ಕರ್ನಾಟಕದಲ್ಲಿ ಇಸ್ಲಾಮಿಕ ಸ್ಟೇಟಿನೊಂದಿಗೆ ಸಂಬಂಧವಿರುವ ಓರ್ವ ಮಹಿಳಾ ಜಿಹಾದಿ ಭಯೋತ್ಪಾದಕಿಯ ಬಂಧನ !

* ಮಹಿಳಾ ಭಯೋತ್ಪಾದಕಿಯು ಕಾಂಗ್ರೆಸ್ಸಿನ ದಿವಂಗತ ಮಾಜಿ ಶಾಸಕನ ಸೊಸೆ !

* ಮಹಿಳಾ ಭಯೋತ್ಪಾದಕಿಯು ಹಿಂದೂ ಧರ್ಮದಿಂದ ಮತಾಂತರವಾಗಿದ್ದಳು !

* ಇಸ್ಲಾಮಿನಲ್ಲಿ ಮತಾಂತರವಾದ ನಂತರ ಮುಂದೆ ಹಿಂದೂ ಹುಡುಗಿಯರ ಸ್ಥಿತಿ ಹೇಗಿರುತ್ತದೆ, ಎಂಬುದನ್ನು ದರ್ಶಿಸುವ ಇನ್ನೊಂದು ಉದಾಹರಣೆ !- ಸಂಪಾದಕರು 

(ಎಡದಲ್ಲಿ) ದೀಪ್ತಿ ಮಾರಲಾ ಉರ್ಫ್ ಮರಿಯಮ

ಬೆಂಗಳೂರು – ರಾಷ್ಟ್ರೀಯ ತನಿಖಾ ದಳವು ಕರ್ನಾಟಕದಿಂದ ದೀಪ್ತಿ ಮಾರಲಾ ಉರ್ಫ್ ಮರಿಯಮ ಎಂಬ ಜಿಹಾದಿ ಭಯೋತ್ಪಾದಕಿಯನ್ನು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟನೊಂದಿಗೆ ಸಂಬಂಧ ಇರುವುದರಿಂದ ಬಂಧಿಸಿದ್ದಾರೆ. ಈಕೆಯು ಕರ್ನಾಟಕದ ಕಾಂಗ್ರೆಸ್ಸಿನ ಮಾಜಿ ಸಂಸದರಾದ ದಿವಂಗತ ಬಿ. ಎಂ. ಇದಿನಬ್ಬಾರವರ ಸೊಸೆಯಾಗಿದ್ದು ಇದಿನಬ್ಬಾರವರ ಮಗನಾದ ಬಿ. ಎಂ. ಬಾಷಾರವರ ಪತ್ನಿಯಾಗಿದ್ದಾರೆ. ಭಾಷಾರವರ ಮನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿಂದ ಕೆಲವು ಆಕ್ಷೇಪಾರ್ಹ ಕಾಗದಪತ್ರಗಳನ್ನು ಜಪ್ತಿ ಮಾಡಲಾಯಿತು. ಆಗಸ್ಟ್ 2021ರಲ್ಲಿ ಇದೇ ಮನೆಯ ಮೇಲೆ ದಾಳಿ ನಡೆಸಿ ಬಾಷಾರವರ ಸಹೋದರನ ಮಗನಾದ ಅಮ್ಮಾರನನ್ನು ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ನಂಟಿರುವುದರಿಂದ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಮರಿಯಮಳ ವಿಚಾರಣೆ ನಡೆಸಲಾಗಿತ್ತು. ಈಗ ಆಕೆಯ ವಿರುದ್ಧ ದೃಢವಾದ ಪುರಾವೆಗಳು ದೊರೆತಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ. ಮರಿಯಮಳು ಮದುವೆಯ ಮೊದಲು ಹಿಂದೂ ಆಗಿದ್ದಳು. ಆಕೆಯು ಒಂದು ಶ್ರೀಮಂತ ಮನೆತನದವಳಾಗಿದ್ದಳು. ಮರಿಯಮ ಉರ್ಫ್ ದೀಪ್ತಿ ಮಾರಲಾರವರು ದುಬೈನಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಇಸ್ಲಾಮಿಕ್ ಸ್ಟೇಟ್‌ನ ಮಹಿಳಾ ಭಯೋತ್ಪಾದಕಿಯಾದ ಅಜಮಲಳ ಸಂಪರ್ಕಕ್ಕೆ ಬಂದಿದ್ದಳು. ಅಜಮಲ ಇವಳು ಮಾಜಿ ಸಂಸದರಾದ ದಿವಂಗತ ಬಿ. ಎಂ. ಇದಿನಬ್ಬಾರವರ ಮಗನ ಮಗಳಾಗಿದ್ದಳು. (ಇದಿನಬ್ಬಾರವರ ಮನೆಯ ಪ್ರತಿಯೊಬ್ಬ ವ್ಯಕ್ತಿಯ ವಿಚಾರಣೆ ನಡೆಸಿ ಅವರ ಭಯೋತ್ಪಾದಕ ಸಂಘಟನೆ ಅಥವಾ ಜಿಹಾದಿಗಳೊಂದಿಗೆ ನಂಟಿದೆಯೇ ಎಂಬುದರ ಸಂಪೂರ್ಣ ವಿಚಾರಣೆ ಮಾಡುವುದು ಅವಶ್ಯಕವಾಗಿದೆ ! – ಸಂಪಾದಕರು) ದೀಪ್ತಿಯು ನಂತರ ಇಸ್ಲಾಮಿನ ಕಡೆಗೆ ಆಕರ್ಷಿತಳಾದಳು. ಅನಂತರ ಆಕೆಯು ಮತಾಂತರ ಮಾಡಿ ಇದಿನಬ್ಬಾರವರ ಮಗನಾದ ಅನಾಸ ಅಬ್ದುಲ ರೆಹಮಾನನೊಂದಿಗೆ ವಿವಾಹವಾದಳು. (ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ಹಿಂದೂ ಧರ್ಮದ ಮಹತ್ವ ಮತ್ತು ಮಹಾನತೆ ಗಮನಕ್ಕೆ ಬರುವುದಿಲ್ಲ. ಇಂತಹ ಹಿಂದೂಗಳು ಇತರ ಧರ್ಮೀಯರ ಆಮಿಷಗಳಿಗೆ ಬಲಿಯಾಗಿ ಆಯುಷ್ಯವನ್ನು ಹಾಳುಮಾಡಿಕೊಳ್ಳುತ್ತಾರೆ ! – ಸಂಪಾದಕರು)