ವಿಶೇಷ ಗೋ ರಕ್ಷಣಾ ಪಡೆಯನ್ನು ಸ್ಥಾಪಿಸುವುದು ಉತ್ತಮ ನಿರ್ಧಾರವಾಗಿದೆ; ಆದರೆ, ಪಡೆಯಿಂದ ಪ್ರಾಮಾಣಿಕವಾಗಿ ಕೆಲಸವೂ ಆಗಬೇಕು ಈ ಕಡೆಯೂ ಸರಕಾರವು ಗಮನ ಹರಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಚಂಡಿಗಡ : ಹರಿಯಾಣಾ ಸರಕಾರವು ಗೋ ಕಳ್ಳಸಾಗಣೆ, ಗೋಹತ್ಯೆ ಮತ್ತು ಬೀದಿ ಪ್ರಾಣಿಗಳ ಓಡಾಟಗಳನ್ನು ತಡೆಗಟ್ಟಲು ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ‘ಸ್ಪೆಶಲ್ ಕೌ ಪ್ರೊಟೆಕ್ಷನ್ ಟಾಸ್ಕ ಫೋರ್ಸ್’ಅನ್ನು (ವಿಶೇಷ ಗೋರಕ್ಷಣಾ ಕೃತಿ ಪಡೆ)ಸ್ಥಾಪಿಸಲಾಗಿದೆ. ಇದರಲ್ಲಿ ಆಡಳಿತ ಅಧಿಕಾರಿಗಳು, ಪೊಲೀಸರೊಂದಿಗೆ ಗೋ ರಕ್ಷಕರು ಮತ್ತು ಗೋಸೇವಕರನ್ನು ಸೇರಿಸಲಾಗುವುದು. ಈ ಸಂಬಂಧದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಈ ಪಡೆಯಲ್ಲಿ ರಾಜ್ಯ ಮಟ್ಟದಲ್ಲಿ ೬ ಮತ್ತು ಜಿಲ್ಲಾ ಮಟ್ಟದಲ್ಲಿ ೧೧ ಸದಸ್ಯರು ಇರಲಿದ್ದಾರೆ.
#Haryana government sets up state level special task force for #cowprotectionhttps://t.co/6XqKPWsjOJ
— DNA (@dna) July 30, 2021
ಕಾಂಗ್ರೆಸ್ ಪಕ್ಷವು ಗೋರಕ್ಷಕ ಮತ್ತು ಗೋಸೇವಕರನ್ನು ಈ ಪಡೆಯಲ್ಲಿ ಸೇರಿಸಿದ್ದಕ್ಕೆ ಟೀಕಿಸಿದೆ. ಕಾಂಗ್ರೆಸ್ ವಕ್ತಾರ ರಂಜಿತಾ ಮೆಹ್ತಾ ಇವರು, ‘ಗೋರಕ್ಷಕರು ಗೋ ಕಳ್ಳ ಸಾಗಾಟಗಾರರಿಂದ ಸುಲಿಗೆಯನ್ನು ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ, ಆದ್ದರಿಂದ, ಸರಕಾರಿ ಪಡೆಗಳಲ್ಲಿ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳನ್ನು ಮಾತ್ರ ಸೇರಿಸಿಕೊಳ್ಳಬೇಕು. ಗೋರಕ್ಷಕರಿಗೆ ಇದರಲ್ಲಿ ಸ್ಥಾನ ನೀಡಬಾರದು. ಒಳ್ಳೆಯ ಚಾರಿತ್ರ್ಯವನ್ನು ಹೊಂದಿರುವವರನ್ನು ಮಾತ್ರ ಅದರಲ್ಲಿ ಸೇರಿಸಬೇಕು ಎಂದು ಹೇಳಿದರು.

ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ