ಗಂಗಾ ನದಿಯಲ್ಲಿ ದೋಣಿಯಲ್ಲಿ ಮಾಂಸ ಮತ್ತು ಮದ್ಯದ ಪಾರ್ಟಿ ಮಾಡಿದ ಘಟನೆ: ೫ ಹಿಂದೂ ಯುವಕರ ಬಂಧನ

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿ ಗಂಗಾ ನದಿಯ ಮಧ್ಯಭಾಗದಲ್ಲಿ ಚಿಕನ್ ತಿಂದು ಮದ್ಯದ ಪಾರ್ಟಿ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಪೊಲೀಸರು ಐವರನ್ನೂ ಬಂಧಿಸಿದ್ದಾರೆ. ಅಲ್ಲದೆ ದೋಣಿಯನ್ನೂ ಜಪ್ತಿ ಮಾಡಲಾಗಿದೆ. ಈ ಘಟನೆ ದಶಾಶ್ವಮೇಧ ಘಾಟ್ ಸಮೀಪ ನಡೆದಿದೆ.

೧. ವಿಡಿಯೋದಲ್ಲಿ ಐವರು ಆರೋಪಿಗಳು ದೋಣಿಯಲ್ಲಿ ಚಿಕನ್ ಮತ್ತು ಮದ್ಯದ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಬಂಧಿತ ಆರೋಪಿಗಳಲ್ಲಿ ದೀಪಕ ಕುಮಾರ್, ಅಜಯ್ ಸಾಹ್ನಿ, ಅರುಣ್ ಕುಮಾರ್ ಸಾಹ್ನಿ, ಅನುರಾಗ ನಿಷಾದ್ ಮತ್ತು ರಾಹುಲ್ ಸಾಹ್ನಿ ಸೇರಿದ್ದಾರೆ. ಇವರೆಲ್ಲರ ವಯಸ್ಸು ೨೫ ರಿಂದ ೩೨ ವರ್ಷದೊಳಗಿದೆ.

೨. ದಶಾಶ್ವಮೇಧದ ಸಹಾಯಕ ಪೊಲೀಸ್ ಆಯುಕ್ತ ಅತುಲ ಅಂಜನ್ ತ್ರಿಪಾಠಿ ಅವರು ಮಾತನಾಡಿ, “ವಿಡಿಯೋ ನೋಡಿದಾಗ ಅದು ಹಳೆಯದು ಎಂದು ಅನಿಸುತ್ತಿದೆ. ಈ ವಿಡಿಯೋದಲ್ಲಿ ಭಾಜಪ ನಗರಸೇವಕರು ಎಲ್ಲೂ ಕಾಣುತ್ತಿಲ್ಲ; ಆದರೆ ಆ ದೋಣಿ ಖಂಡಿತವಾಗಿಯೂ ಅವರ ಅಥವಾ ಅವರ ಕುಟುಂಬದ ಸದಸ್ಯರೊಬ್ಬರದಾಗಿದೆ” ಎಂದು ತಿಳಿಸಿದ್ದಾರೆ.

೩. ಇದಕ್ಕೂ ಮುನ್ನ ವಾರಣಾಸಿಯಲ್ಲಿ ಮುಸ್ಲಿಮರು ಗಂಗಾ ನದಿಯಲ್ಲಿ ಇಫ್ತಾರ್ ಪಾರ್ಟಿ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಆ ಯುವಕರು ಚಿಕನ್ ಬಿರಿಯಾನಿ ತಿಂದು ಮೂಳೆಗಳನ್ನು ಗಂಗಾ ನದಿಗೆ ಎಸೆದಿದ್ದರು.

ಸಂಪಾದಕೀಯ ನಿಲುವು

ಕಳೆದ ಬಾರಿ ಮುಸ್ಲಿಮರು ಗಂಗಾ ನದಿಯಲ್ಲಿ ದೋಣಿಯಲ್ಲಿ ಇಫ್ತಾರ್ ಔತಣಕೂಟವನ್ನು ಏರ್ಪಡಿಸಿ, ಮೂಳೆಗಳನ್ನು ನದಿಗೆ ಎಸೆದಿದ್ದರು. ಈಗ ಹಿಂದೂಗಳು ಅಂತಹದೇ ಔತಣಕೂಟವನ್ನು ಮಾಡಿದ್ದಾರೆ. ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ಗಂಗಾ ನದಿಯ ಮಹತ್ವವೇ ತಿಳಿದಿಲ್ಲ. ಇದಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅನಿವಾರ್ಯವಾಗಿದೆ!