ಮೇಘಾಲಯದಲ್ಲಿನ ಭಾಜಪದ ಮಂತ್ರಿ ಸನಬೊರ ಶುಲಾಯಿಯವರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಮುಖೇನ ಮನವಿ !
|
ಶಿಲ್ಲಾಂಗ (ಮೇಘಾಲಯ) – ಮೇಘಾಲಯ ಸರಕಾರದಲ್ಲಿನ ಭಾಜಪದ ಏಕೈಕ ಶ್ರಮ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಕ್ರೈಸ್ತರನ್ನು ರಕ್ಷಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯದಲ್ಲಿನ ಕ್ರೈಸ್ತರ ಸಮೀಕ್ಷೆ ನಡೆಸಲಾಗುವುದು ಎಂಬ ಹಿನ್ನೆಲೆಯಲ್ಲಿ ಶುಲಾಯಿಯವರು ಈ ಸಮೀಕ್ಷೆಯಲ್ಲಿ ಹಸ್ತಕ್ಷೇಪ ಮಾಡಬೇಕಾಗಿ ಮನವಿ ಮಾಡಿದ್ದಾರೆ. ಅವರು ’ಇಂತಹ ಸಮೀಕ್ಷೆಯು ಸಂವಿಧಾನ ವಿರೋಧಿಯಾಗಿದ್ದು ರಾಜ್ಯದಲ್ಲಿನ ಕ್ರೈಸ್ತ ನಾಗರಿಕರಲ್ಲಿ ಅವಿಶ್ವಾಸದ ಭಾವನೆಯನ್ನು ಹುಟ್ಟಿಸುತ್ತದೆ’ ಎಂದು ಹೇಳಿದ್ದಾರೆ. ಮೇಘಾಲಯದಲ್ಲಿ ಕೇವಲ ೨ ಭಾಜಪದ ಶಾಸಕರಿದ್ದಾರೆ. ರಾಜ್ಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಭಾಜಪದ ಸಮ್ಮಿಶ್ರ ಸರಕಾರವಿದೆ.
Meghalaya’s lone BJP minister Sanbor Shullai writes to PM Narendra Modi, urging him to ensure “safety and security” of Christians living in Karnataka
— Press Trust of India (@PTI_News) December 4, 2021
ಶುಲಾಯಿಯವರು ಈ ಪತ್ರದಲ್ಲಿ `ದಯವಿಟ್ಟು ಕರ್ನಾಟಕದಲ್ಲಿನ ಆರ್ಚ್ ಬಿಷಪ್ ಪೀಟರ ಮಚಾಡೋ ಮತ್ತು ಕ್ರೈಸ್ತ ಪಂಥದವರು ಮಂಡಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನಾನು ವಿನಂತಿಸುತ್ತಿದ್ದೇನೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ’ಜಾತ್ಯತೀತ’ ರಾಷ್ಟ್ರ ಎಂಬ ಪರಿಚಯವಿದ್ದು ಈ ಸಮೀಕ್ಷೆಯಿಂದ ಅದು ಮಲಿನವಾಗಬಹುದು’ ಎಂದು ಬರೆದಿದ್ದಾರೆ.

ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !