|
* ತಮಿಳುನಾಡಿನಲ್ಲಿ ದ್ರಮುಕದ ಸರಕಾರ ಇರುವುದರಿಂದ ಈ ಕಾರ್ಯಕರ್ತರ ಮೇಲೆ ಹಾಗೂ ಪಾದ್ರಿಗಳ ಮೇಲೆಯೂ ಯಾವುದೇ ಕಾರ್ಯಾಚರಣೆ ಆಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ! ಪ್ರಜಾಪ್ರಭುತ್ವದ ರಕ್ಷಕರೆಂದು ಹೇಳಿಕೊಳ್ಳುವ ದ್ರಮುಕದಂತಹ ಪಕ್ಷಗಳು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂಬುದನ್ನು ಗಮನದಲ್ಲಿಟ್ಟು ಹಿಂದೂರಾಷ್ಟ್ರವನ್ನು ಸ್ಥಾಪಿಸಿರಿ!- ಸಂಪಾದಕರು * ಇಂತಹ ಘಟನೆಗಳಿಂದ ಪಾದ್ರಿಗಳ ನಿಜವಾದ ಸ್ವರೂಪವು ಸತತವಾಗಿ ಬೆಳಕಿಗೆ ಬರುತ್ತಿರುವಾಗಲೂ ಭಾರತದಲ್ಲಿನ ರಾಜಕಾರಣಿಗಳು ಮತ್ತು ಪ್ರಸಾರ ಮಾಧ್ಯಮಗಳು ಇದರ ಬಗ್ಗೆ ಮೌನ ಪಾಲಿಸುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ! – ಸಂಪಾದಕರು |

ತಿರುವತ್ತುರ (ತಮಿಳುನಾಡು) – ಇಲ್ಲಿನ ವಿಯನ್ನೂರ ಎಂಬ ಊರಿನಲ್ಲಿರುವ ಓರ್ವ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅದರ ಚಿತ್ರೀಕರಣ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಅರುಮನಾಯಿ ಕ್ರಿಶ್ಚಿಯನ್ ಅಸೋಸಿಯೇಷನ್ ನ (ಎ.ಸಿ. ಎ’ ನ) ಸಚಿವರಾಗಿರುವ ಪಾದ್ರಿ ಅರುಮನಾಯಿ ಸ್ಟೀಫನ್ ಮೇಲೆ ಅಪರಾಧವನ್ನು ದಾಖಲಿಸಿದ್ದಾರೆ. ಹಾಗೆಯೇ ಅಧಿಕಾರದಲ್ಲಿರುವ ದ್ರಾವಿಡ ಮುನ್ನೇತ್ರ ಕಳಘಂನ (ದ್ರವಿಡ ಪ್ರಗತಿ ಸಂಘದ) ಜಾನ್ ಬ್ರೈಟ್, ಹೆನ್ಸಲಿನ್ ಮತ್ತು ಜೇಬರಾಜ ಈ ಕಾರ್ಯಕರ್ತರ ಸಹಿತ ಇತರ 7 ಜನರ ಮೇಲೆ ಅಪರಾಧವನ್ನು ದಾಖಲಿಸಲಾಗಿದೆ.

1. ಕನ್ಯಾಕುಮಾರಿಯಲ್ಲಿ ಒಂದು ಕಾರ್ಯಕ್ರಮದಲ್ಲಿ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಪೋನೈಯಾ ಇವರು ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಪ್ರಕರಣದಲ್ಲಿ ಆಯೋಜಕರಾಗಿದ್ದ ಪಾದ್ರಿ ಸ್ಟೀಫನ್ ಇವರನ್ನು ಬಂಧಿಸಲಾಗಿತ್ತು. ಅನಂತರ ಈ ಮಹಿಳೆಯು ಅತ್ಯಾಚಾರದ ದೂರು ನೀಡಿದ್ದಾರೆ.
Tamil Nadu: Christian pastor who had organised George Ponnaiah’s hate speech event booked on gang-rape chargeshttps://t.co/aly2KU7onH
— OpIndia.com (@OpIndia_com) August 12, 2021
2. ವಿವಾಹಿತ ಮಹಿಳೆಯ ಆರೋಪದ ಪ್ರಕಾರ ‘ನನಗೆ ಮತ್ತು(ಅಮಲು) ಬರುವ ಪೇಯವನ್ನು ಕುಡಿಯಲು ನೀಡಿದ ನಂತರ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಅದರ ಚಿತ್ರೀಕರಣ ಮಾಡಲಾಯಿತು’ ಎಂದು ಹೇಳಿದ್ದಾರೆ. ಈ ಮಹಿಳೆಯನ್ನು ಫಾರ್ಮ್ ಹೌಸ್ ಗೆ ಒಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಲಾಯಿತು. ಈ ಮಹಿಳೆಯು ಏಪ್ರಿಲನಲ್ಲಿ ದೂರನ್ನು ನೋಂದಾಯಿಸಿದ್ದರು; ಆದರೆ ಆರೋಪಿಗಳಿಗೆ ಅಧಿಕಾರಾರೂಢ ದ್ರಮುಕ ಪಕ್ಷದೊಂದಿಗೆ ಸಂಬಂಧವಿರುವುದರಿಂದ ಇಲ್ಲಿಯವರೆಗೂ ಅವರ ಮೇಲೆ ಯಾವುದೇ ಕಾರ್ಯಾಚರಣೆ ಆಗಿಲ್ಲ. ಇವರಲ್ಲಿನ ಜೆಫರ್ಸನ್ ಇವನು ಕಾರ್ಯಾಚರಣೆಯ ಭಯದಿಂದ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ.
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!
ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ!
ಮುಸ್ಲಿಂ ಜೊತೆ ನಿಕಾಹ್: 2 ದಿನ ಶವಾಗಾರದಲ್ಲಿ ಪಾರ್ಸಿ ಮಹಿಳೆ ಶವ
ತೃಣಮೂಲ ಕಾಂಗ್ರೆಸ್ನ 20 ಸಂಸದರ ಬಂಡಾಯ !