ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಪ್ರತಿಯೊಂದು ನಗರದಲ್ಲಿಯೂ ಈ ರೀತಿ ಪ್ರಯತ್ನಿಸಲು ಆಗ್ರಹ !
ವಡೋದರಾ (ಗುಜರಾತ) – ವಡೋದರಾ ನಗರದಲ್ಲಿ ೧೦೮ ದೇವಸ್ಥಾನಗಳಲ್ಲಿ ಪ್ರತಿದಿನ ೨ ಬಾರಿ ಆರತಿ ಹಾಗೂ ಹನುಮಾನ್ ಚಾಲಿಸಾವನ್ನು ಧ್ವನಿವರ್ಧಕದಲ್ಲಿ ಕೇಳಿಸಲಾಗುತ್ತಿದೆ. ಸ್ಥಳೀಯ ಸಂಘಟನೆ ‘ಮಿಶನ್ ರಾಮ ಸೇತುನ ವತಿಯಿಂದ ಪ್ರಯತ್ನಿಸಲಾಗುತ್ತಿದೆ. ಈ ಸಂಘಟನೆಯು ಕಳೆದ ವರ್ಷ ಕೂಡ ಶ್ರಾವಣ ಮಾಸದಲ್ಲಿ ಕೆಲವು ದೇವಸ್ಥಾನಗಳಿಗೆ ಧ್ವನಿವರ್ಧಕಗಳನ್ನು ವಿತರಣೆ ಮಾಡಿತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರಯತ್ನಗಳಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಅದೇ ರೀತಿ ‘ದೇಶದ ಎಲ್ಲಾ ನಗರಗಳಲ್ಲಿ ಈ ರೀತಿ ಪ್ರಯತ್ನಿಸಬೇಕು, ಎಂದು ಬೇಡಿಕೆ ಮಾಡಲಾಗುತ್ತಿದೆ.
Gujarat: 108 temples of Vadodara to get loudspeakers to play Hanuman Chalisa twice a dayhttps://t.co/ONnm75s2wv
— OpIndia.com (@OpIndia_com) August 12, 2021
ನಗರದ ಕಾಲಾಘೋಡಾದಲ್ಲಿನ ಪಂಚಮುಖೀ ಹನುಮಾನ ದೇವಸ್ಥಾನದಲ್ಲಿ ಮೊದಲ ಶ್ರಾವಣ ಸೋಮವಾರದಂದು ಧ್ವನಿವರ್ಧಕವನ್ನು ವಿತರಣೆ ಮಾಡಲಾಯಿತು. ಧ್ವನಿವರ್ಧಕವನ್ನು ಹಂಚುವಾಗ ಭಾಜಪದ ಕೆಲವು ಪದಾಧಿಕಾರಿಗಳು ಕೂಡ ಉಪಸ್ಥಿತರಾಗಿದ್ದರು.
ಈ ವಿಷಯವಾಗಿ ‘ಮಿಶನ್ ರಾಮ ಸೇತೂವಿನ ಅಧ್ಯಕ್ಷರಾದ ದೀಪ ಅಗ್ರವಾಲರವರು ಮಾತನಾಡುತ್ತಾ, ‘ಭಾವಿಕರು ಮನೆಯಲ್ಲಿದ್ದೇ ಆರತಿ ಹಾಗೂ ಹನುಮಾನ ಚಾಲೀಸಾವನ್ನು ಕೇಳಬಹುದು; ಆದ್ದರಿಂದ ಧ್ವನಿವರ್ಧಕಗಳನ್ನು ಹಾಕಲಾಗುತ್ತಿದೆ. ಕೊರೊನಾದ ಕಾಲದಲ್ಲಿ ನಿಯಮಗಳಿರುವುದರಿಂದ ಜನರಿಗೆ ದೇವಸ್ಥಾನಕ್ಕೆ ಹೋಗಲು ನಿರ್ಬಂಧಗಳಿರುವುದರಿಂದ ಜನರು ಮನೆಯಲ್ಲಿದ್ದುಕೊಂಡು ಧ್ವನಿವರ್ಧಕದಲ್ಲಿ ಆರತಿಯ ಲಾಭ ಪಡೆಯಬಹುದು, ಎಂದಿದ್ದಾರೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ