ಆಡಳಿತ ನಿರ್ವಹಿಸಲು ಯಾರೂ ಜವಾಬ್ದಾರರಿಲ್ಲದ್ದರಿಂದ ಸರಕಾರವು ದೇವಸ್ಥಾನವನ್ನು ಸರಕಾರಿಕರಣಗೊಳಿಸಲಿದೆ !
|
ಜೈಪುರ (ರಾಜಸ್ಥಾನ) – ಇಲ್ಲಿನ ಪ್ರಸಿದ್ಧ ಮೆಹಂದೀಪುರ ಬಾಲಾಜಿ ದೇವಸ್ಥಾನದ ಮಹಾಂತರಾದ ಶ್ರೀ ಕಿಶೋರ್ ಪುರಿ ಮಹಾರಾಜರು ದೇಹತ್ಯಾಗ ಮಾಡಿದ ನಂತರ, ಈ ದೇವಸ್ಥಾನದ ಸರಕಾರಿಕರಣ ಮಾಡುವ ತಯಾರಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಮಹಂತ ಶ್ರೀ ಕಿಶೋರ್ ಪುರಿ ಮಹಾರಾಜರ ನಂತರ ದೇವಸ್ಥಾನವನ್ನು ನೋಡಿಕೊಳ್ಳಲು ಯಾರೂ ಇಲ್ಲ, ಆದ್ದರಿಂದ ಸರಕಾರವು ಈ ದೇವಸ್ಥಾನವನ್ನು ಸರಕಾರೀಕರಣಗೊಳಿಸಲು ಯೋಚಿಸುತ್ತಿದೆ. ಮಹಂತ ಶ್ರೀ ಕಿಶೋರ್ ಪುರಿ ಮಹಾರಾಜ ಅನಾರೋಗ್ಯದಿಂದ ಬಳಲುತ್ತಿದ್ದಾಗ ದೇವಸ್ಥಾನದ ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರಕ್ಕೆ ದೂರು ನೀಡಿದ್ದರಿಂದ ಸರಕಾರವು ಈ ಬಗ್ಗೆ ವಿಚಾರ ಮಾಡುತ್ತಿದೆ. (ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತದಲ್ಲಿರುವಾಗ ಅದೇ ರೀತಿ ಇತರ ರಾಜ್ಯಗಳಲ್ಲಿಯೂ ಕಾಂಗ್ರೆಸ್ನ ಅವ್ಯವಸ್ಥೆ ಹಾಗೂ ಭ್ರಷ್ಟ ವ್ಯವಹಾರಗಳ ಬಗ್ಗೆ ಜನರಿಂದ ದೂರುಗಳು ಬಂದಿದ್ದವು. ಯಾವ ನಿಯಮವನ್ನು ದೇವಸ್ಥಾನವನ್ನು ಸ್ವಾಧೀನಗೊಳಿಸಲು ಕಾಂಗ್ರೆಸ್ ಸರಕಾರ ಪ್ರಯತ್ನಿಸುತ್ತಿದೆ ಅದೇ ನಿಯಮ ಕಾಂಗ್ರೆಸ್ಗೆ ಸಹ ಅನ್ವಯಿಸಿದರೆ ಕಾಂಗ್ರೆಸ್ನವರಿಗೆ ನಡೆಯಬಹುದೇ ? -ಸಂಪಾದಕರು) ಜನರ ಹಿತಕ್ಕಾಗಿ ಸರಕಾರ ಜಮ್ಮುವಿನಲ್ಲಿ ಶ್ರೀ ವೈಷ್ಣೋದೇವಿ ದೇವಸ್ಥಾನದ ಮಂಡಳಿಯಂತೆಯೇ ಈ ದೇವಸ್ಥಾನದ ಆಡಳಿತವನ್ನು ಸರಕಾರ ತೆಗೆದುಕೊಳ್ಳಬಹುದು, ಎಂದು ಹೇಳಲಾಗುತ್ತಿದೆ.
#RajasthanNews: मेहंदीपुर बालाजी मंदिर के महंत किशोरपुरी महाराज की अंतिम विदाई @DausaZee @ashish982921271 #MehndipurBalaji pic.twitter.com/k87ULtzLVq
— ZEE Rajasthan (@zeerajasthan_) August 9, 2021

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ