ಹಿಂದೂ ಗ್ರಾಹಕರಿಗೆ ಕರೆ – ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನ! – ಹಿಂದೂ ಜನಜಾಗೃತಿ ಸಮಿತಿ

‘ಹಲಾಲ್ ಆರ್ಥಿಕತೆ’ ಇದು ‘ಸೆಕ್ಯುಲರ್’ ಭಾರತದ್ದೇ ?

‘ಹಲಾಲ್’ ಇದು ಮೂಲತಃ ಅರೇಬಿಕ್ ಪದವಾಗಿದ್ದು ಇಸ್ಲಾಮ್‌ಗನುಸಾರ ನ್ಯಾಯಸಮ್ಮತ ಎಂಬುದು ಇದರ ಅರ್ಥವಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿ ಮಾತ್ರವಿದ್ದ, ‘ಹಲಾಲ್’ಅನ್ನು ಈಗ ಸಸ್ಯಾಹಾರಿ ಆಹಾರಗಳ ಸಹಿತ, ಸೌಂದರ್ಯವರ್ಧಕಗಳು, ಔಷಧಗಳು, ಆಸ್ಪತ್ರೆಗಳು, ಮನೆಗಳು ಸೇರಿದಂತೆ ಹಲವು ವಿಷಯಗಳಲ್ಲಿಯೂ ಈಗ ಬೇಡಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಹಲಾಲ್ ಇಂಡಿಯಾ, ಜಮೀಯತ್ ಉಲೇಮಾ-ಎ-ಹಿಂದ್ ನಂತಹ ಇಸ್ಲಾಮಿಕ್ ಸಂಸ್ಥೆಗಳಿಗೆ ಶುಲ್ಕ ಪಾವತಿಸಿ ಅವರಿಂದ ‘ಹಲಾಲ್ ಪ್ರಮಾಣಪತ್ರ’ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಜಾತ್ಯತೀತ ಭಾರತದಲ್ಲಿ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ದಿಂದ ಅಂದರೆ (FSSAI)ನಿಂದ ಪ್ರಮಾಣಪತ್ರವನ್ನು ಪಡೆದ ನಂತರ ಈ ಖಾಸಗಿ ಇಸ್ಲಾಮಿಕ್ ಪ್ರಮಾಣಪತ್ರವನ್ನು ಪಡೆಯಲು ಬಲವಂತವೇಕೆ ? ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಎಂದು ಕರೆಯಲ್ಪಡುವವರು ಕೇವಲ ಶೇ. 15 ರಿಂದ 17 ರಷ್ಟು ಇರುವಾಗ ಉಳಿದ ಬಹುಸಂಖ್ಯಾತ ಹಿಂದೂಗಳು ಹಾಗೂ ಇತರ ಧರ್ಮದವರ ಮೇಲೆ ‘ಹಲಾಲ್’ ಅನ್ನು ಏಕೆ ಹೇರಲಾಗುತ್ತದೆ ? ಅದರಲ್ಲೂ ಮೆಕ್‌ಡೊನಾಲ್ಡ್ ಮತ್ತು ಡೊಮಿನೊಸ್‌ನಂತಹ ವಿದೇಶಿ ಕಂಪನಿಗಳು ಭಾರತದ ಎಲ್ಲಾ ಗ್ರಾಹಕರಿಗೆ ‘ಹಲಾಲ್’ ಆಹಾರವನ್ನು ನೀಡುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ‘ಹಲಾಲ್ ಪ್ರಮಾಣೀಕರಣ’ದ ಮೂಲಕ ಗಳಿಸಿದ ಕೋಟ್ಯಂತರ ರೂಪಾಯಿಗಳು ಸರಕಾರಕ್ಕೆ ಸಿಗುವುದಿಲ್ಲ; ಅದು ಕೆಲವು ಇಸ್ಲಾಮಿಕ್ ಸಂಘಟನೆಗಳಿಗೆ ಸಿಗುತ್ತಿವೆ. ಈ ಪ್ರಮಾಣಪತ್ರಗಳನ್ನು ನೀಡಿರುವ ಕೆಲವು ಸಂಘಟನೆಗಳ ಪೈಕಿ ಕೆಲವು ಸಂಘಟನೆಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಮತಾಂಧರನ್ನು ಬಿಡುಗಡೆಗೊಳಿಸಲು ನ್ಯಾಯಾಂಗ ಸಹಾಯವನ್ನು ಮಾಡುತ್ತಿವೆ. ಜಾತ್ಯತೀತ ಭಾರತದಲ್ಲಿ ಇಂತಹ ‘ಧರ್ಮಾಧಾರಿತ ಸಮನಾಂತರ ಆರ್ಥಿಕತೆ’ಯನ್ನು ರಚಿಸುವುದು, ಇದು ದೇಶದ ಭದ್ರತೆಗೆ ತುಂಬಾ ಅಪಾಯಕಾರಿಯಾಗಿದ್ದು ಸರಕಾರ ‘ಹಲಾಲ್ ಪ್ರಮಾಣೀಕರಣ’ ಪದ್ದತಿಯನ್ನು ಕೂಡಲೇ ನಿಲ್ಲಿಸಬೇಕು, ಈ ಬೇಡಿಕೆಯೊಂದಿಗೆ ಹಿಂದೂಗಳು ಈ ದೀಪಾವಳಿಯ ಸಮಯದಲ್ಲಿ ‘ಹಲಾಲ್‌ಮುಕ್ತ ದೀಪಾವಳಿ’ ಅಭಿಯಾನದಲ್ಲಿ ಕೈಜೋಡಿಸಬೇಕು ಮತ್ತು ‘ಹಲಾಲ್-ಪ್ರಮಾಣೀಕೃತ’ ಉತ್ಪನ್ನಗಳನ್ನು ಬಹಿಷ್ಕರಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಕರೆ ನೀಡಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಇವರೂ ಮಾರ್ಗದರ್ಶನ ಮಾಡಿದರು. ಈ ವೇಳೆ ಶ್ರೀರಾಮ ಸೇನೆಯ ಹುಬ್ಬಳ್ಳಿಯ ಜಿಲ್ಲಾ ಪ್ರಮುಖರಾದ ಶ್ರೀ. ಅಣ್ಣಪ್ಪ ದೀವಟಗಿ ಮತ್ತು ಶ್ರೀ. ಮಂಜೂ ಕಾಟಕರ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕಾರ ಶ್ರೀ. ಗುರುಪ್ರಸಾದ ಗೌಡ ಇವರೂ ಉಪಸ್ಥಿತರಿದ್ದರು.

‘ಎಲ್ಲಕ್ಕಿಂತ ಆಘಾತಕರ ಸಂಗತಿಯೆಂದರೆ ಇಂದಿಗೂ ಜಾತ್ಯತೀತ ಭಾರತದಲ್ಲಿ ‘ಭಾರತೀಯ ರೈಲ್ವೆ’, ಮತ್ತು ‘ಪ್ರವಾಸೋದ್ಯಮ ನಿಗಮ’ದಂತಹ ಸರಕಾರಿ ಸಂಸ್ಥೆಗಳಲ್ಲಿ ಸಹ ‘ಹಲಾಲ್ ಪ್ರಮಾಣೀಕೃತ’ ಆಹಾರಗಳನ್ನೇ ನೀಡಲಾಗುತ್ತಿದೆ. ಶುದ್ಧ ಸಸ್ಯಾಹಾರಿ ತಿಂಡಿಗಳಿಂದ ಹಿಡಿದು ಒಣಗಿಸಿದ ಹಣ್ಣುಗಳು, ಸಿಹಿತಿಂಡಿಗಳು, ಚಾಕೊಲೇಟ್‌ಗಳು, ಧಾನ್ಯಗಳು, ಎಣ್ಣೆಗಳು, ಸೋಪುಗಳು, ಶಾಂಪೂಗಳು, ಟೂತ್‌ಪೇಸ್ಟ್‌ಗಳು, ಕಾಡಿಗೆ, ಲಿಪ್‌ಸ್ಟಿಕ್‌ಗಳು ಇನ್ನಿತರ ಸೌಂದರ್ಯವರ್ಧಕಗಳು ‘ಹಲಾಲ್ ಪ್ರಮಾಣೀಕೃತ’ ಆಗುತ್ತಿವೆ. ಇಂಗ್ಲೆಂಡಿನಲ್ಲಿ ನಿಕೋಲಸ್ ತಾಲೇಬ್ ಎಂಬ ವಿದ್ವಾಂಸರು ಇದನ್ನು ‘ಮೈನರಟಿ ಡಿಕ್ಟೆಟರಶಿಪ್’ ಎಂದು ಹೇಳಿದ್ದಾರೆ. ಇದು ಹೀಗೆಯೇ ಮುಂದುವರಿದರೆ, ಭಾರತ ‘ಇಸ್ಲಾಮೀಕರಣ’ದತ್ತ ಸಾಗುತ್ತಿದೆ ಎಂದೇ ಹೇಳುವುದರಲ್ಲಿ ತಪ್ಪಿಲ್ಲ. ಭಾರತ ಸರಕಾರದ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ವು (ಎಫ್‌ಎಸ್‌ಎಸ್‌ಎಐ) ಇರುವಾಗ ಭಾರತದಲ್ಲಿ ‘ಹಲಾಲ್ ಪ್ರಮಾಣಪತ್ರ’ ನೀಡುವ ಇಸ್ಲಾಮಿಕ್ ಸಂಸ್ಥೆಗಳ ಅವಶ್ಯಕತೆ ಏನಿದೆ ? ಈ ಹಲಾಲ್ ಪ್ರಮಾಣಪತ್ರಕ್ಕೆ ಮೊದಲು 21,5000 ರೂಪಾಯಿ ಮತ್ತು ಪ್ರತಿವರ್ಷ ನವೀಕರಣಕ್ಕೆ 15,000 ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. ಇದರಿಂದ ನಿರ್ಮಾಣವಾಗುತ್ತ್ತಿರುವ ಹಲಾಲ್‌ನ ಸಮಾನಾಂತರ ಆರ್ಥಿಕತೆಯನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ, ಅದಕ್ಕಾಗಿಯೇ ಈ ವರ್ಷದ ದೀಪಾವಳಿಗೆ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರ ಹಕ್ಕು ಎಂದು ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳು, ಮೆಕ್‌ಡೊನಾಲ್ಡ್ ಮತ್ತು ಡೊಮಿನೋಸ್ ಆಹಾರವನ್ನು ಬಹಿಷ್ಕರಿಸಬೇಕು ಮತ್ತು ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನದಲ್ಲಿ ಭಾಗವಹಿಸಬೇಕು, ಎಂದು ಸಮಿತಿಯು ಮನವಿ ಮಾಡಿದೆ. ಸಮಿತಿಯು ಆಂದೋಲನಗಳು, ಮನವಿಗಳು, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಜಾಗೃತಿ ಮೂಡಿಸುತ್ತಿದೆ’ ಎಂದೂ ಶ್ರೀ. ಶಿಂದೆಯವರು ಹೇಳಿದರು

ಹಲಾಲ್‌ಮುಕ್ತ ದೀಪಾವಳಿ ಆಚರಿಸಿ !- ಶ್ರೀ. ಪ್ರಮೋದ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ

ಶ್ರೀ. ಪ್ರಮೋದ ಮುತಾಲಿಕ

ಇಂದು ಕೇವಲ ಶೇ. 15-20 ರಷ್ಟು ಇರುವ ಮುಸಲ್ಮಾನರಿಗಾಗಿ ಬಹುಸಂಖ್ಯಾತ ಹಿಂದೂಗಳು ಹಲಾಲ್ ಉತ್ಪನ್ನ ತಿನ್ನುವ ಪರಿಸ್ಥಿತಿ ಉದ್ಭವಿಸಿದೆ. ಹಲಾಲ್‌ಗೂ ಹಿಂದೂಗಳಿಗೂ ಸಂಬಂಧವಿಲ್ಲ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ. ಕೇವಲ ಮಾಂಸಕ್ಕೆ ಸೀಮಿತವಾಗಿದ್ದ ಇದು ಇಂದು ಎಲ್ಲ ಉತ್ಪನ್ನಗಳಿಗೂ ವ್ಯಾಪಿಸಿದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದಲೂ ಇದು ಅಪಾಯಕಾರಿಯಾಗಿದೆ. ಹಾಗಾಗಿ ಹಲಾಲ್ ಉತ್ಮನ್ನಗಳನ್ನು ಬಹಿಷ್ಕರಿಸಿ ಹಲಾಲ್‌ಮುಕ್ತ ದೀಪಾವಳಿ ಆಚರಿಸೋಣ.