|
|
ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಸಂಘಟನೆಗಳ ಕಾರ್ಯಾಲಯಕ್ಕೆ ಮತ್ತು ಅವರ ಕಾರ್ಯಕರ್ತರ ಮೇಲೆ ಈ ರೀತಿ ಹಲ್ಲೆಗಳಾಗುವುದು ಹಿಂದೂಗಳು ಅಪೇಕ್ಷಿತವಿಲ್ಲ! ಇಂತಹ ಮತಾಂಧರನ್ನು ಬಂಧಿಸಿ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು! |

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಆಲಮಗಂಜ ಚೌಕಿಯ ಹತ್ತಿರ ರಾಧಾಕೃಷ್ಣ ಮಂದಿರವಿದೆ. ಇಲ್ಲಿಗೆ ಮತಾಂಧರು ಮದ್ಯಪಾನ ಮಾಡಿ ಗಲಾಟೆ ಮಾಡಲು ಬರುತ್ತಿದ್ದರು. ಈ ಮಂದಿರದ ಎದುರಿಗೆ ರಾ.ಸ್ವ. ಸಂಘದ ಕಾರ್ಯಾಲಯವೂ ಇದೆ. ಸಂಘದ ಕಾರ್ಯಕರ್ತರು ಈ ಮತಾಂಧರನ್ನು ಮದ್ಯಪಾನ ಮಾಡಲು ಮತ್ತು ಗಲಾಟೆ ಮಾಡುವುದರಿಂದ ತಡೆದರು. ಆ ಸಮಯದಲ್ಲಿ ಅವರು ಅಲ್ಲಿಂದ ಹೋದರು; ಆದರೆ ಸ್ವಲ್ಪ ಸಮಯದ ಬಳಿಕ ೫೦ ರಿಂದ ೭೦ ಮತಾಂಧರು ಅಲ್ಲಿ ತಲುಪಿದರು ಮತ್ತು ಸಂಘದ ಕಾರ್ಯಾಲಯದ ಮೇಲೆ ಕಲ್ಲು ಎಸೆದರು ಹಾಗೂ ಕಾರ್ಯಾಲಯದಲ್ಲಿ ನುಗ್ಗಿ ಧ್ವಂಸಗೊಳಿಸಿದರು ಮತ್ತು ಅಲ್ಲಿದ್ದ ಭಾರತಮಾತೆಯ ಚಿತ್ರವನ್ನು ಹರಿದರು. ಈ ಹಲ್ಲೆಯಲ್ಲಿ ವಿಕಾಸ ಗುಪ್ತಾ ಮತ್ತು ಶಿವಮ್ ಕುಮಾರ ಈ ಇಬ್ಬರು ಗಂಭೀರವಾಗಿ ಗಾಯಗೊಂಡರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಲಾಗಿದೆ.
मंदिर के पास समुदाय विशेष को शराब पीने से रोका तो RSS कार्यालय पर हमला: भारत माता की तस्वीर फाड़ी, आगरा में 10 अरेस्ट#UttarPradeshhttps://t.co/ueI9fL4dxZ
— ऑपइंडिया (@OpIndia_in) December 27, 2021
ಈ ಪ್ರಕರಣದಲ್ಲಿ ಅಲ್ಲಿಯ ಶಾಸಕ ಯೋಗೇಂದ್ರ ಉಪಾಧ್ಯಾಯ ಇವರು, ‘ಸಂಘದ ಕಾರ್ಯಕರ್ತರಿಗೆ ಮತಾಂಧರು ಬಂಧಿಸಿ ಕರೆದೊಯ್ದರು ಮತ್ತು ಅವರನ್ನು ಥಳಿಸಿದರು. ಒಂದು ವೇಳೆ ಮುಂದಿನ ೨೪ ಗಂಟೆಯೊಳಗೆ ಆರೋಪಿಗಳ ಮೇಲೆ ಕ್ರಮ ಕೈಕೊಳ್ಳದಿದ್ದರೆ, ಪೊಲೀಸರು ಅದರ ಪರಿಣಾಮವನ್ನು ಅನುಭವಿಸಬೇಕಾಗುವುದು’, ಎಂದು ಹೇಳಿದ್ದಾರೆ.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!