ಚೀನಾದ ಒತ್ತಡದಿಂದ ತಾಲಿಬಾನ್ನ ಉಗ್ರಗಾಮಿಗಳು ಉಘೂರ ಮುಸಲ್ಮಾನರನ್ನು ಚೀನಾಗೆ ಒಪ್ಪಿಸುವ ಸಾಧ್ಯತೆ
ತಾಲಿಬಾನಿನ ಹುಸಿ ಮುಸಲ್ಮಾನಪ್ರೇಮ ! ತಾನಿಬಾನಿಗಳು ಕಾಶ್ಮೀರಿ ಅಥವಾ ಪ್ಯಾಲಸ್ಟೀನ್ನ ಮುಸಲ್ಮಾನರ ಕಥಿತ ಮಾನವಾಧಿಕಾರಗಳ ವಿಷಯದಲ್ಲಿ ಮಾತನಾಡುತ್ತಾರೆ; ಆದರೆ ಚೀನಾದ ಭಯದಿಂದ ಅಲ್ಲಿನ ಉಘೂರ ಮುಸಲ್ಮಾನರ ಮೇಲಾಗುವ ಅತ್ಯಾಚಾರಗಳ ಬಗ್ಗೆ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು

ನವ ದೆಹಲಿ – ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ. ಚೀನಾದ ಹೇಳಿಕೆಯ ಮೇರೆಗೆ ತಾಲಿಬಾನಿ ಭಯೋತ್ಪಾದಕರು ಆ ಉಘೂರ ಮುಸಲ್ಮಾನರನ್ನು ಮತ್ತೊಮ್ಮೆ ಶಿನಜಿಯಾಂಗ ಪ್ರಾಂತ್ಯಕ್ಕೆ ಕಳುಹಿಸಲಾಗುವುದು ಎಂಬ ಭಯ ವ್ಯಕ್ತ ಪಡಿಸಲಾಗುತ್ತಿದೆ. ಹಾಗೆ ಮಾಡಿದರೆ, `ಚೀನಾ ಈ ಉಘೂರ ಮುಸಲ್ಮಾನರನ್ನು ಶಿಬಿರದಲ್ಲಿಟ್ಟು ಅವರ ಮೇಲೆ ಅತ್ಯಾಚಾರ ನಡೆಸುವುದು’, ಎಂಬ ಭಯ ವ್ಯಕ್ತ ಪಡಿಸಲಾಗುತ್ತದೆ. ಈಗ ಅಫಘಾನಿಸ್ತಾನದಲ್ಲಿ ಒಟ್ಟು 2 ಸಾವಿರ ಉಘೂರ ಮುಸಲ್ಮಾನರಿದ್ದಾರೆ.
ಅಫಘಾನಿಸ್ತಾನದಲ್ಲಿ ಹಲವಾರು ವರ್ಷಗಳಿಂದ ವಾಸಿಸುವ ಉಘೂರ ಮುಸಲ್ಮಾನರಿಗೆ ನಾಗರಿಕತ್ವ ದೊರೆಕಿದೆ; ಆದರೆ ಸರಕಾರಿ ಕಾಗದಪತ್ರಗಳಲ್ಲಿ ಅವರು ‘ಚೀನಾದಿಂದ ವಲಸೆ ಬಂದಿರುವರು’ ಎಂದು ಹೇಳಲಾಗಿದೆ. ಆದ್ದರಿಂದ ಅವರ ಪರಿಚಯ ಬಹಿರಂಗವಾಗಬಹುದು. ತಾಲಿಬಾನ್ನಿಂದ ಮ್ಯಾನಮಾರ ಹಾಗೂ ಪ್ಯಾಲೆಸ್ಟಾನ್ನ ಪೀಡಿತ ಮುಸಲ್ಮಾನರ ವಿಷಯದ ಅಂಶಗಳನ್ನು ಪ್ರಸ್ತುತ ಪಡಿಸಲಾಗುತ್ತದೆ; ಆದರೆ ಉಘೂರ ಮುಸಲ್ಮಾನರ ಮೇಲೆ ಚೀನಾ ಮಾಡುವ ಅತ್ಯಾಚಾರಗಳ ಬಗ್ಗೆ ಮೌನವಹಿಸಲಾಗುತ್ತಿದೆ. ಆದ್ದರಿಂದ ತಾಲಿಬಾನ್ ಹುಸಿ ಆರೋಪ ಹೇರಿ ಉಘೂರ ಮುಸಲ್ಮಾನರನ್ನು ಚೀನಾಗೆ ಒಪ್ಪಿಸುವ ಸಾಧ್ಯತೆಯಿದೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War