ಡ್ರೈ ಫ್ರೂಟ್ಸ್ ಇನ್ನೂ ದುಬಾರಿ ಆಗುವ ಸಾಧ್ಯತೆ
ಯಾವುದನ್ನು ತಾಲಿಬಾನರು ಮೊದಲು ಮಾಡಿತೋ ಅದನ್ನು ಭಾರತವು ಮಾಡುವ ಅವಶ್ಯಕತೆ ಇತ್ತು. ಭಾರತವು ತಾಲಿಬಾನನ್ನು ಎಲ್ಲ ಕಡೆಗಳಿಂದ ಇಕ್ಕಟ್ಟಿಗೆ ಸಿಲುಕಿಸಿ ಅದಕ್ಕೆ ಶಾಶ್ವತವಾದ ಪಾಠ ಕಲಿಸುವ ಅವಶ್ಯಕತೆ ಇದೆ – ಸಂಪಾದಕರು
ನವದೆಹಲಿ – ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ನಿಧಾನವಾಗಿ ತನ್ನ ಬಣ್ಣ ಬಯಲು ಮಾಡಲು ಆರಂಭಿಸಿದೆ. ತಾಲಿಬಾನವು ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಮುರಿದಿದೆ, ಭಾರತದ ಜೊತೆ ಇರುವ ಎಲ್ಲಾ ರೀತಿಯ ಆಮದು-ರಫ್ತನ್ನು ಸಹ ನಿಲ್ಲಿಸಿದೆ, ಈ ಮಾಹಿತಿಯನ್ನು ‘ಫೆಡರೇಷನ್ ಆಫ್ ಇಂಡಿಯನ್ ಎಕ್ಸ್ಪೋರ್ಟ್ ಆರ್ಗನೈಸೇಶನ್’ನ ಮಹಾ ಸಂಚಾಲಕ ಡಾ. ಅಜಯ ಸಹಾಯಿ ಇವರು ನೀಡಿದ್ದಾರೆ.
Prices of dry fruits are likely to rise in India after the #Taliban stopped all import and export of goods with India following their swift coming to power in #Afghanistan https://t.co/5CV0apCD4t
— Hindustan Times (@htTweets) August 18, 2021
೧. ವಾರ್ತಾ ಸಂಸ್ಥೆಗಳೊಂದಿಗೆ ಮಾತನಾಡುವಾಗ ಡಾ. ಸಹಯಿಯವರು, ಈ ಸಮಯದಲ್ಲಿ ತಾಲಿಬಾನ್ ಎಲ್ಲಾ ವಸ್ತುಗಳ ಸಾಗಾಣಿಕೆಯನ್ನು ನಿಲ್ಲಿಸಿದೆ, ಈ ಸಾಗಾಣಿಕೆಯು ಸರಾಗವಾಗಿ ನಡೆಸಲು ನಾವು ಅಫ್ಘಾನಿಸ್ತಾನದ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ ಎಂದರು.
೨. ಭಾರತವು ಅಫ್ಘಾನಿಸ್ತಾನದ ಅತ್ಯಂತ ದೊಡ್ಡ ಪಾಲುದಾರ ಆಗಿದೆ. ಭಾರತವು ಅಫ್ಘಾನಿಸ್ತಾನಕ್ಕೆ ಸಕ್ಕರೆ, ಚಹಾ, ಕಾಫಿ, ಮಸಾಲೆ ಪದಾರ್ಥಗಳ ಸಹಿತ ಇತರ ವಸ್ತುಗಳನ್ನು ರಪ್ತು ಮಾಡುತ್ತದೆ, ಹಾಗೂ ಡ್ರೈ ಫ್ರೂಟ್ಸ್, ಈರುಳ್ಳಿ ಇತ್ಯಾದಿಗಳನ್ನು ದೊಡ್ಡಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಡ್ರೈಫ್ರೂಟ್ಸ್ನ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.

ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers