
ಪಾಟಲಿಪುತ್ರ (ಬಿಹಾರ) – ಇಲ್ಲಿಯ ಗಾಂಧಿ ಮೈದಾನದಲ್ಲಿ ಅಕ್ಟೋಬರ್ 27, 2013 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್.ಐ.ಎ. ನ ವಿಶೇಷ ನ್ಯಾಯಾಲಯವು 10 ಆರೋಪಿಗಳ ಪೈಕಿ ಫಖರುದ್ದಿನ್ ಎಂಬ ಆರೋಪಿಯನ್ನು ಸಾಕ್ಷಾಧಾರಗಳ ಕೊರತೆಯಿಂದ ನಿರಪರಾಧಿ ಎಂದು ಬಿಡುಗಡೆ ಮಾಡಿದೆ, ಹಾಗೂ ಇತರ 9 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪನ್ನು ನೀಡಿದೆ. ಇದರಲ್ಲಿ ಉಮರ ಸಿದ್ದಿಕಿ ಅಜರುದ್ದೀನ್, ಅಹಮದ ಹುಸೇನ, ಫಕ್ರುದ್ದೀನ, ಫಿರೋಜ ಆಲಂ ಅಲಿಯಾಸ್ ಪಪ್ಪು, ನುಮಾನ ಅನ್ಸಾರಿ, ಇಫ್ತಿಖಾರ ಆಲಂ, ಹೈದರ ಆಲಿ ಅಲಿಯಾಸ್ ಅಬ್ದುಲ್ಲಾ ಅಲಿಯಾಸ್ ಬ್ಲಾಕ್ ಬ್ಯೂಟಿ, ಮಹಮ್ಮದ್ ಆಲಂ ಅಲಿಯಾಸ್ ಪಪ್ಪು ಮುಜಿಬುಲ್ಲಾ ಅನ್ಸಾರಿ ಮತ್ತು ಇಮ್ತಿಯಾಜ್ ಅನ್ಸಾರಿ ಅಲಿಯಾಸ್ ಆಲಂ ಇವರ ಕೈವಾಡವಿತ್ತು. ಅವರಿಗೆ ಬರುವ ನವೆಂಬರ್ ಒಂದರಂದು ಶಿಕ್ಷೆ ವಿಧಿಸಲಾಗುವುದು. ಈ ಸ್ಫೋಟದ ಪ್ರಕರಣದಲ್ಲಿ ಒಂದು ಅಪ್ರಾಪ್ತ ಹುಡುಗನ ಸಹಿತ 12 ಜನರ ಮೇಲೆ ಆರೋಪ ಪತ್ರ ದಾಖಲು ಮಾಡಲಾಗಿತ್ತು. ಇದರಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ, ಹಾಗೂ ಅಪ್ರಾಪ್ತ ಆರೋಪಿಗೆ ಈ ಮೊದಲೇ 3 ವರ್ಷದ ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದಲ್ಲಿ 5 ಆರೋಪಿಗಳಿಗೆ ಈ ಮೊದಲೇ ಬೋಧಗಯಾದಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಲಾಗಿದೆ.
NIA court convicts 10 people, acquits one in 2013 Patna serial blasts All #Defence #news and #updates: https://t.co/MRkaJarm2n https://t.co/H5RIRD4o7P
— ET Defence (@ETDefence) October 27, 2021
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath