ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ 450 ಜನರ ಬಂಧನ !

ಇವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಧಾನ ಮಂತ್ರಿ ಶೇಖ್ ಹಸೀನಾರು ತಕ್ಷಣ ಪ್ರಯತ್ನಿಸಲೇಬೇಕು, ಆಗಲೇ ಈ ಕಾರ್ಯಾಚರಣೆಗೆ ಅರ್ಥ ಸಿಗಬಹುದು ! ಇದರೊಂದಿಗೆ ಹಾನಿಗೊಳಗಾದ ಹಿಂದೂಗಳಿಗೆ ನಷ್ಟ ಪರಿಹಾರ ಕೊಡಬೇಕು ! -ಸಂಪಾದಕರು

ಬಾಂಗ್ಲಾದೇಶದಲ್ಲಿ ಹಿಂಸಾಚಾರ

ಢಾಕಾ (ಬಾಂಗ್ಲಾದೇಶ) – ಹಿಂದೂಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಸರಕಾರವು ನೀಡಿದ ಆದೇಶದ ನಂತರ ಈವರೆಗೆ 450 ಮತಾಂಧರನ್ನು ಬಂಧಿಸಲಾಗಿದೆ ಹಾಗೂ ವಿವಿಧ ಕಡೆಗಳಲ್ಲಿ 71 ದೂರುಗಳನ್ನು ದಾಖಲಿಸಲಾಗಿದೆ. ‘ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಮಾಧ್ಯಮಗಳ ಮೇಲೆ ವಿಶ್ವಾಸ ಇಡಬಾರ’ದೆಂದು ಪ್ರಧಾನಮಂತ್ರಿ ಶೇಖ್ ಹಸೀನಾ ಕರೆ ನೀಡಿದ್ದಾರೆ. ಹಿಂಸಾಚಾರದ ಇಂತಹ ಘಟನೆಗಳು ಮತ್ತೆ ನಡೆಯಬಾರದೆಂದು ಅವರು ಗೃಹ ಸಚಿವಾಲಯಕ್ಕೆ ಜಾಗರೂಕರಾಗಿರಲು ಸೂಚನೆ ನೀಡಿದ್ದಾರೆ.