‘ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಾದ ದಾಳಿಯಲ್ಲಿ ದೇವಾಲಯಗಳ ಧ್ವಂಸ ಮತ್ತು ಬಲಾತ್ಕಾರದ ಘಟನೆಗಳು ನಡೆದೇ ಇಲ್ಲ !’ (ವಂತೆ) – ಬಾಂಗ್ಲಾದೇಶದ ವಿದೇಶಾಂಗ ಸಚಿವರು

4 ಮುಸಲ್ಮಾನರು ಮತ್ತು 2 ಹಿಂದೂಗಳ ಮರಣ

ಅನೇಕ ಮೂರ್ತಿಗಳ ಧ್ವಂಸವಾಗಿರುವುದಾಗಿ ಒಪ್ಪಿಗೆ

* ಬಾಂಗ್ಲಾದೇಶ ಸರಕಾರವು ತನ್ನ ಮಾನವನ್ನು ಉಳಿಸಿಕೊಳ್ಳುವುದ್ದಕ್ಕಾಗಿ ಈ ರೀತಿಯ ಹುಸಿ ದಾವೆ ಮಾಡುತ್ತಿದೆ, ಎಂದು ಹೇಳಲು ಯಾವುದೇ ತಜ್ಞರ ಅಗತ್ಯವಿಲ್ಲ. ಜಗತ್ತು ನೋಡಿರುವುದನ್ನು ನೇರವಾಗಿ ನಿರಾಕರಿಸುವುದು ಸುಳ್ಳಾಗಿದೆ. ಈ ವಿಷಯದಲ್ಲಿ ಭಾರತವು ಜಾಗತಿಕ ಸಮಿತಿಯಿಂದ ವಿಚಾರಣೆ ನಡೆಸುವಂತೆ ಆಗ್ರಹಿಸಲಿ ಹಾಗೂ ಸತ್ಯವನ್ನು ಜಗತ್ತಿನ ಮುಂದೆ ತರಲಿ ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

(ಬಲಭಾಗದಲ್ಲಿ) ಬಾಂಗ್ಲಾದೇಶದ ವಿದೇಶಾಂಗ ಸಚಿವರಾದ ಡಾ. ಎಕೆ ಅಬ್ದುಲ ಮೊಮೆನ್‍

ಢಾಕಾ (ಬಾಂಗ್ಲಾದೇಶ) – ಈಗ ನಡೆಯುತ್ತಿರುವುದು ಪ್ರಚಾರದ ತದ್ವಿರುದ್ಧದ ಸ್ಥಿತಿಯಾಗಿದೆ. ದೇಶದಲ್ಲಿ ಇತ್ತೀಚೆಗಷ್ಟೇ ನಡೆದ ಹಿಂಸಾಚಾರದಲ್ಲಿ ಕೇವಲ 6 ಜನರಷ್ಟೇ ಮೃತಪಟ್ಟಿದ್ದಾರೆ. ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ 4 ಮುಸಲ್ಮಾನರು ಮತ್ತು 2 ಹಿಂದೂಗಳು ಸಾವನ್ನಪ್ಪಿದರು. ಅದರಲ್ಲಿ ಓರ್ವ ಹಿಂದೂ ಮೃತಪಟ್ಟಿರುವುದು `ಸಾಮಾನ್ಯ ಸ್ಥಿತಿಯಲ್ಲಾಯಿತು’ ಹಾಗೂ ಮತ್ತೊಬ್ಬನು ಕೆರೆಗೆ ಹಾರಿ ಸಾವನ್ನಪ್ಪಿದ್ದಾನೆ. ಈ ಹಿಂಸಾಚಾರದಲ್ಲಿ ಒಂದೂ ಬಲಾತ್ಕಾರದ ಘಟನೆ ನಡೆದಿಲ್ಲ ಮತ್ತು ಹಿಂದೂಗಳ ಒಂದು ದೇವಾಲಯದ ಮೇಲೆಯೂ ದಾಳಿ ಮಾಡಿ ಅದನ್ನು ನಾಶ ಮಾಡಲಿಲ್ಲ; ಆದರೆ ಕೆಲವೆಡೆಗಳಲ್ಲಿ ಮೂರ್ತಿಗಳ ಧ್ವಂಸ ಮಾಡಲಾಗಿದ್ದು, ಅದು ದುರ್ದೈವದ ಘಟನೆಯಾಗಿದೆ, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವರಾದ ಡಾ. ಎಕೆ ಅಬ್ದುಲ ಮೊಮೆನ್‍ರವರು ಹಿಂಸಾಚಾರದ ಘಟನೆಯ ಬಗ್ಗೆ ಮಾಹಿತಿ ನೀಡಿದರು.

ಡಾ. ಮೊಮೇನರವರು ಮುಂದೆ ಮಾತನಾಡುತ್ತಾ, ಸಾಮಾಜಿಕ ಮಾಧ್ಯಮಗಳು ಹಾಗೂ ಕೆಲವು ‘ಉತ್ಸಾಹಿ’ ಪ್ರಚಾರ ಮಾಧ್ಯಮಗಳು ಈ ವಿಷಯವಾಗಿ ತಪ್ಪಾದ ಮಾಹಿತಿಯನ್ನು ಹಬ್ಬಿದರು. ಇದು ಸರಕಾರವನ್ನು ಅವಮಾನಿಸುವ ಪ್ರಯತ್ನವಾಗಿತ್ತು. ಕಳೆದ ಕೆಲವು ವರ್ಷಗಳಿಂದ ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ಮಂಟಪದ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ; ಏಕೆಂದರೆ ಸರಕಾರವು ಅದಕ್ಕೆ ಅನುದಾನ ನೀಡುತ್ತದೆ. (ಸರಕಾರವು ಅನುದಾನ ನೀಡುತ್ತಿದ್ದರೆ ಹಾಗೂ ಮಂಟಪಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರಬಹುದು; ಆದರೆ ಸರಕಾರವು ಅವರಿಗೆ ಸಂರಕ್ಷಣೆ ಒದಗಿಸುವುದಿಲ್ಲ ಹಾಗೂ ಅದರಿಂದ ಮತಾಂಧರು ಮಂಟಪಗಳನ್ನು ಗುರಿ ಮಾಡುತ್ತಿದ್ದಾರೆ, ಎಂಬ ವಸ್ತುಸ್ಥಿತಿಯನ್ನು ಅವರೇಕೆ ಒಪ್ಪಿಕೊಳ್ಳುವುದಿಲ್ಲ? – ಸಂಪಾದಕರು)