ಸಂತ ಸಮಾಜ, ಹಿಂದುತ್ವನಿಷ್ಠ ಮತ್ತು ಧರ್ಮಾಭಿಮಾನಿ ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ !
ನವ ದೆಹಲಿ – ಭಾರತೀಯ ರೈಲ್ವೆಯು ‘ರಾಮಾಯಣ ಎಕ್ಸ್.ಪ್ರೆಸ್’ ರೈಲಿನಲ್ಲಿ ವೇಟರ್ಗಳನ್ನು ಸಾಧುಗಳಂತಹ ಸಮವಸ್ತ್ರವನ್ನು ಧರಿಸಲು ನೀಡಿತ್ತು. ಇದನ್ನು ಸಂತ ಸಮಾಜ, ಹಿಂದುತ್ವನಿಷ್ಠ ಮತ್ತು ಧರ್ಮಾಭಿಮಾನಿ ಹಿಂದೂಗಳು ಪ್ರಖರವಾಗಿ ವಿರೋಧಿಸಿದ ನಂತರ ಕೊನೆಗೆ ರೈಲ್ವೆಯು ಈ ಸಮವಸ್ತ್ರವನ್ನು ಬದಲಾಯಿಸಿದೆ. ರೈಲ್ವೆಯು ‘ರಾಮಾಯಣ ಎಕ್ಸ್.ಪ್ರೆಸ್’ನಲ್ಲಿರುವ ಕೆಲಸಗಾರರ ಸಮವಸ್ತ್ರವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಈಗ ಈ ಕೆಲಸಗಾರರು ವ್ಯಾವಹಾರಿಕ ಬಟ್ಟೆಗಳಲ್ಲಿ ಕಂಡು ಬರಲಿದ್ದಾರೆ. ಜನರಿಗೆ ಆದಂತಹ ತೊಂದರೆಗಾಗಿ ನಾವು ಖೇದ ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದೆ.
Dress of Ramayan Express staff changed after seers’ protest https://t.co/BR9LxZtSSm pic.twitter.com/BstWEC5Evt
— The Times Of India (@timesofindia) November 23, 2021
’ರೈಲ್ವೆಯು ಕೆಲಸಗಾರರ ಸಮವಸ್ತ್ರವನ್ನು ಬದಲಾಯಿಸದಿದ್ದರೆ ಡಿಸೆಂಬರ್ ೧೨ ರಂದು ‘ರಾಮಾಯಣ ಎಕ್ಸ್.ಪ್ರೆಸ್’ ರೈಲನ್ನು ದೆಹಲಿಯಲ್ಲಿ ತಡೆಯಲಾಗುವುದು’ ಎಂದು ಸಂತ ಸಮಾಜವು ಎಚ್ಚರಿಕೆಯನ್ನು ನೀಡಿತ್ತು. ಸನಾತನದ ಖೇಡ (ರತ್ನಾಗಿರಿ) ಅಲ್ಲಿನ ಸಾಧಕರಾದ ಡಾ. ಅಶೋಕ ಶಿಂದೆಯವರೂ ಐ.ಆರ್.ಸಿ.ಟಿ.ಸಿ. ಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪತ್ರಕ್ಕೆ ‘ಸಮವಸ್ತ್ರವನ್ನು ಬದಲಾಯಿಸಲಾಗುವುದು’ ಎಂದು ರೇಲ್ವೆಯ ಓರ್ವ ಹಿರಿಯ ಅಧಿಕಾರಿಯಿಂದ ಉತ್ತರ ನೀಡಲಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು