ಸಾತಾರ ಜಿಲ್ಲೆಯ ಹಿಂದುತ್ವನಿಷ್ಠರಲ್ಲಿ ಪಿತೃಛಾಯೆ ಕಳೆದುಕೊಂಡ ಭಾವನೆ

ಸಾತಾರ ( ಮಹಾರಾಷ್ಟ್ರ) – ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಗೋವಿಂದ ಪುಖರಾಜ ಗಾಂಧಿ (ವಯಸ್ಸು 71 ವರ್ಷ) ಇವರು ಅಲ್ಪಕಾಲೀನ ಕಾಯಿಲೆಯಿಂದ ನಿಧನರಾದರು. ರಾಜಸ್ಥಾನದ ಪ್ರವಾಸದಲ್ಲಿರುವಾಗ ಜಯಪುರದಲ್ಲಿ ಈ ಘಟನೆ ನಡೆದಿದೆ. ನ್ಯಾಯವಾದಿ ಗೋವಿಂದ ಗಾಂಧಿ ಇವರ ಅನಿರೀಕ್ಷಿತ ನಿಧನದಿಂದ ಸಾತಾರ ಜಿಲ್ಲೆಯ ಹಿಂದುತ್ವನಿಷ್ಠರು ದುಃಖ ಪರಿತಾಪದಿಂದ ಮರುಗುತ್ತಿದ್ದಾರೆ. ಇವರ ನಂತರ ಮಗ ಉಮೇಶ ಗಾಂದಿ, 2 ಹೆಣ್ಣು ಮಕ್ಕಳು, 2 ಅಳಿಯಂದಿರು ಮತ್ತು ಮೊಮ್ಮಕ್ಕಳು ಹೀಗೆ ಕುಟುಂಬ ಇದೆ. ಆಗಸ್ಟ್ 4 ರಂದು ಅವರ ಮೃತದೇಹವನ್ನು ಸಾತಾರಾ ಕ್ಕೆ ತರುವವರಿದ್ದು ಶಾಹುಪುರಿಯಲ್ಲಿನ ದೇಶಪಾಂಡೆ ಮಾರುತಿ ಬಳಿಯ ಅವರ ನಿವಾಸ ಸ್ಥಾನದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಸಂಗಮ ಮಾಹುಲಿಯಲ್ಲಿನ ಕೈಲಾಸ ಸ್ಮಶಾನ ಭೂಮಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಮಾಡಲಾಗುವುದು. 50 ವರ್ಷಗಳಗಿಂತಲೂ ಹೆಚ್ಚುಕಾಲದಿಂದ ತನು, ಮನ ಧನದಿಂದ ನಿರಂತರವಾಗಿ ಹಿಂದೂ ಸಂಘಟನೆಯ ಕಾರ್ಯವನ್ನು ಮಾಡಿರುವ ನ್ಯಾಯವಾದಿ ಗೋವಿಂದಜಿ ಗಾಂಧಿ ಇವರ ನಿಧನದಿಂದ ಸಾತಾರ ಜಿಲ್ಲೆಯ ಹಿಂದುತ್ವನಿಷ್ಠರಲ್ಲಿ ಪಿತೃಛಾಯೆಯನ್ನು ಕಳೆದುಕೊಂಡಂತಹ ಭಾವನೆಯು ಉದ್ಭವಿಸಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ