‘ರಾ.ಸ್ವ.ಸಂಘದ ಕಾರ್ಯಕರ್ತರು ನಕ್ಸಲರಂತೆ ಕೆಲಸ ಮಾಡುತ್ತಾರೆ ! – ಛತ್ತೀಸಗಡದ ಕಾಂಗ್ರೇಸ್‌ನ ಮುಖ್ಯಮಂತ್ರಿ ಭೂಪೇಶ ಬಘೆಲ

ಸಂಘದ ಸ್ವಯಂಸೇವಕರು ನಕ್ಸಲರಂತೆ ಕೆಲಸ ಮಾಡುತ್ತಿದ್ದರೆ, ಬಘೆಲರು ಈ ರೀತಿ ಮಾತನಾಡುವ ಧೈರ್ಯವನ್ನೇ ಮಾಡುತ್ತಿರಲಿಲ್ಲ !

ಭೋಪಾಲ (ಮಧ್ಯಪ್ರದೇಶ) – ಛತ್ತೀಸಗಡನ ರಾ.ಸ್ವ.ಸಂಘದ ಜನರು ಉದಾಸೀನತೆಯಿಂದ ಮತ್ತು ನಕ್ಸಲರಂತೆ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ೧೫ ವರ್ಷಗಳ ಭಾಜಪ ಸರಕಾರದ ಕಾಲದಲ್ಲಿ ಯಾವುದೇ ಅಭಿವೃದ್ಧಿಯ ಕಾರ್ಯವಾಗಿಲ್ಲ. ಈಗ ಇಲ್ಲಿನ ಸಂಘದವರ ಏನೂ ನಡೆಯುವುದಿಲ್ಲ, ಎಲ್ಲವನ್ನು ನಾಗಪುರದಿಂದ ನಿಯಂತ್ರಿಸಲಾಗುತ್ತದೆ, ಎಂದು ಛತ್ತೀಸಗಡನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರು ಟೀಕಿಸಿದರು. ಇದಕ್ಕೆ ಭೋಪಾಲದ ಭಾಜಪದ ಸಂಸದೆ ಪ್ರಜ್ಞಾಸಿಂಹ ಠಾಕೂರ ಇವರು ಸಂಘವನ್ನು ಬೆಂಬಲಿಸುತ್ತಾ ‘ಇಂದು ಹಿಂದೂ ಮತ್ತು ಭಾರತ ದೇಶವು ಸಂಘದಿಂದಾಗಿಯೇ ಸುರಕ್ಷಿತವಿದೆ’, ಎಂದು ಹೇಳಿದರು. ಸಂಸದೆ ಪ್ರಜ್ಞಾಸಿಂಹ ಠಾಕೂರ ಇವರ ಈ ಹೇಳಿಕೆಯನ್ನು ಟೀಕಿಸುವಾಗ ಕಾಂಗ್ರೆಸ್ ಪಕ್ಷವು ಇದು ಭಾರತೀಯ ಸೈನ್ಯದ ಅವಮಾನ ಮಾಡಿದಂತೆ ಎಂದು ಹೇಳಿದೆ.