ಇಂದಿನವರೆಗೂ ಅನೇಕ ಭಯೋತ್ಪಾದನೆಯ ಪ್ರಕರಣಗಳಲ್ಲಿ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶಿ ಮುಸಲ್ಮಾನರು ಭಾಗವಹಿಸಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಅಂತಹವರಿಗೆ ಆಧಾರ ಕಾರ್ಡ್ ಇತ್ಯಾದಿಗಳನ್ನು ನೀಡಿದ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳ ಮೇಲೆ ದೇಶದ್ರೋಹದ ಅಪರಾಧವನ್ನು ನೋಂದಾಯಿಸಿ ಅವರನ್ನು ಆಜೀವ ಕಾರಾಗೃಹದಲ್ಲಿಡಬೇಕು !

ಗಾಝಿಯಾಬಾದ್ (ಉತ್ತರಪ್ರದೇಶ) – ಸರಕಾರೀ ಅಧಿಕಾರಿಗಳು ನಕಲಿ ಕಾಗದಪತ್ರಗಳ ಆಧಾರದ ಮೇಲೆ ರೊಹಿಂಗ್ಯಾ ಹಾಗೂ ಬಾಂಗ್ಲಾದೇಶೀ ನುಸುಳುಕೋರ ಮುಸಲ್ಮಾನರಿಗೆ ಪ್ರಧಾನಮಂತ್ರಿ ನಿವಾಸ ಯೋಜನೆಯ ಲಾಭವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ಭಾಜಪದ ಶಾಸಕರಾದ ನಂದಕಿಶೋರ ಗುರ್ಜರರು ಆರೋಪಿಸಿದ್ದಾರೆ. ಶಾಸಕ ಗುರ್ಜರರವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆ ಲಾಭಾರ್ಥಿಗಳ ಸಂಖ್ಯೆಯು ಶೇಕಡ 70ಕ್ಕಿಂತ ಹೆಚ್ಚಾಗಿದ್ದು ಈ ಪ್ರಕರಣದ ಮೇಲೆ ತಕ್ಷಣ ವಿಚಾರಣೆ ನಡೆಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.
प्रधानमंत्री आवास योजना: दिल्ली के नजदीक रोहिंग्या और बांग्लादेशियों को दिए गए मकान?https://t.co/D2IbNcI8sQ
— India TV Hindi (@IndiaTVHindi) July 28, 2021
ಶಾಸಕರಾದ ಗುರ್ಜರರು ಸಂಬಂಧಪಟ್ಟ ವಿಭಾಗದಿಂದ ಈ ವಿಷಯದ ಮೇಲೆ ಮಾಹಿತಿಯನ್ನು ತರಿಸಿಕೊಂಡು ನೋಡಿದಾಗ ಅದರಲ್ಲಿ ಮೇಲೆ ನೀಡಿದ ಮಾಹಿತಿಯು ಸ್ಪಷ್ಟವಾಯಿತು. ಈ ರೀತಿಯ ನಕಲಿ ಕಾಗದಪತ್ರಗಳ ಆಧಾರ ಮೇಲೆ ಆಧಾರ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಹಾಗೂ ಪರಿಚಯ ಪತ್ರವನ್ನು ಪಡೆದುಕೊಂಡಿರುವವರೆಲ್ಲರ ತಪಾಸಣೆ ಮಾಡಿ ಅದನ್ನು ರದ್ದು ಪಡಿಸಬೇಕು, ಹಾಗೂ ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ರಾಷ್ಟ್ರೀಯ ಸುರಕ್ಷಾ ಕಾನೂನಿನ ಅಂತರ್ಗತವಾಗಿ ಕಠಿಣ ಕಾರ್ಯಾಚರಣೆ ನಡೆಸುವಂತಾಗಬೇಕು, ಎಂಬ ಬೇಡಿಕೆಯನ್ನೂ ಗುರ್ಜರರು ಸಲ್ಲಿಸಿದ್ದಾರೆ.
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ