ಸೈನಿಕರಿಂದ ಅಪ್ರಸನ್ನತೆ ವ್ಯಕ್ತ !
ಸರಕಾರವು ಈ ಬಗ್ಗೆ ವಿಚಾರಣೆ ಮಾಡಿ ಆರೋಪಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು, ಎಂಬ ಅಪೇಕ್ಷೆ ! – ಸಂಪಾದಕರು
‘ಹಲಾಲ’ ಮಾಂಸ ಅಂದರೆ ಏನು?ಹಲಾಲ ಪದ್ಧತಿಯಂತೆ ಮಾಂಸ ಪಡೆಯಲು ಪ್ರಾಣಿಗಳ ಕುತ್ತಿಗೆಯ ರಕ್ತನಾಳ ಕಡಿದು ಅದನ್ನು ಹಾಗೆಯೇ ಬಿಟ್ಟು ಬಿಡುತ್ತಾರೆ. ಅದರಿಂದ ದೊಡ್ಡ ಪ್ರಮಾಣದಲ್ಲಿ ರಕ್ತಸ್ರಾವವಾಗಿ ಅದು ಯಾತನೆ ಅನುಭವಿಸಿ ಪ್ರಾಣ ಬಿಡುತ್ತದೆ. ಆ ಪ್ರಾಣಿಗಳ ಬಲಿ ನೀಡುವಾಗ ಅದರ ಮುಖವನ್ನು ಮಕ್ಕಾದ ದಿಕ್ಕಿಗೆ ಮಾಡಿಡಲಾಗುತ್ತದೆ. |

ನವದೆಹಲಿ – ಕೇಂದ್ರ ಸರಕಾರದ ‘ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ’ವು (‘ಎಫ್.ಎಸ್.ಎಸ್.ಎ.ಐ.)ಯು ಪ್ರಮಾಣ ನೀಡಿರುವ ಕೇಂದ್ರವು ಸೈನಿಕರಿಗೆ ಹಲಾಲ ಮಾಂಸವನ್ನು ಪೂರೈಸುತ್ತಿದೆ ಎಂಬ ಆಘಾತಕರ ಮಾಹಿತಿಯು ಬೆಳಕಿಗೆ ಬಂದಿದೆ. ಹಲಾಲ ಮಾಂಸ ಹಿಂದೂ, ಸಿಖ್ ಮೊದಲಾದವರಿಗೆ ವಜ್ರ್ಯವಾಗಿದ್ದು. ಆ ಮಾಂಸವು ಕೇವಲ ಇಸ್ಲಾಮ ಮತದವರಿಗಷ್ಟೇ ನಡೆಯುತ್ತದೆ.
ಸೈನ್ಯವು ಪ್ರತೀವರ್ಷ ಸಾವಿರಾರು ಟನ ಮಾಂಸವನ್ನು ಆ ಕೇಂದ್ರದಿಂದ ಖರೀದಿಸುತ್ತದೆ. ಆ ಕೇಂದ್ರವು ಸೈನಿಕರಿಗೆ ಹಲಾಲ ಮಾಂಸವನ್ನು ಪೂರೈಸುತ್ತಿರುವುದು ಸೈನ್ಯದ ಕೆಲವು ಅಧಿಕಾರಿಗಳ ಗಮನಕ್ಕೆ ಬಂದಿದೆ. ಹಾಗೂ ಅದು ತಿಳಿದ ಬಳಿಕ ಸೈನಿಕರು ತಮ್ಮ ಅಪ್ರಸನ್ನತೆಯನ್ನು ವ್ಯಕ್ತ ಪಡಿಸಿದ್ದಾರೆ. ಆ ಬಗ್ಗೆ ಸೈನ್ಯಾಧಿಕಾರಿಗಳು ಪಂಜಾಬ, ಹರಿಯಾಣ ಹಾಗೂ ಉತ್ತರಪ್ರದೇಶ ರಾಜ್ಯಗಳ ಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಸೈನಿಕರಿಗೆ ಪೂರೈಸುವ ಮಾಂಸವು ‘ಹಲಾಲ’ ಆಗಿದೆಯೇ ಅಥವ ‘ಝಟಕಾ’, ಎಂಬುದನ್ನು ಉಲ್ಲೇಖಿಸಬೇಕೆಂಬ ಆದೇಶವನ್ನು ನೀಡುವಂತೆ ಬೇಡಿಕೆ ಮಾಡಿದರು. ‘ಝಟಕಾ’ ಪ್ರಕಾರದಲ್ಲಿ ಪ್ರಾಣಿಗಳನ್ನು ಒಂದೇ ಹೊಡೆತದಿಂದ ಕೊಲ್ಲಲಾಗುತ್ತದೆ. ಇದರಿಂದ ಆ ಪ್ರಾಣಿಗಳಿಗೆ ಕಡಿಮೆ ವೇದನೆಯಾಗುತ್ತದೆ. ಹಿಂದೂಗಳು ಆ ರೀತಿಯ ಪದ್ಧತಿಯ ಮಾಂಸವನ್ನು ಸೇವಿಸುತ್ತಾರೆ. ಸೈನ್ಯಾಧಿಕಾರಿಗಳು ಕಳುಹಿಸಿದ ಪತ್ರಕ್ಕೆ ಇನ್ನೂ ಯಾರಿಂದಲೂ ಉತ್ತರ ದೊರಕಿಲ್ಲ.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ