ಕರ್ನಾಟಕ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರ !

ರಾಜ್ಯದಲ್ಲಿ ಭಾಜಪದ ಸರಕಾರವಿದೆ. ಕೇಂದ್ರದಲ್ಲೂ ಭಾಜಪ ಸರಕಾರವಿರುವುದರಿಂದ ಇಡೀ ದೇಶದಲ್ಲಿ ಮತಾಂತರ ನಿಷೇಧ ಕಾನೂನನ್ನು ತರಲು ಭಾಜಪ ಹೆಜ್ಜೆ ಇಡಬೇಕು, ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ !- ಸಂಪಾದಕರು 

ಬೆಂಗಳೂರು – ರಾಜ್ಯದಲ್ಲಿ ಭಾಜಪ ಸರಕಾರವು ಮತಾಂತರ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕರಿಸಿದೆ. ‘ಈ ಮಸೂದೆಯು `ಜನವಿರೋಧಿ’, `ಅಮಾನವೀಯ’, `ಸಂವಿಧಾನವಿರೋಧಿ’, `ಬಡವರ ವಿರೋಧಿ’ ಮತ್ತು `ಕಠೋರ’ವಾಗಿದೆ” ಎಂದು ಹೇಳಿ ಕಾಂಗ್ರೆಸ್ ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಲು ಪ್ರಯತ್ನಿಸುತ್ತಾ ಕೋಲಾಹಲವೆಬ್ಬಿಸಿತು; ಆದರೆ ಈ ಮಸೂದೆಯನ್ನು ತಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿಯಿತು. (ವಿಧಾನಸಭೆಯಲ್ಲಿ ಕೋಲಾಹಲವನ್ನುಂಟು ಮಾಡುವ ಕಾಂಗ್ರೆಸ್ ಶಾಸಕರ ಸದಸ್ಯತ್ವವನ್ನು ರದ್ದು ಪಡಿಸಬೇಕು ! – ಸಂಪಾದಕರು)