ಛತ್ತೀಸಗಡದಲ್ಲಿ ಪಾದ್ರಿಯಿಂದ ವಿಧವೆಯ ಮೇಲೆ 2 ವರ್ಷಗಳಿಂದ ಬಲಾತ್ಕಾರ !

ಸೇವೆಯ ಮರೆಯಲ್ಲಿ ಕ್ರೈಸ್ತ ಪಾದ್ರಿಯು ಮಾಡಿರುವ ವಾಸನಾಂಧ ಕೃತ್ಯ ಬಹಿರಂಗ !

 ಹತ್ತು ವರ್ಷಗಳ ಹಿಂದೆ ಮತಾಂತರಗೊಂಡಿದ್ದ ಸಂತ್ರಸ್ತೆ!

ಹಿಂದೂ ಸಂತರ ಮೇಲಿನ ತಥಾಕಥಿತ ಆರೋಪಗಳ ಮೇಲೆ ಅನೇಕ ದಿನಗಳವರೆಗೆ ‘ಮೀಡಿಯಾ ಟ್ರಯಲ್’ ನಡೆಸುವ ಪ್ರಸಾರಮಾಧ್ಯಮಗಳು (ಪ್ರಸಾರ ಮಾಧ್ಯಮಗಳಿಂದ ನ್ಯಾಯಾಧೀಶರ ಭೂಮಿಕೆಯಲ್ಲಿದ್ದು ಅನೇಕ ದಿನಗಳವರೆಗೆ ಸಂಬಂಧಿತರ ಮೇಲೆ ಯಥೇಚ್ಛವಾಗಿ ಟೀಕೆ ಮಾಡುವ ಪದ್ಧತಿ) ಕ್ರೈಸ್ತ ಪಾದ್ರಿಗಳ ಅಪರಾಧಿ ಕೃತ್ಯಗಳನ್ನು ಮಾತ್ರ ಮುಚ್ಚಿಹಾಕುತ್ತವೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು 

ದಂತೇವಾಡ (ಛತ್ತೀಸಗಡ) – ನಕ್ಸಲ ಪ್ರಭಾವಿತ ದಂತೇವಾಡ ಜಿಲ್ಲೆಯಲ್ಲಿನ ಗಿದಮ ನಗರದಲ್ಲಿರುವ ಒಂದು ಚರ್ಚನ ಪಾದ್ರಿಯು 35 ವರ್ಷದ ವಿಧವೆಯ ಮೇಲೆ ನಿರಂತರವಾಗಿ ಬಲಾತ್ಕಾರ ಮಾಡಿದ್ದಾನೆ. ಸಂತ್ರಸ್ತೆಯು ಗರ್ಭವತಿಯಾದ ನಂತರ ಅವನು ಔಷಧಿ ಅಂಗಡಿಯಿಂದ ತರಲಾದ ಗರ್ಭಪಾತದ ಔಷಧಿಯನ್ನು ಆಕೆಗೆ ಬಲವಂತವಾಗಿ ತಿನ್ನಿಸಿದನು. ಇದರಿಂದಾಗಿ ಸಂತ್ರಸ್ತೆಯ ಸ್ಥಿತಿಯು ಗಂಭೀರವಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಸಂತ್ರಸ್ತೆಯ ಗಂಭೀರ ಸ್ಥಿತಿಯನ್ನು ಕಂಡು ವೈದ್ಯರು ಆಕೆಯನ್ನು ಉಪಚಾರಕ್ಕಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಪಾದ್ರಿಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಅನುಸಾರ 12 ವರ್ಷಗಳ ಹಿಂದೆ ಸಂತ್ರಸ್ತೆಯ ಪತಿಯ ನಿಧನವಾಗಿತ್ತು. ಆಕೆಗೆ ಒಬ್ಬ ಮಗಳಿದ್ದಾಳೆ. ಮಗಳನ್ನು ಅತ್ತೆ-ಮಾವನೊಂದಿಗೆ ಬಿಟ್ಟು ಸಂತ್ರಸ್ತೆಯು ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದಳು. ಒಮ್ಮೆ ಆಕೆ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಕ್ರೈಸ್ತ ಧರ್ಮಪ್ರಚಾರಕರು ಆಕೆಗೆ ಶೂಶ್ರೂಷೆಗೆ ಸಹಾಯ ಮಾಡಿದರು. ಅನಂತರ ಆಕೆ ಮತಾಂತರಗೊಂಡಳು. ಅವರು ಆಕೆಗೆ ವಾಸಿಸಲು ಮನೆಯನ್ನು ನೀಡಿದರು. (ಹಿಂದೂಗಳ ಅಸಹಾಯಕತೆಯ ಲಾಭಪಡೆಯುವ ಧೂರ್ತ ಕ್ರೈಸ್ತರು ! ಹಿಂದೂಗಳಿಗೆ ಧರ್ಮಶಿಕ್ಷಣ ದೊರೆತಿದ್ದರೆ ಅವರಿಗೆ ಜೀವನದಲ್ಲಿನ ಪ್ರಸಂಗಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತಿತ್ತು. ಹಿಂದೂಗಳಲ್ಲಿನ ಧರ್ಮಾಭಿಮಾನ ಶೂನ್ಯತೆಯೇ ಎಲ್ಲ ಸಮಸ್ಯೆಗಳ ಹಿಂದಿನ ಕಾರಣವಾಗಿದೆ ಎಂಬುದನ್ನು ಅರಿಯಿರಿ! – ಸಂಪಾದಕರು)

ಪೊಲೀಸರು ಮುಂದಿನ ಮಾಹಿತಿಯನ್ನು ತಿಳಿಸುವಾಗ ಸುಮಾರು 2 ವರ್ಷಗಳ ಹಿಂದೆ ಪಾದ್ರಿ ಬಾಬುಲಾಲ ನಾಗ (ವಯಸ್ಸು 43 ವರ್ಷ) ಇವನು ಸಂತ್ರಸ್ತೆಗೆ ಮದುವೆಯ ಆಮಿಷವನ್ನು ತೋರಿಸಿದ್ದನು. ಅಂದಿನಿಂದ ಅವನು ಸಂತ್ರಸ್ತೆಯ ಮೇಲೆ ಸತತವಾಗಿ ಬಲಾತ್ಕಾರ ಮಾಡುತ್ತಿದ್ದನು. ಈ ಸಮಯದಲ್ಲಿ ಸಂತ್ರಸ್ತೆಯು ಎರಡು ತಿಂಗಳು ಗರ್ಭವತಿಯಾದಳು. ಆಗ ಪಾದ್ರಿಯು ಆಕೆಗೆ ಗರ್ಭಪಾತ ಮಾಡಿಸಲು ಪ್ರಯತ್ನಿಸಿದನು. ಇದರಿಂದಾಗಿ ಆಕೆಯ ಸ್ಥಿತಿಯು ಗಂಭೀರವಾಗಿದೆ ಮತ್ತು ಆಕೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಸೇರಿಸಬೇಕಾಯಿತು ಎಂದು ಹೇಳಿದ್ದಾರೆ.