ಪಂಜಾಬ್‍ನ ವಿದ್ಯಾಪೀಠದ ವಸತಿಗೃಹದಲ್ಲಿನ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿತ

ಟಿ-20 ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯಲ್ಲಿ ಪಾಕಿಸ್ತಾನದೆದುರು ಭಾರತ ಸೋಲೊಪ್ಪಿದ ಪರಿಣಾಮ

ಸಂಗರೂರ (ಪಂಜಾಬ) – ‘ಟಿ-20‘ ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಸೋತ ನಂತರ ಇಲ್ಲಿಯ ‘ಬಾಯಿ ಗುರುದಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ಯ ವಿದ್ಯಾರ್ಥಿಗಳ ವಸತಿಗೃಹದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಥಳಿಸಿರುವ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಇದೇ ರೀತಿಯ ಮತ್ತೊಂದು ಘಟನೆ ರಾಜ್ಯದ ಖರಾರ್ ಎಂಬಲ್ಲಿನ ರಯತ ಬಹರಾಟ ವಿದ್ಯಾಪೀಠದಲ್ಲಿಯೂ ನಡೆದಿದೆ. ಸ್ಥಳೀಯರು ಈ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ‘ಬಿಹಾರ, ಉತ್ತರಪ್ರದೇಶ ಮತ್ತು ಹರಿಯಾಣಾದ ವಿದ್ಯಾರ್ಥಿಗಳು ಕಾಶ್ಮೀರಿ ವಿದ್ಯಾರ್ಥಿಗಳ ಕೊಠಡಿಗೆ ನುಗ್ಗಿದ್ದಾರೆ ಮತ್ತು ಅವರನ್ನು ಥಳಿಸಿದ್ದಾರೆ’, ಎಂದು ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘಟನೆ’ಯ ರಾಷ್ಟ್ರೀಯ ವಕ್ತಾರರಾದ ನಾಸಿರ್ ಖುಹೆಮಿ ಇವರು ಹೇಳಿದ್ದಾರೆ.