ಕರ್ನಾಟಕದಲ್ಲಿನ ಕ್ರೈಸ್ತರನ್ನು ರಕ್ಷಿಸಿ !

ಮೇಘಾಲಯದಲ್ಲಿನ ಭಾಜಪದ ಮಂತ್ರಿ ಸನಬೊರ ಶುಲಾಯಿಯವರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಮುಖೇನ ಮನವಿ !

  • ಎಷ್ಟು ಹಿಂದೂ ಮಂತ್ರಿಗಳು ದೇಶದಲ್ಲಿರುವ ಹಿಂದೂಗಳ ರಕ್ಷಣೆಗಾಗಿ ಪ್ರಧಾನಮಂತ್ರಿ ಮೋದಿಯವರಿಗೆ ಪತ್ರ ಬರೆಯುತ್ತಾರೆ ?
  • ಕೆಲವು ಕ್ರೈಸ್ತರು ಬಲವಂತವಾಗಿ ಹಿಂದೂಗಳನ್ನು ಮತಾಂತರಿಸುವುದನ್ನು ತಡೆಯುವ ಬಗ್ಗೆ ಭಾಜಪದ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆಯೇ ?

ಶಿಲ್ಲಾಂಗ (ಮೇಘಾಲಯ) – ಮೇಘಾಲಯ ಸರಕಾರದಲ್ಲಿನ ಭಾಜಪದ ಏಕೈಕ ಶ್ರಮ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಕ್ರೈಸ್ತರನ್ನು ರಕ್ಷಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯದಲ್ಲಿನ ಕ್ರೈಸ್ತರ ಸಮೀಕ್ಷೆ ನಡೆಸಲಾಗುವುದು ಎಂಬ ಹಿನ್ನೆಲೆಯಲ್ಲಿ ಶುಲಾಯಿಯವರು ಈ ಸಮೀಕ್ಷೆಯಲ್ಲಿ ಹಸ್ತಕ್ಷೇಪ ಮಾಡಬೇಕಾಗಿ ಮನವಿ ಮಾಡಿದ್ದಾರೆ. ಅವರು ’ಇಂತಹ ಸಮೀಕ್ಷೆಯು ಸಂವಿಧಾನ ವಿರೋಧಿಯಾಗಿದ್ದು ರಾಜ್ಯದಲ್ಲಿನ ಕ್ರೈಸ್ತ ನಾಗರಿಕರಲ್ಲಿ ಅವಿಶ್ವಾಸದ ಭಾವನೆಯನ್ನು ಹುಟ್ಟಿಸುತ್ತದೆ’ ಎಂದು ಹೇಳಿದ್ದಾರೆ. ಮೇಘಾಲಯದಲ್ಲಿ ಕೇವಲ ೨ ಭಾಜಪದ ಶಾಸಕರಿದ್ದಾರೆ. ರಾಜ್ಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಭಾಜಪದ ಸಮ್ಮಿಶ್ರ ಸರಕಾರವಿದೆ.

ಶುಲಾಯಿಯವರು ಈ ಪತ್ರದಲ್ಲಿ `ದಯವಿಟ್ಟು ಕರ್ನಾಟಕದಲ್ಲಿನ ಆರ್ಚ್ ಬಿಷಪ್ ಪೀಟರ ಮಚಾಡೋ ಮತ್ತು ಕ್ರೈಸ್ತ ಪಂಥದವರು ಮಂಡಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನಾನು ವಿನಂತಿಸುತ್ತಿದ್ದೇನೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ’ಜಾತ್ಯತೀತ’ ರಾಷ್ಟ್ರ ಎಂಬ ಪರಿಚಯವಿದ್ದು ಈ ಸಮೀಕ್ಷೆಯಿಂದ ಅದು ಮಲಿನವಾಗಬಹುದು’ ಎಂದು ಬರೆದಿದ್ದಾರೆ.