ಜಾಲೋರ (ರಾಜಸ್ಥಾನ) ಇಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ದೇವಸ್ಥಾನದ ವೃದ್ಧ ಅರ್ಚಕರ ಹತ್ಯೆ

  • ಕಾಂಗ್ರೆಸ್‌ನ ರಾಜ್ಯದಲ್ಲಿ ದೇವಸ್ಥಾನಗಳ ಅರ್ಚಕರು ಅಸುರಕ್ಷಿತ !
  • ಯಾವುದೇ ಪಕ್ಷದ ಸರಕಾರವಿದ್ದರೂ, ಅವರು ಅರ್ಚಕರು, ಸಾಧು, ಸಂತರು ಇವರ ಸಂರಕ್ಷಣೆ ಮಾಡುವಲ್ಲಿ ವಿಫಲವಾಗುತ್ತಿರುವುದು ನಿರಂತರವಾಗಿ ಕಂಡುಬರುತ್ತಿದೆ. ಈ ಸ್ಥಿತಿಯಿಂದ ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ ಎಂಬುದು ಗಮನಕ್ಕೆ ಬರುತ್ತದೆ !

ಜಾಲೊರ (ರಾಜಸ್ಥಾನ) – ಜಾಲೋರ ಜಿಲ್ಲೆಯ ಧೂಂಬಡಿಯ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ೭೦ ವರ್ಷದ ಅರ್ಚಕರಾದ ನೈನದಾಸ ವೈಷ್ಣವ ಇವರನ್ನು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ದಾಳಿಖೋರರು ಅವರ ಮೇಲೆ ಹಲ್ಲೆ ನಡೆಸಿದಾಗ ಅವರು ಕಿರುಚಾಡಿದ್ದರಿಂದ ಅಕ್ಕಪಕ್ಕದ ಜನರು ಧಾವಿಸಿ ಬಂದರು. ಆಗ ದಾಳಿಖೋರರು ಪರಾರಿಯಾದರು. ಜನರು ವೈಷ್ಣವ ಇವರನ್ನು ಆಸ್ಪತ್ರೆಗೆ ದಾಖಲಿಸಿದರು; ಆದರೆ ಅಲ್ಲಿ ಅವರು ಮೃತಪಟ್ಟರು. ಪೊಲೀಸರು ಹತ್ಯೆ ಮಾಡಿದವರನ್ನು ಪತ್ತೆ ಹಚ್ಚುತ್ತಿದ್ದಾರೆ.

ಕಳ್ಳತನ ಮಾಡುವ ಉದ್ದೇಶಕ್ಕಾಗಿ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ನೈನದಾಸ್ ವೈಷ್ಣವ ಇವರು ಕಳೆದ ೩೦ ವರ್ಷಗಳಿಂದ ಇಲ್ಲಿಯ ಹನುಮಾನ ದೇವಸ್ಥಾನದಲ್ಲಿ ಸೇವೆ ಮಾಡುತ್ತಿದ್ದರು. ಅಲ್ಲೇ ಪಕ್ಕದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು.