ಕೇರಳದಲ್ಲಿ ಹಿಂದೂ ಯುವಕನು ಕ್ರೈಸ್ತ ಯುವತಿಯನ್ನು ಮದುವೆಯಾದನೆಂದು ಆಕೆಯ ಸಹೋದರನಿಂದ ಹಿಂದೂ ಯುವಕನಿಗೆ ಥಳಿತ

ಕ್ರೈಸ್ತ ಯುವಕನೊಬ್ಬ ಹಿಂದೂ ಹುಡುಗಿಯನ್ನು ಮದುವೆಯಾಗಿ ಅವಳ ಸಹೋದರ ಆತನಿಗೆ ಥಳಿಸುತ್ತಿದ್ದರೆ ಅದು `ರಾಷ್ಟ್ರೀಯ ಸುದ್ದಿ’ಯಾಗುತ್ತಿತ್ತು ಮತ್ತು ಎಲ್ಲಾ ಸೆಕ್ಯುಲರ್ ಮತ್ತು ರಾಜಕೀಯ ಪಕ್ಷಗಳು ಒಟ್ಟಾಗಿ ಹಿಂದೂಗಳನ್ನು ತಾಲಿಬಾನಿ ಎಂದು ಹಣೆಪಟ್ಟಿ ಕಟ್ಟುಬಿಡುತ್ತಿದ್ದರು !- ಸಂಪಾದಕರು 

ಸಾಂಕೇತಿಕ ಛಾಯಾಚಿತ್ರ

ತಿರುವನಂತಪುರಂ (ಕೇರಳ) – ಇಲ್ಲಿ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಮಿಥುನ್ ಕೃಷ್ಣ ಎಂಬ ಯುವಕ, ಆತನ ಪತ್ನಿ, ಸಹೋದರ ಹಾಗೂ ಸ್ನೇಹಿತನನ್ನು ಕ್ರೈಸ್ತರು ಥಳಿಸಿದ್ದಾರೆ. ಇದರಲ್ಲಿ ಮಿಥುನ್‍ನ ಮೆದುಳಿಗೆ ಗಾಯವಾಗಿದ್ದು, ಇಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಅಕ್ಟೋಬರ್ 31 ರಂದು ಚಿರಾಯಂಕಿಜು ಬೀಚ್ ರಸ್ತೆಯ ಬಳಿ ನಡೆದಿದೆ.

ಅಕ್ಟೋಬರ್ 29 ರಂದು ಮಿಥುನ್ 24 ವರ್ಷದ ಕ್ರೈಸ್ತ ಯುವತಿ ದೀಪ್ತಿಯನ್ನು ಮದುವೆಯಾದನು. ಈ ಮದುವೆಗೆ ದೀಪ್ತಿಯ ಕುಟುಂಬದವರಿಂದ ವಿರೋಧವಿತ್ತು. ದೀಪ್ತಿಯ ಸಹೋದರ ದಾನಿಶ್ ಮಿಥುನ್‍ನನ್ನು ಮನೆಗೆ ಕರೆದಿದ್ದ. ಮಿಥುನ್ ಮನೆಗೆ ಹೋದಾಗ ದಾನಿಶ್ ಮಿಥುನ್‍ನನ್ನು ಮತಾಂತರವಾಗುವಂತೆ ಹೇಳಿದ್ದಾನೆ. ಅದಕ್ಕೆ ಮಿಥುನ್ ನಿರಾಕರಿಸಿದನು, ಆಗ ದಾನಿಶ್‍ನು ಮಿಥುನ್, ಅವನ ಸಹೋದರ, ಪತ್ನಿ ದೀಪ್ತಿ ಮತ್ತು ಸ್ನೇಹಿತನನ್ನು ಥಳಿಸಿದ್ದಾನೆ. ಈ ಘಟನೆಯ ನಂತರ ದಾನಿಶ್ ಪರಾರಿಯಾಗಿದ್ದಾನೆ.