‘ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ !’(ವಂತೆ)

ಕಾಂಗ್ರೆಸ್ ನಾಯಕ ರಶೀದ್ ಖಾನ್ ಇವರ ಟೊಳ್ಳು ಬೆದರಿಕೆ !

‘ಭಾರತದ ಜಾಗೃತ ಹಿಂದೂಗಳು ಭಾರತವನ್ನು ಎಂದಿಗೂ ಇಸ್ಲಾಮಿ ರಾಷ್ಟ್ರವಾಗಲು ಬಿಡುವುದಿಲ್ಲ’, ಇದನ್ನು ಮತಾಂಧರು ಶಾಶ್ವತವಾಗಿ ನೆನಪಿಟ್ಟುಕೊಳ್ಳಬೇಕು ! ಕೇವಲ ಹಿಂದೂ ರಾಷ್ಟ್ರ ಅಷ್ಟೇ ಅಲ್ಲ, ಭವಿಷ್ಯದಲ್ಲಿ ಅಖಂಡ ಭಾರತದ ಸ್ಥಾಪನೆ ಮಾಡುವ ದಿಕ್ಕಿನತ್ತ ಹಿಂದೂಗಳು ಪ್ರಯತ್ನಿಸಲಿದ್ದಾರೆ, ಇದನ್ನು ಸಹ ಅವರು ಗಮನದಲ್ಲಿಡಬೇಕು !

ಭಾಗ್ಯನಗರ (ತೆಲಂಗಾಣಾ) – ಪ್ರಧಾನಿ ನರೇಂದ್ರ ಮೋದಿ, ಕೇಂದ್ರೀಯ ಗೃಹ ಸಚಿವ ಅಮಿತ ಶಹಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳ ಇವರೆಲ್ಲ ಸೇರಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವ ಅವರ ಕನಸು ಎಂದಿಗೂ ಪೂರ್ಣವಾಗಲು ಸಾಧ್ಯವಿಲ್ಲ. ನಾನು ಜೀವಂತ ಇರುವ ವರೆಗೂ ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ, ಎಂದು ತೆಲಂಗಾಣಾದ ಕಾಂಗ್ರೆಸ್ ನಾಯಕ ರಶೀದ್ ಖಾನ್ ಇವರು ಬೆದರಿಕೆಯೊಡ್ಡಿದರು. ‘ಮುಸಲ್ಮಾನರಿಗೆ ಬೆಂಬಲ ನೀಡುವ ಕಾಂಗ್ರೆಸ್ ಇದು ದೇಶದ ಏಕೈಕ ಪಕ್ಷವಾಗಿದೆ’, ಎಂದು ಸಹ ಅವರು ಹೇಳಿದರು. (ಮುಸಲ್ಮಾನರಿಗೆ ಬೆಂಬಲ ನೀಡುವ ಇದು ದೇಶದ ಏಕೈಕ ಪಕ್ಷವಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಿಂದೂರಾಷ್ಟ್ರ ಸ್ಥಾಪನೆಯಲ್ಲಿ ಎಲ್ಲಕ್ಕಿಂತ ಮೊದಲನೆಯ ಅಡಚಣೆ ಯಾರಿಂದ ಇದೆ ಎಂಬುದು, ರಶೀದ ಖಾನ್ ಇವರು ಸ್ಪಷ್ಟಪಡಿಸಿದ್ದಾರೆ ಇದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)

ರಶೀದ್ ಖಾನ್ ಇವರು ಈ ಮೊದಲು ಶಿಯಾ ಸೆಂಟ್ರಲ್ ವಕ್ಫ್ ಬೋರ್ಡಿನ ಮಾಜಿ ಅಧ್ಯಕ್ಷ ಮತ್ತು ಹಿಂದೂ ಧರ್ಮ ಸ್ವೀಕರಿಸಿರುವ ಜಿತೇಂದ್ರ ನಾರಾಯಣ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರ ಹತ್ಯೆ ಮಾಡುವ ಬೆದರಿಕೆಯೊಡ್ಡಿದ್ದರು. (ಈ ರೀತಿಯ ಜೀವಬೆದರಿಕೆ ನೀಡಿದರೂ ಕಾಂಗ್ರೆಸ್‌ನ ನಾಯಕ ಈವರೆಗೂ ರಾಜಾರೋಶವಾಗಿ ಹೇಗೆ ತಿರುಗುತ್ತಾನೆ ? ತೆಲಂಗಾಣಾದ ತೆಲಂಗಾಣ ರಾಷ್ಟ್ರ ಸಮಿತಿಯ ಸರಕಾರ ಗೂಂಡಾ ನಾಯಕರನ್ನು ಬೆಂಬಲಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)