ಪೊಲೀಸರ ಗುಂಡುಹಾರಾಟದಲ್ಲಿ ಇಬ್ಬರು ದಾಳಿಕೋರ ಗೂಂಡಾಗಳು ಹತ
ಗೂಂಡಾಗಳು ಹಾಡುಹಗಲೇ ನ್ಯಾಯಾಲಯದಲ್ಲಿ ಪೊಲೀಸರ ಉಪಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಕೊಲೆ ಮಾಡುವಷ್ಟು ಧೈರ್ಯ ತೋರಿಸುತ್ತಾರೆ, ಹೀಗಿರುವಾಗ ತರಬೇತಿ ಪಡೆದ ಆಧುನಿಕ ಶಸ್ತ್ರಗಳಿಂದ ಸಜ್ಜಾಗಿರುವ ಜಿಹಾದಿ ಉಗ್ರಗಾಮಿಗಳು ದೇಶದ ರಾಜಧಾನಿಯ ಮೇಲೆ ಯಾವಾಗ ಬೇಕಾದರೂ ಹಾಗೂ ಎಲ್ಲಿ ಬೇಕಾದರೂ ದಾಳಿ ಮಾಡಿ ಯಾರನ್ನೂ ಕೊಲೆ ಮಾಡಬಹುದು, ಇದೆಲ್ಲಾ ಪೊಲೀಸರಿಗೆ ನಾಚಿಕೆಗೇಡು !- ಸಂಪಾದಕರು

ನವ ದೆಹಲಿ – ದೇಶದ ರಾಜಧಾನಿ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಇಬ್ಬರು ಗೂಂಡಾಗಳು ಜಿತೇಂದ್ರ ಯಾನೆ ಗೊಗೀ ಎಂಬ ಕುಖ್ಯಾತ ಗೂಂಡಾನನ್ನು ಗುಂಡಿಕ್ಕಿ ಕೊಂದಿದ್ದಾರೆ. ಆಗ ನ್ಯಾಯಾಲಯದಲ್ಲಿ ಸುರಕ್ಷೆಗೆಂದು ನೇಮಿಸಲಾದ ಪೊಲೀಸರು ಗೊಗೀಯನ್ನು ಕೊಂದ ಆ ಇಬ್ಬರು ಗೂಂಡಾಗಳನ್ನು ಗುಂಡಿಕ್ಕಿ ಕೊಂದರು. ಹತರಾದ ಆ ಇಬ್ಬರು ಗೂಂಡಾಗಳ ಹೆಸರು ಇನ್ನೂ ತಿಳಿದುಬಂದಿಲ್ಲ. ಇವರಿಬ್ಬರೂ ನ್ಯಾಯವಾದಿಗಳ ವೇಷದಲ್ಲಿ ನ್ಯಾಯಾಲಯಕ್ಕೆ ಬಂದಿದ್ದರು. ಜಿತೇಂದ್ರ ಯಾನೆ ಗೊಗೀ ಕಳೆದ 2 ವರ್ಷಗಳಿಂದ ತಿಹಾರ ಕಾರಾಗೃಹದಲ್ಲಿ ಬಂಧನದಲ್ಲಿದ್ದನು. ಅವನನ್ನು ಖಟ್ಲೆಯ ವಿಚಾರಣೆಗೋಸ್ಕರ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆಗ ಈ ಘಟನೆ ನಡೆಯಿತು. ಗೊಗೀಯ ಕೊಲೆ ಮಾಡಿದವರು ಟಿಲ್ಲೂ ಗುಂಪಿನ ಗೂಂಡಾಗಳಾಗಿದ್ದರು. ಕೊಲೆಯಾದ ಇಬ್ಬರು ಗೂಂಡಾಗಳ ಪೈಕಿ ಒಬ್ಬನ ಮೇಲೆ 50 ಸಾವಿರದ ಬಹುಮಾನವಿತ್ತು.
Gangster Gogi, 2 from rival gang shot dead in Rohini court; assailants posed as lawyershttps://t.co/jA9eClqtCY
— The Indian Express (@IndianExpress) September 24, 2021
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation