ಅಕ್ಟೋಬರ್ 23 ರಂದು 150 ದೇಶಗಳಲ್ಲಿ ಆಂದೋಲನ ನಡೆಸಲಿರುವ ‘ಇಸ್ಕಾನ್’ !

‘ಇಸ್ಕಾನ್’ ಮಾಡುತ್ತಿರುವ ಆಂದೋಲನದಲ್ಲಿ ಅದರ ಜೊತೆಗೆ ದೇಶದ ಇತರ ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಘಟನೆ, ಸಾಧು, ಸಂತರು ಮೊದಲಾದವರೆಲ್ಲರೂ ಈ ದಾಳಿಯ ವಿರುದ್ಧ ಒಟ್ಟಾಗಿ ಧ್ವನಿ ಎತ್ತಬೇಕೆಂಬುದು ಹಿಂದೂಗಳ ಅಪೇಕ್ಷಿತವಾಗಿದೆ ! – ಸಂಪಾದಕರು

ಕೊಲಕಾತಾ (ಬಂಗಾಲ) – ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ‘ಇಸ್ಕಾನ್’ನಿಂದ ಅಕ್ಟೋಬರ್ 23 ರಂದು 150 ದೇಶಗಳಲ್ಲಿ ಆಂದೋಲನ ಮಾಡಲಾಗುತ್ತಿದೆ. ಕೊಲಕಾತಾದಲ್ಲಿನ ಇಸ್ಕಾನ್‍ನ ಉಪಾಧ್ಯಕ್ಷ ರಾಧಾರಮಣ ದಾಸ ಇವರು ಈ ಮಾಹಿತಿಯನ್ನು ನೀಡಿದರು.

ಬಾಂಗ್ಲಾದೇಶದಲ್ಲಿನ ನೊವಾಖಾಲಿಯಲ್ಲಿ ‘ಇಸ್ಕಾನ್’ನ 2 ಸಾಧುಗಳನ್ನು ಮತಾಂಧರು ಹತ್ಯೆ ಮಾಡಿದ್ದರು. ಅದಕ್ಕೆ ‘ಪ್ರಧಾನಿ ಮೋದಿ ಮತ್ತು ವಿಶ್ವ ಸಂಸ್ಥೆಯೂ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಕು’, ಎಂದು ಇಸ್ಕಾನ್‍ನಿಂದ ಒತ್ತಾಯಿಸಲಾಗಿದೆ.