
ಕೇದಾರನಾಥ (ಉತ್ತರಾಖಂಡ) – ಇಲ್ಲಿನ ಆದಿ ಶಂಕರಾಚಾರ್ಯರ ಸಮಾಧಿಯ ಸ್ಥಳದಲ್ಲಿ ಸ್ಥಾಪಿಸಲಾದ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಅನಾವರಣಗೊಳಿಸಲಾಯಿತು. ಶಂಕರಾಚಾರ್ಯರ ಈ ವಿಗ್ರಹವು 12 ಅಡಿ ಎತ್ತರ ಮತ್ತು 35 ಟನ್ ತೂಕವಿದೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಶಂಕರಾಚಾರ್ಯರ ಸಮಾಧಿಸ್ಥಳವನ್ನು ಉದ್ಘಾಟಿಸಿದರು. ಈ ಸಮಾಧಿಸ್ಥಳವು 2013 ರಲ್ಲಿ ಜಲಪ್ರಳಯದಲ್ಲಿ ನಾಶವಾಗಿತ್ತು. ಕೇರಳದಲ್ಲಿ ಜನಿಸಿದ ಆದಿ ಶಂಕರಾಚಾರ್ಯರು ಕೇದಾರನಾಥ ದೇವಾಲಯದ ಜೀರ್ಣೋದ್ಧಾರ ಮಾಡಿದ್ದರು. ಪ್ರಧಾನಿ ಮೋದಿ ಕೇದಾರನಾಥ ದೇವಸ್ಥಾನದಲ್ಲಿ ಪೂಜೆ-ಅರ್ಚನೆ ಮತ್ತು ರುದ್ರಾಭಿಷೇಕ ನೆರವೇರಿಸಿದರು. ಈ ಸಂದರ್ಭದಲ್ಲಿ ಉತ್ತರಾಖಂಡದ ರಾಜ್ಯಪಾಲ (ನಿವೃತ್ತ) ಲೆಫ್ಟಿನೆಂಟ್ ಜನರಲ್ ಗರುಮಿತ್ ಸಿಂಗ್ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉಪಸ್ಥಿತರಿದ್ದರು.
PM Modi unveils Adi Guru Shankaracharya’s statue in Kedarnath: 5 facts you must knowhttps://t.co/Czx3UymOB1
— TIMES NOW (@TimesNow) November 5, 2021
ನಾನು ನನ್ನ ಕಣ್ಣುಗಳಿಂದ ವಿನಾಶವನ್ನು ನೋಡಿದೆ ! – ಪ್ರಧಾನಿ ಮೋದಿ
ಈ ಸಮಯದಲ್ಲಿ ನೆರೆದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2013 ರಲ್ಲಿ ಜಲ ಪ್ರಳಯವಾಯಿತೋ, ಆಗ ನಾನು ಗುಜರಾತ್ನ ಮುಖ್ಯಮಂತ್ರಿಯಾಗಿದ್ದೆ. ಆ ಸಮಯದಲ್ಲಿ, ನಾನು ನನ್ನನ್ನು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಇಲ್ಲಿ ಓಡಿ ಬಂದೆ. ಇಲ್ಲಿನ ವಿನಾಶವನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ಆ ನೋವನ್ನು ಸಹಿಸಿಕೊಳ್ಳುತ್ತಿದ್ದೆ. ಇಲ್ಲಿಗೆ ಬರುವ ಜನರಿಗೆ, ನಮ್ಮ ಕೇದಾರಧಾಮವನ್ನು ಮತ್ತೆ ಮರುನಿರ್ಮಾಣ ಆಗುತ್ತದೆಯೋ ಇಲ್ಲವೋ ? ಎಂದು ಅನಿಸುತ್ತಿತ್ತು. ಆದರೆ ನನ್ನ ಒಳಗಿನ ಧ್ವನಿಯು, ಇದು ಮೊದಲಿಗಿಂತ ಹೆಚ್ಚು ಹೆಮ್ಮೆಯಿಂದ ಎದ್ದು ನಿಲ್ಲುತ್ತದೆ ಎಂದು ಹೇಳುತ್ತಿತ್ತು. ಆದಿ ಶಂಕರಾಚಾರ್ಯರ ಸಮಾಧಿ ಜೀರ್ಣೋದ್ಧಾರಕ್ಕೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಇದು ಭಾರತದ ಆಧ್ಯಾತ್ಮಿಕ ಸಮೃದ್ಧಿ ಮತ್ತು ಪರಂಪರೆಯ ಒಂದು ದೃಶ್ಯವಾಗಿದೆ ಎಂದು ಹೇಳಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !