೫ ಎಕೆ-೪೭ ರೈಫಲ, ೫ ಪಿಸ್ತೂಲ ಮತ್ತು ೭೦ ಗ್ರೆನೆಡ ಜಪ್ತ
೩-೪ ಭಯೋತ್ಪಾದಕರನ್ನು ಕೊಲ್ಲುವುದರಿಂದ) ಮೂಲಕ ಭಯೋತ್ಪಾದನೆ ಮುಗಿಯುವದಿಲ್ಲ, ಆದರೆ ಅದರ ನಿರ್ಮಾಪಕನಾಗಿರುವ ಪಾಕಿಸ್ತಾನವನ್ನು ನಾಶಗೊಳಿಸುವುದು ಅವಶ್ಯಕ!

ಉರಿ (ಜಮ್ಮು-ಕಾಶ್ಮೀರ) – ಇಲ್ಲಿಯ ರಾಮಪುರ ಸೆಕ್ಟರ ಹತ್ತಿರವಿರುವ ಗಡಿಯಲ್ಲಿ ಒಳ ನುಸುಳುತ್ತಿದ್ದ ೩ ಜಿಹಾದಿ ಭಯೋತ್ಪಾದಕರನ್ನು ಭಾರತೀಯ ಸೈನ್ಯವು ಕೊಂದುಹಾಕಿದೆ. ಅವರಿಂದ ೫ ಎಕೆ-೪೭ ರೈಫಲ, ೫ ಪಿಸ್ತೂಲ ಮತ್ತು ೭೦ ಗ್ರೆನೆಡ ಜಫ್ತಿ ಮಾಡಲಾಗಿದೆ. ಇಲ್ಲಿಯ ಅರಣ್ಯದಲ್ಲಿ ೬ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಸೈನ್ಯಕ್ಕೆ ಸಿಕ್ಕ ನಂತರ ನಡೆಸಿದ ಶೋಧಕಾರ್ಯದ ಸಮಯದಲ್ಲಿ ಭಯೋತ್ಪಾದಕರು ಸೈನ್ಯದ ಮೇಲೆ ಗುಂಡಿನ ದಾಳಿ ನಡೆಸಿದಾಗ ಆದ ಚಕಮಕಿಯಲ್ಲಿ ಈ ಭಯೋತ್ಪಾದಕರು ಹತರಾದರು. ಇತರ ೩ ಭಯೋತ್ಪಾದಕರು ಅಲ್ಲಿಂದ ಪಲಾಯನಗೈದಿದ್ದಾರೆ. ಸೈನಿಕರು ಅವರನ್ನು ಹುಡುಕುತ್ತಿದ್ದಾರೆ. ಈ ಚಕಮಕಿಯಾಗುವ ಮೊದಲು ಶೋಪಿಯಾದಲ್ಲಿಯ ಚಿತ್ರಾಗಾಮ ಎಂಬ ಊರಿನಲ್ಲಾದ ಇತರ ಒಂದು ಚಕಮಕಿಯಲ್ಲಿ ಅನಾಯತ ಅಹಮದ ಡಾರ ಎಂಬ ಭಯೊತ್ಪಾದಕನು ಹತನಾಗಿದ್ದಾನೆ.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ