ಚೀನಾದ ಒತ್ತಡದಿಂದ ತಾಲಿಬಾನ್ನ ಉಗ್ರಗಾಮಿಗಳು ಉಘೂರ ಮುಸಲ್ಮಾನರನ್ನು ಚೀನಾಗೆ ಒಪ್ಪಿಸುವ ಸಾಧ್ಯತೆ
ತಾಲಿಬಾನಿನ ಹುಸಿ ಮುಸಲ್ಮಾನಪ್ರೇಮ ! ತಾನಿಬಾನಿಗಳು ಕಾಶ್ಮೀರಿ ಅಥವಾ ಪ್ಯಾಲಸ್ಟೀನ್ನ ಮುಸಲ್ಮಾನರ ಕಥಿತ ಮಾನವಾಧಿಕಾರಗಳ ವಿಷಯದಲ್ಲಿ ಮಾತನಾಡುತ್ತಾರೆ; ಆದರೆ ಚೀನಾದ ಭಯದಿಂದ ಅಲ್ಲಿನ ಉಘೂರ ಮುಸಲ್ಮಾನರ ಮೇಲಾಗುವ ಅತ್ಯಾಚಾರಗಳ ಬಗ್ಗೆ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು

ನವ ದೆಹಲಿ – ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ. ಚೀನಾದ ಹೇಳಿಕೆಯ ಮೇರೆಗೆ ತಾಲಿಬಾನಿ ಭಯೋತ್ಪಾದಕರು ಆ ಉಘೂರ ಮುಸಲ್ಮಾನರನ್ನು ಮತ್ತೊಮ್ಮೆ ಶಿನಜಿಯಾಂಗ ಪ್ರಾಂತ್ಯಕ್ಕೆ ಕಳುಹಿಸಲಾಗುವುದು ಎಂಬ ಭಯ ವ್ಯಕ್ತ ಪಡಿಸಲಾಗುತ್ತಿದೆ. ಹಾಗೆ ಮಾಡಿದರೆ, `ಚೀನಾ ಈ ಉಘೂರ ಮುಸಲ್ಮಾನರನ್ನು ಶಿಬಿರದಲ್ಲಿಟ್ಟು ಅವರ ಮೇಲೆ ಅತ್ಯಾಚಾರ ನಡೆಸುವುದು’, ಎಂಬ ಭಯ ವ್ಯಕ್ತ ಪಡಿಸಲಾಗುತ್ತದೆ. ಈಗ ಅಫಘಾನಿಸ್ತಾನದಲ್ಲಿ ಒಟ್ಟು 2 ಸಾವಿರ ಉಘೂರ ಮುಸಲ್ಮಾನರಿದ್ದಾರೆ.
ಅಫಘಾನಿಸ್ತಾನದಲ್ಲಿ ಹಲವಾರು ವರ್ಷಗಳಿಂದ ವಾಸಿಸುವ ಉಘೂರ ಮುಸಲ್ಮಾನರಿಗೆ ನಾಗರಿಕತ್ವ ದೊರೆಕಿದೆ; ಆದರೆ ಸರಕಾರಿ ಕಾಗದಪತ್ರಗಳಲ್ಲಿ ಅವರು ‘ಚೀನಾದಿಂದ ವಲಸೆ ಬಂದಿರುವರು’ ಎಂದು ಹೇಳಲಾಗಿದೆ. ಆದ್ದರಿಂದ ಅವರ ಪರಿಚಯ ಬಹಿರಂಗವಾಗಬಹುದು. ತಾಲಿಬಾನ್ನಿಂದ ಮ್ಯಾನಮಾರ ಹಾಗೂ ಪ್ಯಾಲೆಸ್ಟಾನ್ನ ಪೀಡಿತ ಮುಸಲ್ಮಾನರ ವಿಷಯದ ಅಂಶಗಳನ್ನು ಪ್ರಸ್ತುತ ಪಡಿಸಲಾಗುತ್ತದೆ; ಆದರೆ ಉಘೂರ ಮುಸಲ್ಮಾನರ ಮೇಲೆ ಚೀನಾ ಮಾಡುವ ಅತ್ಯಾಚಾರಗಳ ಬಗ್ಗೆ ಮೌನವಹಿಸಲಾಗುತ್ತಿದೆ. ಆದ್ದರಿಂದ ತಾಲಿಬಾನ್ ಹುಸಿ ಆರೋಪ ಹೇರಿ ಉಘೂರ ಮುಸಲ್ಮಾನರನ್ನು ಚೀನಾಗೆ ಒಪ್ಪಿಸುವ ಸಾಧ್ಯತೆಯಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !