ಹುಬ್ಬಳ್ಳಿ : ಹುಬ್ಬಳ್ಳಿಯ ದೇಶಪಾಂಡೆ ನಗರದ ಭಾಜಪ ಕಾರ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಭಾಜಪ ಕಾರ್ಪೊರೇಟರ್ ಗಳು, MLA ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳು, ಅಧ್ಯಕ್ಷರು ಹೀಗೆ ಸುಮಾರು 68 ಜನಪ್ರತಿನಿಧಿಗಳಿಗೆ ಹಲಾಲ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಾಲಯದ TV ಯಲ್ಲಿ ಎಲ್ಲ ಮಾಹಿತಿಗಳನ್ನು ತೋರಿಸಲಾಯಿತು. ದಕ್ಷಿಣ ಕರ್ನಾಟಕದ ಸಮಿತಿಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಶ್ರೀ. ರಮೇಶ ಶಿಂದೆಯವರ ಪರಿಚಯವನ್ನು ಆರಂಭದಲ್ಲಿ ಎಲ್ಲರಿಗೂ ಮಾಡಿಕೊಟ್ಟರು.

ಸುಮಾರು 45 ನಿಮಿಷಗಳ ಕಾಲ ವಿಷಯ ಮಾಹಿತಿ ಹಾಗೂ ಪ್ರಶ್ನೋತ್ತರಗಳು ನಡೆದವು. ಕಾರ್ಪೊರೇಟರ್ ಶ್ರೀ. ತಿಪ್ಪಣ್ಣಾ ಮಜ್ಜಿಗಿ ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇಷ್ಟೆಲ್ಲ ಮಾಹಿತಿಗಳು ಮತ್ತು ಇಷ್ಟು ಗಂಭೀರ ವಿಷಯಗಳು ತಮಗೆ ಗೊತ್ತೇ ಇರಲಿಲ್ಲ, ಇದನ್ನು ಪ್ರತಿಯೊಬ್ಬರ ತನಕ ತಲುಪಿಸಬೇಕಿದೆ ಎಂದು ಎಲ್ಲರೂ ಹೇಳಿದರು. ಈ ತರಹದ ಬೈಠಕಗಳನ್ನು ತಾವು ತಮ್ಮ ಕ್ಷೇತ್ರದಲ್ಲಿಯೂ ಇಟ್ಟುಕೊಳ್ಳುತ್ತೇವೆ ಎಂದು ೨-೩ ಕಾರ್ಪೊರೇಟರ್ ಗಳು ಹೇಳಿದರು.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ