*ಮಧ್ಯಪ್ರದೇಶದಲ್ಲಿನ ಭಾಜಪ ಸರಕಾರದ ಈ ನಿರ್ಣಯವು ಅಭಿನಂದನೀಯವಾಗಿದೆ. ರಾಷ್ಟ್ರ ಪ್ರೇಮಿಗಳಿಗೆ ‘ವಾಸ್ತವದಲ್ಲಿ ಇಂತಹ ಆದೇಶವನ್ನು ಕೇಂದ್ರ ಸರಕಾರವು ನೀಡುವುದು ಅವಶ್ಯಕವಾಗಿದೆ ಮತ್ತು ಯಾರು ಇಲ್ಲಿಯವರೆಗೆ ಇಂತಹ ಸಮರ್ಥನೆಯನ್ನು ಮಾಡಿದ್ದಾರೆಯೋ ಅವರನ್ನು ತಕ್ಷಣ ಬಂಧಿಸಿ ಕಾರಾಗೃಹಕ್ಕೆ ತಳ್ಳಬೇಕು’ ಎಂದು ಧರ್ಮಪ್ರೇಮಿಗಳಿಗೆ ಅನಿಸುತ್ತಿದೆ !
ಭೋಪಾಲ (ಮಧ್ಯಪ್ರದೇಶ) – ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ. ಇವರು ಪ್ರಸಾರ ಮಾಧ್ಯಮಗಳಲ್ಲಿ ಮಾತನಾಡುವಾಗ ಈ ರೀತಿ ಹೇಳಿದ್ದಾರೆ.
ಆರೋಗ್ಯ ಮಂತ್ರಿ ಸಾರಂಗ ಇವರು ‘ತಾಲಿಬಾನಿನ ಸಮರ್ಥನೆ ಮಾಡುವ ಪೋಸ್ಟ್ ಮತ್ತು ಹೇಳಿಕೆಗಳನ್ನು ನೀಡುವುದು ದುರದೃಷ್ಟಕರವಾಗಿದೆ. ಸರಕಾರವು ಇದರ ಮೇಲೆ ಗಮನವಿಟ್ಟಿದೆ ಮತ್ತು ಅವುಗಳ ಮೇಲೆ ಕಾರ್ಯಾಚರಣೆ ಮಾಡಲಾಗುವುದು. ಓಲೈಕೆಯ ರಾಜಕಾರಣವೂ ಈ ದೇಶ ಮತ್ತು ರಾಜ್ಯದಲ್ಲಿ ನಡೆಯುವುದಿಲ್ಲ’ ಎಂದು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ