ಮತಾಂತರ ನಿರ್ಬಂಧ ಕಾನೂನು ತರಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
|
* ಒಳ್ಳೆಯ ಜೀವನ, ಮಕ್ಕಳ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಮಾಡಿಕೊಡುವುದಾಗಿ ಆಮಿಷ ! * ಮೋದಿ ಸರಕಾರವು ಹಿಂದೂಗಳ ಮತಾಂತರವನ್ನು ತಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಕಠೋರ |

ವಾರಾಣಸಿ (ಉತ್ತರಪ್ರದೇಶ)– ಇಲ್ಲಿನ ಫೂಲಪೂರ ಪೊಲೀಸ್ ಠಾಣೆಯ ಕ್ಷೇತ್ರಕ್ಕೆ ಸೇರಿದ ಕರಖಿಯಾವ ಎಂಬ ಊರಿನಲ್ಲಿ ಒಂದು ಹಿಂದೂ ಕುಟುಂಬವನ್ನು ಮತಾಂತರಿಸಲು ಪ್ರಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ವಿಜಯ ಕುಮಾರ ಹಾಗೂ ಕಿರಣ ಎಂಬ ದಂಪತಿ ಹಾಗೂ ತಮಿಳುನಾಡಿನ ಕನ್ಯಾಕುಮಾರಿಯಿಂದ ಬಂದಿರುವ ನೀಲ ತುರೈ ಎಂಬುದು ಬಂಧಿತ ಆರೋಪಿಗಳ ಹೆಸರುಗಳಾಗಿವೆ. (ಕ್ರೈಸ್ತ ಮತಕ್ಕೆ ಮತಾಂತರಗೊಂಡರೂ ಕೂಡ ತಮ್ಮ ಹಿಂದೂ ಹೆಸರನ್ನು ಬದಲಾಯಿಸುವುದಿಲ್ಲ; ಏಕೆಂದರೆ ಅವರಿಗೆ ಇತರ ಹಿಂದೂಗಳನ್ನು ಮತಾಂತರಗೊಳಿಸಲು ಸುಲಭವಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು) ಹಿಂದು ಜಾಗರಣಾ ಮಂಚನ ಪ್ರಾದೇಶಿಕ ಮಂತ್ರಿ ಗೌರೀಶ ಸಿಂಹರವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು.
ಮೂವರು ಆರೋಪಿಗಳು ಕರಖಿಯಾವ ಎಂಬ ಊರಿನಲ್ಲಿ ಲಾಲಜೀ ವಿಶ್ವಕರ್ಮ ಎಂಬ ಹೆಸರಿನ ಹಿಂದೂವಿನ ಮನೆಗೆ ಬಂದಿದ್ದರು. ಅವರು ಕುಟುಂಬದವರಿಗೆ ಒಳ್ಳೆಯ ಜೀವನ, ಮಕ್ಕಳಿಗೆ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಇತ್ಯಾದಿಯ ಆಮಿಷ ತೋರಿಸಿದ್ದರು. ಪೊಲೀಸರು ಆರೋಪಿಗಳ ಮೇಲೆ ಅಪರಾಧ ನೋಂದಾಯಿಸಿದ್ದಾರೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath