
ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಮಾಜಿ ಅಧ್ಯಕ್ಷ ದಿವಂಗತ ಮಹಂತ ನರೇಂದ್ರ ಗಿರಿಯವರ ಸಂದೇಹಾಸ್ಪದ ಸಾವಿನ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐನವರು) ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಆನಂದಗಿರಿ ಸಹಿತ ಮೂರು ಜನರ ವಿರುದ್ಧ ಆರೋಪ ಪತ್ರ ದಾಖಲಿಸಿದ್ದಾರೆ. ಮಹಾಂತ ನರೇಂದ್ರ ಗಿರಿಯ ಇವರ ಮೃತ್ಯುವು ಆತ್ಮಹತ್ಯೆಯೇ ಆಗಿದೆ ಎಂದು ಸಿಬಿಐ ಹೇಳಿದೆ. ಆತ್ಮಹತ್ಯೆಗೆ ಮಹಂತ ಆನಂದಗಿರಿ, ಆಧ್ಯಾ ತಿವಾರಿ ಮತ್ತು ಅವರ ಮಗ ಸಂದೀಪ ತಿವಾರಿ ಇವರು ಪ್ರಚೋದಿಸಿರುವ ಆರೋಪವಿದೆ. ಈ ಮೂರೂ ಜನರ ಮೇಲೆ 306 ಮತ್ತು 120 ಕಲಂನ ಅಡಿಯಲ್ಲಿ ಅಪರಾಧ ದಾಖಲಿಸಲಾಗಿದೆ.
Mahant Narendra Giri death: CBI files chargesheet against accused Anand Giri & others https://t.co/45dEiI06I1
— Republic (@republic) November 20, 2021
ಆನಂದಗಿರಿ ಇವರು 2008 ರಲ್ಲಿ ಗಂಗಾ ಸೇನೆಯನ್ನು ಸ್ಥಾಪಿಸಿದ್ದರು ಎಂದು ಆರೋಪಪತ್ರದಲ್ಲಿ ಹೇಳಲಾಗಿದೆ. ಕುಂಭಮೇಳದಲ್ಲಿ ಅವರು ಸ್ವತಂತ್ರ ಛಾವಣಿ ನಿರ್ಮಿಸಿದ್ದರು. ಅಲ್ಲಿಂದಲೇ ಮಹಂತ ನರೇಂದ್ರ ಗಿರಿ ಮತ್ತು ಆನಂದಗಿರಿ ಇವರಲ್ಲಿ ಬಿರುಕು ಬಿಟ್ಟಿತ್ತು. ಮಹಂತ ನರೇಂದ್ರ ಗಿರಿ ಇವರು ಗಂಗಾ ಸೇನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಠದಲ್ಲಿರುವಾಗ ಆನಂದಗಿರಿ ಇವರು ಗಂಗಾ ಸೇನೆ ಸ್ಥಾಪಿಸಲು ಅನುಮತಿ ಪಡೆದಿರಲಿಲ್ಲ ಎಂದು ಮಹಂತ ನರೇಂದ್ರ ಗಿರಿ ಇವರು ಹೇಳಿದ್ದರು.
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್