ಜಲಸಮಾಧಿ ತೆಗೆದುಕೊಳ್ಳುವುದರಿಂದಲ್ಲ, ಸಂಘರ್ಷ ಮಾಡಿಯೇ ಹಿಂದೂರಾಷ್ಟ್ರ ಬರಬಲ್ಲದು, ಇದನ್ನು ಪ್ರತಿಯೊಬ್ಬ ಹಿಂದೂಗಳು ಗಮನದಲ್ಲಿಟ್ಟು ಅದಕ್ಕಾಗಿ ಕೃತಿ ಶೀಲರಾಗಬೇಕು ! – ಸಂಪಾದಕರು

ಅಯೋಧ್ಯೆ – ಅಕ್ಟೋಬರ 1 ರಂದು ದೇಶದಲ್ಲಿ ಒಂದು ದೊಡ್ಡ ಧರ್ಮಸಭೆಯ ಆಯೋಜನೆ ಮಾಡಲಾಗುವುದು. ಅದರಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಣೆ ಮಾಡಲಾಗುವುದು; ಆದರೆ ಅಲ್ಲಿವರೆಗೆ ಕೇಂದ್ರ ಸರಕಾರವು ಯಾವುದೇ ನಿರ್ಣಯ ತೆಗೆದುಕೊಳ್ಳದಿದ್ದರೆ ನಾನು ಶರಯೂ ನದಿಯಲ್ಲಿ ಅಕ್ಟೋಬರ್ 2 ರಂದು ಸಮಾಧಿ ತೆಗೆದುಕೊಳ್ಳುವೆ, ಎಂಬ ಎಚ್ಚರಿಕೆಯನ್ನು ಮಹಂತ ಪರಮಹಂಸ ದಾಸ ಇವರು ನೀಡಿದರು. ಅಯೋಧ್ಯೆಯಲ್ಲಿ ನಡೆದ ಸನಾತನ ಧರ್ಮ ಪರಿಷತ್ತಿನಲ್ಲಿ ಅವರು ಈ ಎಚ್ಚರಿಕೆಯನ್ನು ನೀಡಿದರು.
1. ಯಾವ ರೀತಿ ಕಾಶ್ಮೀರದಲ್ಲಿ ಧರ್ಮದ ಆಧಾರದ ಮೇಲೆ ಘೋಷಣೆ ನೀಡಲಾಗುವುದನ್ನು ನೋಡಿದಾಗ ಭಾರತವನ್ನು ‘ಹಿಂದು ರಾಷ್ಟ್ರ’ವೆಂದು ಘೋಷಣೆ ಮಾಡದಿದ್ದಲ್ಲಿ, ಹಿಂದೂಗಳು ಅಲ್ಪಸಂಖ್ಯಾತರಾಗುವರು. ಇದನ್ನು ತಪ್ಪಿಸಲು `ಹಿಂದು ರಾಷ್ಟ್ರ’ದ ಘೋಷಣೆ ಮಾಡುವುದು ಅತ್ಯಾವಶ್ಯಕವಾಗಿದೆ ಎಂದು ಮಹಂತ ಪರಮಹಂಸ ದಾಸ ಇವರು ಹೇಳಿದರು.
2. ಕೆಲವು ತಿಂಗಳ ಹಿಂದೆ ಮಹಂತ ಪರಮಹಂಸ ದಾಸ ಇವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರೀಯ ಗೃಹ ಸಚಿವ ಅಮಿತ ಶಾ ಇವರಿಗೆ ಒಂದು ಪತ್ರ ಬರೆದು ಭಾರತಕ್ಕೆ ‘ಹಿಂದೂ ರಾಷ್ಟ್ರ’ ಘೋಷಣೆ ಮಾಡದೇ ಇದ್ದರೆ ನಾನು ಆತ್ಮ ದಹನ ಮಾಡುತ್ತೇನೆ’, ಎಂದು ಎಚ್ಚರಿಕೆ ನೀಡಿದ್ದರು. ಅದಾದನಂತರ ಅವರು ಪ್ರತ್ಯಕ್ಷ ಆತ್ಮ ದಹನದ ಸಿದ್ಧತೆ ಮಾಡಿಕೊಂಡಿದ್ದರು; ಆದರೆ ಸರಿಯಾದ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಬಂದು ಈ ಪ್ರಕರಣವನ್ನು ತಡೆಗಟ್ಟಿದ್ದರು.
#Ayodhya : भारत हिन्दू राष्ट्र घोषित नहीं हुआ तो 2 अक्टूबर को सरयू में लेंगे जल समाधि- संत परमहंसhttps://t.co/q9Fz29Haf7
— Zee Uttar Pradesh Uttarakhand (@ZEEUPUK) September 26, 2021
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!