ಕರ್ನಾಟಕ ಪ್ರದೇಶ ಕೆಪಿಸಿಸಿಯ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣರ ದ್ವೇಷಭರಿತ ಹೇಳಿಕೆ !
|
ಮೈಸೂರು – ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್ಗೆ ಹೋಲಿಸಿದ್ದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಧರ್ಮದ ಆಧಾರದ ಮೇಲೆ ನಡೆಯುತ್ತದೆ, ಮತ್ತು ತಾಲಿಬಾನ್ ಕೂಡ ಹಾಗೆ ಮಾಡುತ್ತದೆ; ಹಾಗಾಗಿ ನಾನು ಸಂಘವನ್ನು ತಾಲಿಬಾನ್ಗೆ ಹೋಲಿಸಿದೆ. ಬಿಜೆಪಿ ಮತ್ತು ರಾ.ಸ್ವ.ಸಂಘವು ನನ್ನನ್ನು ಎಷ್ಟೇ ವಿರೋಧಿಸಿದರೂ ನನ್ನ ಹೇಳಿಕೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (‘ಕೆ.ಪಿ.ಸಿ.ಸಿ.’ಯ) ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಸ್ಪಷ್ಟಪಡಿಸಿದ್ದಾರೆ.
ತಾಲಿಬಾನ್ಗೂ ಆರ್ಎಸ್ಎಸ್ಗೂ ಹೋಲಿಕೆ : ಹೇಳಿಕೆಗೆ ಬದ್ಧ ಎಂದ ಧ್ರುವನಾರಾಯಣ್#Taliban #RSS #Dhruvanarayan #congress @INCKarnataka https://t.co/zoIwv1y3JG
— Asianet Suvarna News (@AsianetNewsSN) August 24, 2021
ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವನಾರಾಯಣರು, ರಾ.ಸ್ವ.ಸಂಘದ ಬಗ್ಗೆ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ; ಏಕೆಂದರೆ ಸಂಘದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ ಎಂದು ಹೇಳಿದ್ದಾರೆ. (ಕಾಂಗ್ರೆಸ್ನ ನ್ಯಾಯವಾದಿಯಾಗಿರುವ ನಾಯಕನ ಮೇಲೆ ಮಹಿಳಾ ನ್ಯಾಯವಾದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿದೆ, ಇನ್ನೋರ್ವ ನಾಯಕನು ಸಾರ್ವಜನಿಕ ಸಭೆಯಲ್ಲಿ ತಮ್ಮದೇ ಪಕ್ಷದ ಮಹಿಳಾ ಕಾರ್ಯಕರ್ತೆಯರ ಬಗ್ಗೆ ಮಾತನಾಡುವಾಗ ಅಶ್ಲೀಲ ಭಾಷೆಯನ್ನು ಉಪಯೋಗಿಸಿದ್ದರು. ಹಲವಾರು ಆರೋಪಗಳು ಕಾಂಗ್ರೆಸ್ನವರ ಮೇಲೆ ಇರುವಾಗ ಅವರಿಗೆ ಬೇರೆಯವರ ಮೇಲೆ ಆರೋಪ ಮಾಡಲು ಏನು ಅಧಿಕಾರವಿದೆ ? ಸಂಪಾದಕರು)

ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್