ತ್ರಿಶೂರ (ಕೇರಳ)ದಲ್ಲಿ ಚಾಕುವಿನಿಂದ ಇರಿದು ಓರ್ವ ಭಾಜಪದ ಕಾರ್ಯಕರ್ತನ ಕೊಲೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ರಾಜಕೀಯ ಸಂಘಟನೆ ಎಸ್.ಡಿ.ಪಿ.ಐ.ನ ಮೇಲೆ ಸಂದೇಹ

  • ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಅಧಿಕಾರಾವಧಿಯಲ್ಲಿ ಭಾಜಪ ಮತ್ತು ಸಂಘದ ಕಾರ್ಯಕರ್ತರ ಸತತವಾಗಿ ಆಗುತ್ತಿರುವ ಹತ್ಯೆಯನ್ನು ನೋಡಿದರೆ ‘ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯೇ ?’ ಎಂದು ಜಾತ್ಯತೀತ ಮತ್ತು ಪ್ರಗತಿ(ಅಧೋಗತಿ)ಪರರು ಏಕೆ ಪ್ರಶ್ನಿಸುವುದಿಲ್ಲ ? ಈ ರೀತಿಯ ಘಟನೆಗಳೇನಾದರೂ ಪ್ರಗತಿ(ಅಧೋಗತಿ)ಪರರ ವಿಷಯದಲ್ಲಿ ಭಾಜಪದ ರಾಜ್ಯಗಳಲ್ಲಿ ಸಂಭವಿಸುತ್ತಿದ್ದರೆ, ಆಗ ಅದೇ ಜನರು ಆಕಾಶ ಪಾತಾಳ ಒಂದು ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
  • ಸಂವೇದನಾಶೀಲ ರಾಜ್ಯಗಳು, ನಗರಗಳು ಇತ್ಯಾದಿ ಸ್ಥಳಗಳಲ್ಲಿ ಹಿಂದುತ್ವನಿಷ್ಠ ಮುಖಂಡರು, ಪದಾಧಿಕಾರಿಗಳು ಮುಂತಾದವರ ರಕ್ಷಣೆಗೋಸ್ಕರ ಕೇಂದ್ರ ಸರಕಾರವು ಅವರಿಗೆ ವಿಶೇಷ ಸಂರಕ್ಷಣೆ ಪೂರೈಸಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ತ್ರಿಶೂರ (ಕೇರಳ) – ಇಲ್ಲಿಯ ೩೫ ವರ್ಷ ವಯಸ್ಸಿನ ಭಾಜಪದ ಕಾರ್ಯಕರ್ತ ಕೊಪ್ಪಾರಾ ಬೀಜೂರವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಯಿತು. ಬೀಜೂರವರು ೨ ತಿಂಗಳ ಹಿಂದೆ ಕೊಲ್ಲಿ ದೇಶದಿಂದ ಕೆಲಸ ಹಿಂದಿರುಗಿದ್ದರು. ಸದ್ಯ ಅವರು ಇಲ್ಲಿನ ಮನಾಥಲಾ ನಾಗಾಯಕ್ಷೀ ದೇವಾಲಯದ ಸಮೀಪದಲ್ಲಿ ಸಾಕಿದ ಪಾರಿವಾಳಗಳನ್ನು ಮಾರಾಟ ಮಾಡುವ ವ್ಯವಸಾಯ ಮಾಡುತ್ತಿದ್ದರು.

ಅಕ್ಟೋಬರ್ ೩೧ ರಂದು ಬೀಜೂರವರ ಅಂಗಡಿಯ ಹತ್ತಿರ ಸಜೀವನ ಎಂಬ ಯುವಕ ಹಾಗೂ ಇತರರಲ್ಲಿ ವಾಗ್ವಾದ ನಡೆದಿತ್ತು. ಈ ವಾದದಿಂದಲೇ ಬೀಜೂರವರನ್ನು ಸಜೀವನನೆಂದು ತಿಳಿದು ಕೊಲೆ ಮಾಡಲಾಗಿದೆ ಎಂದು ಸಂದೇಹ ವ್ಯಕ್ತ ಪಡಿಸಲಾಗುತ್ತಿದೆ. ಬೀಜೂರವರ ಕೊಲೆಯ ಬಳಿಕ ಭಾಜಪವು ಅಲ್ಲಿ ‘ಬಂದ್’ಗೆ ಕರೆ ನೀಡಿತು. ‘ಈ ಕೊಲೆಯ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅವರ ರಾಜಕೀಯ ಸಂಘಟನೆಯಾದ ಎಸ್.ಡಿ.ಪಿ.ಐ. (ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ)ದ ಕಾರ್ಯಕರ್ತರಿದ್ದಾರೆ’, ಎಂದು ಭಾಜಪವು ಆರೋಪಿಸಿದೆ. ಈ ಕೊಲೆಯ ಮೂಲಕ ಅಲ್ಲಿ ಅಶಾಂತಿಯನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಲಾಗುತ್ತಿದೆ.