಿಸಿದ್ದಾರೆ. ಶರ್ಮಾರ ಕೃತ್ಯವನ್ನು ರಾಷ್ಟ್ರೀಯ ಭದ್ರತೆಯೊಂದಿಗೆ ಹೊಂದಾಣಿಕೆ ಮಾಡುವವರಾಗಿದ್ದಾರೆ, ಎಂದು ಪೊಲಿಸರು ದೂರಿನಲ್ಲಿ ತಿಳಿಸಿದ್ದಾರೆ.

೧. ಝಂಗ ಚೆಂಗ ಅಲಿಯಾಸ್ ಸೂರಜ, ಝಂಗ ಲಕ್ಸಿಯಾ ಅಲಿಯಾಸ್ ಉಷಾ, ಕ್ವಿಂಗ ಶೀ ಈ ಚೀನಿ ನಾಗರಿಕರು ಅಲ್ಲದೇ ಶೇರ ಸಿಂಹ ಅಲಿಯಾಸ್ ರಾಜ ಬೊಹರಾ ಈ ನೇಪಾಳಿ ನಾಗರಿಕ, ಹೀಗೆ ನಾಲ್ವರು ದೆಹಲಿಯ ಮಹಿಪಾಲಪೂರದಲ್ಲಿ ‘ಶೆಲ್’ ಈ ಕಂಪನಿಯನ್ನು ನಡೆಸುತ್ತಿದ್ದರು. ಚೀನಾ ಗೂಢಚಾರರಿಂದ ಈ ಕಂಪನಿಗೆ ಹಾಗೂ ಈ ಕಂಪನಿಯಿಂದ ಶರ್ಮಾನಿಗೆ ಹಣ ಪೂರೈಸಲಾಗುತ್ತಿತ್ತು. ಶರ್ಮಾನಿಗೆ ಕೆಲವೊಮ್ಮೆ ಹಣದ ರೂಪದಲ್ಲಿ ಮತ್ತೆ ಕೆಲವೊಮ್ಮೆ ಮಿತ್ರರ ಮಾಧ್ಯಮದಿಂದ ಹಣವನ್ನು ಪೂರೈಸಲಾಗುತ್ತಿತ್ತು. (ಈ ಮಾಹಿತಿ ಗೂಢಚಾರ ಇಲಾಖೆಗೆ ಹೇಗೆ ಸಿಕ್ಕಿರಲಿಲ್ಲ ? ಈ ಕಂಪನಿಗೆ ಅನುಮತಿ ನೀಡುವ ಅಧಿಕಾರಿ ಮತ್ತು ಪೊಲಿಸರ ವಿಚಾರಣೆಯನ್ನು ಸರಕಾರ ಮಾಡಬೇಕು !- ಸಂಪಾದಕರು)

೨. ಶರ್ಮಾನು ಸ್ವತಂತ್ರ ವರದಿಗಾರಿಕೆ ಮಾಡುತ್ತಿದ್ದ. ಕಳೆದ ೨ ದಶಕಗಳಿಂದ ಅವನು ‘ದಿ ಕ್ವೀಂಟ’, ‘ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ’, ‘ದಿ ಟ್ರಿಬ್ಯೂನ’, ‘ಫ್ರೀ ಪ್ರೆಸ್ ಜರ್ನಲ್’, ‘ಸಕಾಳ’ ಮುಂತಾದ ಹೆಸರಾಂತ ವಾರ್ತಾಪತ್ರಿಕೆಗಳಿಗೆ ‘ಭದ್ರತೆ ಮತ್ತು ವಿದೇಶ ವ್ಯವಹಾರ’ ಈ ವಿಷಯದ ಮೇಲೆ ವರದಿಗಾರಿಕೆಯನ್ನು ಮಾಡಿದ್ದನು. ಅವನು ಚೀನಾದ ಕಮ್ಯುನಿಸ್ಟ ಪಕ್ಷದ ಮುಖವಾಣಿ ‘ಗ್ಲೋಬಲ ಟೈಮ್ಸ’ ಪತ್ರಿಕೆಗೂ ಅನೇಕ ಬಾರಿ ಅಂಕಣವನ್ನು ಬರೆದಿದ್ದಾನೆ.