ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಇಸ್ಲಾಮಿಕ್ ಸ್ಟೆಟ್‌ಗೆ ಜವಾಬ್ದಾರಿ ವಹಿಸಿದ ತಾಲಿಬಾನ್ ಮತ್ತು ಐ.ಎಸ್.ಐ. ! – ಗುಪ್ತಚರ ಇಲಾಖೆ ಮಾಹಿತಿ

ಎಲ್ಲಿಯವರೆಗೆ ಭಾರತವು ಪಾಕಿಸ್ತಾನವನ್ನು ನಾಶಪಡಿಸುವುದಿಲ್ಲವೋ ಅಲ್ಲಿಯವರೆಗೆ ಇಂತಹ ಭಯೋತ್ಪಾದಕ ಕೃತ್ಯಗಳಾಗುವ ಸಾಧ್ಯತೆ ಶಾಶ್ವತ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಸಾಂದರ್ಭಿಕ ಚಿತ್ರ

ನವ ದೆಹಲಿ : ಭಾರತದಲ್ಲಿ ಆತ್ಮಾಹುತಿ ದಾಳಿ ಮಾಡಲು ತಾಲಿಬಾನ್ ಮತ್ತು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ.ಎಸ್.ಐ. ಇವು ಇಸ್ಲಾಮಿಕ್ ಸ್ಟೇಟ್’ ಎಂಬ ಉಗ್ರ(ಭಯೋತ್ಪಾದಕ) ಸಂಘಟನೆಗೆ ಜವಾಬ್ದಾರಿಯನ್ನು ನೀಡಿವೆ, ಎಂದು ಭಾರತೀಯ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ. ಇದರಲ್ಲಿ ಪಾಕ್ ಬೆಂಬಲಿತ ಭಯೋತ್ಪಾದಕರನ್ನು ದಾಳಿಗಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ‘ಇಸ್ಲಾಮಿಕ್ ಸ್ಟೇಟ್’ ಭಯೋತ್ಪಾದಕ ಸಂಘಟನೆಯಲ್ಲಿ ತರಬೇತಿ ಪಡೆದ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಲಾಗುವುದು ಮತ್ತು ದಾಳಿ ನಡೆಸುವವರಿದ್ದಾರೆ. ಈ ಭಯೋತ್ಪಾದಕರಿಗೆ ಭಾರತದಲ್ಲಿ ಮೊದಲಿನಿಂದಲೇ ಇರುವ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಪೂರೈಸಲಿದ್ದಾರೆ. ಭಾರತದಲ್ಲಿ ಹಿಂದುತ್ವನಿಷ್ಠ ನಾಯಕರು, ಹಿಂದೂ ದೇವಾಲಯಗಳು, ಭದ್ರತಾ ಪಡೆಗಳು ಮತ್ತು ಜನನಿಬಿಡ ಸ್ಥಳಗಳ ಮೇಲೆ ದಾಳಿಗಳಾಗುವ ಸಾಧ್ಯತೆಗಳಿವೆ.